ಭಟ್ಕಳದಲ್ಲಿ ಅಕ್ರಮ ಜಾನುವಾರು ಸಾಗಾಟವನ್ನು ತಡೆದು, ಭಟ್ಕಳ ಪೊಲೀಸರು 17 ಕೋಣಗಳನ್ನು ರಕ್ಷಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಅರೆಸ್ಟ್ ಆಗಿದ ಇಬ್ಬರು ಆರೋಪಿಗಳು

ಅಕ್ರಮದಲ್ಲಿ ಭಾಗಿಯಾಗಿದ್ದ ಹಾವೇರಿ ಜಿಲ್ಲೆಯ ಅಕ್ಕಿಹಾಲೂರಿನ ಜೈನುಲ್ಲಾ ಚಮನ್ ಶಾಬ್ (28) ಮತ್ತು ಇಮಾಮ್ ಹುಸೇನ್ ಮೌಲಾಲಿ ಶಾಬ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಯಾವುದೇ ಪರವಾನಿಗೆ ಇಲ್ಲದೇ 17 ಕೋಣಗಳನ್ನು ಲಾರಿಯಲ್ಲಿ ಸಾಗಿಸುತ್ತಿದ್ದ ಇಬ್ಬರು, ಶಿರಾಲಿ ಬಳಿ ಅರೆಸ್ಟ್ ಆಗಿದ್ದಾರೆ.

ಕಾರ್ಯಾಚರಣೆಯ ವೇಳೆ ಎರಡು ಕೋಣಗಳ ದುರ್ಮರಣ

ಪೊಲೀಸರು 15 ಕೋಣಗಳನ್ನು ಸುರಕ್ಷಿತವಾಗಿ ರಕ್ಷಿಸಿದರೂ, ಅಕ್ರಮ ಸಾಗಣೆಯಲ್ಲಿ ಎರಡು ಕೋಣಗಳು ಉಸಿರುಗಟ್ಟಿ ಸಾವನ್ನಪ್ಪಿದವು. ಈ ದೃಶ್ಯ ಸ್ಥಳದಲ್ಲಿದ್ದವರನ್ನು ಕಳವಳಗೊಳಿಸಿತು. ಉಳಿದ ಜಾನುವಾರುಗಳಿಗೆ ಮೇವು ಮತ್ತು ನೀರು ನೀಡಿ, ಸೂಕ್ತ ಆರೈಕೆ ಮಾಡಲಾಗಿದೆ.

ಹಿಂದು ಜಾಗರಣ ವೇದಿಕೆಯ ಮಾಹಿತಿ

ಹಿಂದು ಜಾಗರಣ ವೇದಿಕೆ ಅಧ್ಯಕ್ಷರಿಗೆ ಈ ಕುರಿತು ಮಾಹಿತಿ ಬಂದಿತ್ತು. ಸಂಘಟನೆಯ ಸಂಚಾಲಕ, ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸೇರಿ ವಾಹನ ತಡೆದು, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ಒಪ್ಪಿಸಿದರು.

ಪೊಲೀಸರ ಕಾರ್ಯಾಚರಣೆ

ಈ ಕಾರ್ಯಾಚರಣೆಯಲ್ಲಿ ಪಿಎಸೈ ರನ್ನ ಗೌಡ ಪಾಟೀಲ ಮತ್ತು ಭರ್ಮಪ್ಪ ಬೆಳಗಲಿ ಪ್ರಮುಖ ಪಾತ್ರವಹಿಸಿದರು.
ಪೊಲೀಸ್ ಸಿಬ್ಬಂದಿ ವಿನೋದ ಕುಮಾರ ರೆಡ್ಡಿ, ಮಂಜು ಖಾರ್ವಿ, ವೀರಣ್ಣ ಬಳ್ಳಾರಿ, ಕಿರಣ ತಿಲಗಂಜಿ ಮತ್ತು ಚಾಲಕ ದೇವರಾಜ ಮೊಗೇರ ಸಹ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

ಈ ಪ್ರಕರಣದ ತನಿಖೆ ಮುಂದುವರಿದಿದ್ದು, ಅಕ್ರಮ ಜಾನುವಾರು ಸಾಗಾಟಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

Leave a Reply

Your email address will not be published. Required fields are marked *

Related News

error: Content is protected !!