ಬಸವನ ಬಾಗೇವಾಡಿ: ತಾಲೂಕಿನ ಬೇನಾಳ (ಎನ್ ಹೆಚ್) ಗ್ರಾಮದ ಮಹಿಳೆಯರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟದ ಅಂಗಡಿಗಳು ದಿನನಿತ್ಯ ಹೆಚ್ಚಾಗುತ್ತಿದ್ದು. ಇದರಿಂದ ನಮ್ಮ ಗಂಡಂದಿರು ದಿನಾಲೂ ಕುಡಿದು ಬಂದು ನಮಗೆ ಹೊಡೆಯುತ್ತಾರೆ.ದಿನನಿತ್ಯ ಕಿರುಕುಳ ಕೊಡುತ್ತಿದ್ದಾರೆ.
ನಮ್ಮ ಗಂಡಂದಿರು ದಿನನಿತ್ಯ ಕುಡಿದು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿತ್ತು ಹೊಡೆದು ಬಡಿದು ಮಾಡುತ್ತಿದ್ದಾರೆ.ನಾವು ದಿನಾಲು ಕೂಲಿ ನಾಲಿ ಮಾಡಿ ಬದುಕು ಸಾಗಿಸುತ್ತಿದ್ದೇವೆ.
ನಮ್ಮ ಗಂಡಂದಿರು ಕೊಡುವ ಕಾಟಕ್ಕೆ ಸಾಕಾಗಿ ಹೋಗಿದೆ. ಹೀಗಾಗಿ ನಾವು ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಸಹ ಯತ್ನಿಸಿದ್ದಾರೆ.ಅವರಿಗೆ ಅಬಕಾರಿ ಇಲಾಖೆಯ ಅಧಿಕಾರಿಗಳ ಅಂಜಿಕೆಯು ಸಹ ಇರುವುದಿಲ್ಲ. ಹೀಗಾಗಿ ನಮ್ಮ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮಧ್ಯ ಮಾರಾಟವನ್ನು ತಡೆಯುವ ದಕ್ಷ ಅಧಿಕಾರಿಗಳು ಇಲ್ಲದಂತಾಗಿದೆ.ಆದಷ್ಟು ಬೇಗ ಅಕ್ರಮ ಮದ್ಯ ಮಾರಾಟವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಉಗ್ರವಾಗಿ ಪ್ರತಿಭಟನೆ ಮಾಡುವುದರ ಮುಖಾಂತರ ಎಚ್ಚರಿಕೆ ನೀಡಿದರು.ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.

ವರದಿ:ಸಂಗಪ್ಪ ಚಲವಾದಿ

error: Content is protected !!