ತಂದೆಯನ್ನೇ ಮಗ ಕೊಲೆ ಮಾಡಿ ದೇಹವನ್ನು ಕತ್ತರಿಸಿ ಬಿಸಾಡಿರುವ ಅಮಾನವೀಯ ಘಟನೆ ಪಶ್ಚಿಮ ಬಂಗಾಳದ ಬರುಯಿಪುರದಲ್ಲಿ ನಡೆದಿದೆ.
ಮೃತ ವ್ಯಕ್ತಿ ಮಾಜಿ ನೌಕಾಪಡೆಯ ಉಜ್ವಲ್ ಚಕ್ರವರ್ತಿ (55) ಎಂದು ಗುರುತಿಸಲಾಗಿದೆ. ಅನುಮಾನದ ಆಧಾರದ ಮೇಲೆ ಪೊಲೀಸ​ರು ತಾಯಿ-ಮಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.
ಮೃತನ ಪುತ್ರ ಜಾಯ್​ ಪಾಲಿಟೆಕ್ನಿಕ್‌ ಓದುತ್ತಿದ್ದಾನೆ. ಪರೀಕ್ಷಾ ಶುಲ್ಕ್​ ತುಂಬಲು 3,000 ರೂಪಾಯಿ ತಂದೆ ಬಳಿ ಕೇಳಿದ್ದಾನೆ. ಉಜ್ವಲ್ ಚಕ್ರವರ್ತಿ ಹಣ ಕೊಡಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಜಾನ್​ ತಂದೆ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಶ್ಯಾಮಲಿ ಮತ್ತು ಮಗ ಜಾಯ್ ನನ್ನು ಪೊಲೀಸರು ಬಂಧಿಸಿದ್ದಾರೆ.
12 ವರ್ಷಗಳ ಹಿಂದೆ ಉಜ್ವಲ್ ಚಕ್ರವರ್ತಿ ಅವರು ನೌಕಪಡೆಯಿಂದ ನಿವೃತ್ತಿಯಾಗಿದ್ದರು. ತಂದೆಯನ್ನು ಕೊಲೆಗೈದ ಬಳಿಕ ತಾಯಿಯ ನೆರವಿನೊಂದಿಗೆ ಮೃತದೇಹವನ್ನು ಮಗ ಬಾತ್​​ ರೂಮ್​​ ಗೆ ಎಳೆದುಕೊಂಡು ಹೋಗಿದ್ದನು. ಅಲ್ಲಿಯೇ ಆರೋಪಿ ತನ್ನ ಕಾರ್ಪೆಂಟ್ರಿ ಕ್ಲಾಸ್ ಕಿಟ್ ಬ್ಯಾಗ್‌ ನಿಂದ ಹ್ಯಾಕ್ಸಾ ಬ್ಲೆಡ್​​ ಅನ್ನು ಬಳಸಿ ದೇಹವನ್ನು ಆರು ತುಂಡುಗಳಾಗಿ ಕತ್ತರಿಸಿದ್ದ. ನಂತರ ಅವುಗಳನ್ನು ತನ್ನ ಮನೆಯ 500 ಮೀಟರ್​ ದೂರದ ಪ್ರದೇಶದಲ್ಲಿ ಎಸೆದಿದ್ದನು. ಸದ್ಯ ಮೃತದೇಹದ ಭಾಗಗಳಿಗಾಗಿ ಹುಡುಕಾಟ ನಡೆಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

error: Content is protected !!