ಅಫಜಲಪೂರ : ತಾಲೂಕಿನ ಭೈರಾಮಡಗಿ ಗ್ರಾಮದಲ್ಲಿರುವ ಕೆರೆಯ ಹೂಳೆತ್ತುವ ನೆಪದಲ್ಲಿ ಮಣ್ಣು ಮಾಫಿಯಾ ಸದ್ದಿಲ್ಲದೆ ನಡೆಯುತ್ತಿದೆ. ಕೆರೆಯ ಅಂಗಳದಲ್ಲಿ ಘರ್ಜಿಸುತ್ತಿರುವ ಜೆಸಿಬಿಗಳು ಲೋಡ್ಗಳ ಮೇಲೆ ಲೋಡ್ ಸಾಗುಸುತ್ತಿರುವ ಟಿಪ್ಪರ್ ಮತ್ತು ಟ್ರ್ಯಾಕ್ಟರ್ ಗಳು ಮೇಲ್ನೋಟಕ್ಕೆ ಕೆರೆಯ ಹೂಳೆತ್ತುವ ಕೆಲಸ ಆದರೆ ನಡೆಯುತ್ತಿರುವುದು ಮಾತ್ರ ಮಣ್ಣು ಮಾಫಿಯಾ? ಅದಲ್ಲದೆ ಭಾರಿ ಧೂಳಿನಿಂದ ಸುತ್ತಮುತ್ತಲಿನ ಬೆಳಗು ಹಾನಿಯಾಗುತ್ತಿದೆ ಇಲ್ಲಿನ ಅಧಿಕಾರಿಗಳು ಮಾತ್ರ ಘಾಡ್ ನಿದ್ರೆಯಲ್ಲಿದ್ದಾರೆಯೇ ಎನ್ನಿಸುತ್ತಿದೆ? ಈಗಲಾದರು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಅಕ್ರಮ ಮಣ್ಣು ಗಣಿಗಾರಿಕೆ ಮಾಡುತ್ತಿರುವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ವರದಿ: ಸಂಗಮೇಶ ಸರಡಗಿ