ಕೊಟ್ಟೂರು:- ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದವರ ವಿರುದ್ಧ ಪಿಎಸ್ಐ ಗೀತಾಂಜಲಿ ಶಿಂಧೆ ಹಾಗೂ ತಂಡದವರು ದಾಳಿ ಮಾಡಿ ಮಂಗಳವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪಟ್ಟಣದ ವಾಲ್ ಕಟ್ಟೆ ಹತ್ತಿರ ಹಾಗೂ ಪಿಎಲ್ ಡಿ ಬ್ಯಾಂಕ್ ಮುಂಭಾಗದಲ್ಲಿ ಎರಡು ಕಡೆ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ನಡೆಸುತ್ತಿರುವರೆಂದು ಖಚಿತ ಮಾಹಿತಿ ಮೇರೆಗೆ ಜಿಲ್ಲಾ ವರಿಷ್ಠಾಧಿಕಾರಿಗಳಾದ ಶ್ರೀ ಹರಿಬಾಬು ಹಾಗೂ ಡಿಎಸ್ ಪಿ ಮಲ್ಲೇಶಪ್ಪ ಮಲ್ಲಾಪುರ ರವರ ಮಾರ್ಗದರ್ಶನದಲ್ಲಿ ಪಿಎಸ್ಐ ಗೀತಾಂಜಲಿ ಶಿಂಧೆ ಮತ್ತು ತಂಡದವರ ಜೊತೆ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿರುವವರ ಮೇಲೆ ದಾಳಿ ಮಾಡಿ ಒಟ್ಟು 13 ಜನರ ವಶಕ್ಕೆ ಪಡೆದು ಅವರ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಿಸಿ 40 ಸಾವಿರ ಬೆಲೆ ಬಾಳುವ ಎರಡು ಸ್ಕ್ರೀನ್ ಟಚ್ ಮೊಬೈಲ್, 2200 ನಗದು ಹಣ, ಜಪ್ತಿ ಮಾಡಲಾಗಿದ್ದು ಈ ಬಗ್ಗೆ ಕೊಟ್ಟೂರು ಠಾಣೆಯಲ್ಲಿ ಗುನ್ನೆ ನಂಬರ್.54/2024 ಕಲಂ 78(1)(ಎ) (6) ಕೆ ಪಿ ಯಾಕ್ಟ್ ರೀತ್ಯ ಪ್ರಕರಣ ದಾಖಲಾಗಿದೆ.

ವರದಿ:- ಮಣಿಕಂಠ. ಬಿ

error: Content is protected !!