ಇಂಡಿ: ತಾಲೂಕಿನ ಬುಯ್ಯಾರ ಗ್ರಾಮದಲ್ಲಿ ಸವರ್ಣಿಯರಿಂದ ದಲಿತರ ಮೇಲೆ ಹಲ್ಲೆ ಹಾಗೂ ಜಾತಿ ನಿಂದನೆ! ನಿನ್ನೆ ಸಾಯಂಕಾಲ ಸುಮಾರು ಆರು ಗಂಟೆಗೆ ಕ್ಷುಲ್ಲಕ ಕಾರಣಕ್ಕಾಗಿ ದಲಿತ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ದಲಿತ ಯುವಕ ತಾನು ತನ್ನ ಶರ್ಟ್ ಕಾಲರ್ ಅನ್ನು ಸರಿಪಡಿಸಿ ಕೊಳ್ಳುವ ಸಮಯದಲ್ಲಿ, ಊರಿನ ಕೆಲವು ಸವರ್ಣಿಯರ ಗುಂಪೊಂದು, ನಮಗೆ ನೋಡಿ ಶರ್ಟ್ ಕಾಲರ ಏರಿಸುತ್ತಿಯಾ.?, ಎಂದು ಅವಾಚ್ಯವಾಗಿ ಬೈದು, ಜಾತಿ ನಿಂದನೆ ಮಾಡಿ ಹಿಗ್ಗಾ ಮುಗ್ಗ ಥಳಿಸಿರುವ ಘಟನೆ ಬುಯ್ಯಾರ ಗ್ರಾಮದಲ್ಲಿ ನಡೆದಿದೆ.
ಅದಲ್ಲದೆ ಪಿಸ್ತೂಲ್ ಗನ್, ಮಚ್ಚು, ತೋರಿಸಿ. ನೀನೇನಾದರಾ ಪೊಲೀಸ್ ಹತ್ರ ಹೋದ್ರೆ ನಿನಗೂ ನಿನ್ನ್ ತಮ್ಮನಿಗೂ ಶೂಟ್ ಮಾಡುತ್ತೇನೆ ಎಂದು ಧಮ್ಕಿ ಹಾಕಿರುವ ಬಗ್ಗೆ ಸ್ವತಃ ಯುವಕನೇ ಹೇಳಿಕೊಂಡಿದ್ದಾನೆ. ಹಾಗೂ ಜಾತಿ ನಿಂದನೆ, ಮಾಡುವ ಜನರು ಇನ್ನು ಈ ದೇಶದಲ್ಲಿ ಇದಾರಾ… ಎಂದು ನೊಂದ ಯುವಕರು ಕೇಳಿದರೆ.
ನಾವು ಮೊದಲಾದರೂ ಒಂದು ಸಲ. ಅವರ ಮೇಲೆ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರುಕೊಟ್ಟಿರುತ್ತೇವೆ. ನಿನ್ನೆ ಸಹ ತಳವಾರ ಸಮಾಜದ ಯುವಕರ ಮೇಲೆ ಅಂದರೆ ಮಲ್ಲು ಕುಮಸಗಿ, ಪ್ರೀತಮ ಕುಮಸಗಿ, ರವಿ ಪಂಚಾಯತಿ. ಮಂಜುನಾಥ ಪಂಚಾಯತಿ, ಸಚಿನ ನಾಟಿಕಾರ, ಪರಶುರಾಮ ನಾಟಿಕಾರ, ರವಿ ದೊಡ್ಡಮನಿ, ಇನ್ನು ಅನೇಕರ ಮೇಲೆ ದೂರು ಕೊಟ್ಟಿದ್ದೇವೆ, ಆದರು ಇನ್ನು ಕ್ರಮ ಕೈಗೊಂಡಿಲ್ಲ. ಇದೆ ರೀತಿ ಆದರೆ ನಾವು ವಿಜಯಪುರ ಎಸ್, ಪಿ ಆಫೀಸ್ ಗೆ ಹೋಗುತ್ತೇವೆ ಎಂದು. ನೊಂದ ರೇವಮ್ಮ ಅರಕೇರಿ, ಆಕಾಶ ಅರಕೇರಿ, ಶ್ರೀಕಾಂತ ಅರಕೇರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ವರದಿ:ಸಂಗಪ್ಪ ಚಲವಾದಿ
ಜನರಿಗೆ ನ್ಯಾಯ ಕೊಡಿಸಬೇಕಿದ್ದ ಮಹಿಳೆಯರ ರಕ್ಷಣೆ ಮಾಡಬೇಕಿದ್ದ ಮಹಿಳೆಯರ ರಕ್ಷಣೆ ಸದಾ ಸಿದ್ದರಿರಬೇಕಾಗಿದ್ದ ಪೊಲೀಸ್ ಸಿಬ್ಬಂದಿಯೇ ತನ್ನ ಹೆಂಡತಿಯ ಶೀಲ…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕಾಮಗಾರಿ ಮಾಡಿದ ಬಿಲ್ ಮಾಡಿಕೊಡಲು ಗುತ್ತಿಗೆದಾರನ ಬಳಿ ಲಂಚ ಪಡೆಯುವಾಗ ಅಧಿಕಾರಿಗಳು ಲೋಕಾಯುಕ್ತ ಬಲೆಗೆ…
ಬೆಂಗಳೂರಿನ ದಾಸರಹಳ್ಳಿಯಲ್ಲಿ ಸಾಕು ತಂದೆಯೊಬ್ಬ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ತಲೆಮೆರೆಸಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಈ ಭೀಕರ…
ಕೃಷಿಕರಲ್ಲದವರಿಗೆ ಇನ್ನೂ ಕೃಷಿ ಭೂಮಿ ಸಿಗುವುದಿಲ್ಲ. ಬಿಜೆಪಿ ತಂದಿದ್ದ ಭೂ ಕಾಯ್ದೆ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ…
ಸೋನಾಗಾಚಿ ರೆಡ್ ಲೈಟ್ ಪ್ರದೇಶದ ಮಹಿಳೆಯೊಬ್ಬರು ಯುವ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯ ನಂತರ ಹೃದಯ ವಿದ್ರಾವಕ ಹೇಳಿಕೆಯೊಂದಿಗೆ…
ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಬಿಲಕೆರೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬಿಲಕೆರೂರ…