ಬೆಂಗಳೂರು: ಪ್ರತಿಷ್ಠಿತ ಭೀಮಾ ಜ್ಯುವೆಲ್ಲರ್ಸ್ ಮಾಲೀಕರ ಪುತ್ರ ವಿಷ್ಣು ಭಟ್ ಅವರನ್ನು ಹೆಚ್‌ಎಸ್‌ಆರ್ ಲೇಔಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಹೋಟೆಲ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.

ಹೋಟೆಲ್ ಎದುರು ಗಲಾಟೆ – ಪುನಾವೃತವಾದ ಘಟನೆ

ಫೆಬ್ರವರಿ 7ರಂದು, ಬೆಂಗಳೂರಿನ ಒಂದು ಹೋಟೆಲ್ ಬಳಿ ವಿಷ್ಣು ಭಟ್ ಗಲಾಟೆ ಮಾಡಿದ್ದರೆಂದು ಮಾಹಿತಿ ದೊರಕಿದೆ. ಈ ಘಟನೆ ಮರೆತು ಹೋಗುವಷ್ಟರಲ್ಲಿಯೇ, ಫೆಬ್ರವರಿ 26ರಂದು ಅವರು ಮತ್ತೆ ಅದೇ ಹೋಟೆಲ್ ಗೆ ತೆರಳಿ, ವಿನಾಕಾರಣ ಜಗಳ ಆರಂಭಿಸಿದರು. ಈ ವೇಳೆ ಕಬ್ಬಿಣದ ವಸ್ತುವಿನಿಂದ ಹೋಟೆಲ್ ಸಿಬ್ಬಂದಿಗೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾನೂನು ಕ್ರಮ

ಹಲ್ಲೆಗೊಳಗಾದ ಹೋಟೆಲ್ ಸಿಬ್ಬಂದಿ, ತಕ್ಷಣವೇ ಹೆಚ್‌ಎಸ್‌ಆರ್ ಲೇಔಟ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಷ್ಣು ಭಟ್ ಅವರನ್ನು ಬಂಧಿಸಿದ್ದಾರೆ.

ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.

error: Content is protected !!