ಕಲಬುರಗಿಯ ಸುಪರ್ ಮಾರುಕಟ್ಟೆ ಪ್ರದೇಶದಲ್ಲಿ ನಡೆದ ಘಟನೆ. ಮಾರಕಾಸ್ತ್ರ ಹಿಡಿದು ಜನರಿಗೆ ಹೆದರಿಸುತ್ತಿದ್ದ ವ್ಯಕ್ತಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಸುಮಾರು ಒಂದು ಗಂಟೆಯಿಂದ ತಲವಾರು ಹಿಡಿದು ಜನಸಾಮಾನ್ಯರಿಗೆ ಹವಾಜು ಹಾಕುತ್ತಿದ್ದ ಅಬ್ದುಲ್ ಜಾಫರ್ ಸಾಬ್ ಎಂಬುವನನ್ನು ಪೊಲೀಸರು ನಿಯಂತ್ರಿಸಲು ಮುಂದಾದ ಸಂದರ್ಭದಲ್ಲಿ ಮಾತನ್ನು ಕೇಳದ ಕಾರಣ ಆತನ ಕಾಲಿಗೆ ಪಿ ಎಸ್ ಐ ವಾಹಿದ್ ಕೊತ್ವಾಲ್ ರವರು ಗುಂಡನ್ನು ಆರಿಸಿದ್ದಾರೆ. ಸದ್ಯ ಈ ಘಟನೆಯಾ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲಾಗಿದೆ.