ತಮ್ಮ ಮೊಬೈಲ್ ಪಾಸ್​ವರ್ಡ್​ ಚೇಂಜ್ ಮಾಡಿದಕ್ಕೆ ಅಕ್ಕ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಗಾಣಿಗರಪೇಟೆಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ರುಚಿತಾ ಅಂಥ ತಿಳಿದು ಬಂದಿದೆ, ರುಚಿತ ಮೊಬೈಲ್​ ಫೋನ್​ಗೆ ಅಡಿಕ್ಟ್ ಆಗಿದ್ದಳು, ಅಕ್ಕನಿಗೆ ಬುದ್ದಿ ಕಲಿಸಲು ಆಕೆ ತಮ್ಮ ಮೊಬೈಲ್ ಪಾಸ್​ವರ್ಡ್ ಬದಲಾವಣೆ ಮಾಡಿದ್ದ ಎನ್ನಲಾಗಿದೆ.
ಈ ವೇಳೇ ರಂಜಿತ ತಮ್ಮನನ್ನು ಪಾಸ್‌ವರ್ಡ್ ಹೇಳುವಂತೆ ಕೇಳಿದ್ದರು ಕೂಡ ಆತ ಹೇಳಲಿಲ್ಲ ಎನ್ನಲಾಗಿದೆ. ಇದರಿಂದ ಮನನೊಂದ ರುಚಿತ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡಿದ್ದ ರುಚಿತಳಾನ್ನು ಉಳಿಸುವ ಸಲುವಾಗಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಆದರೆ ಆ ಹೊತ್ತಿಗೆ ರುಚಿತ ಪ್ರಾಣವನ್ನುಕಳೆದುಕೊಂಡಿದ್ದು, ಕಾನೂನು ಪ್ರಕಾರ ಮುಂದಿನ ಕ್ರಮಕ್ಕಾಗಿ ಆಸ್ಪತ್ರೆಯವರು ಜಿಲ್ಲಾಸ್ಪತ್ರೆಗೆ ರುಚಿತಳ ಶವವನ್ನು ತೆಗೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

error: Content is protected !!