Latest

ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ: 29 ಮೋಟಾರ್ ಸೈಕಲ್ ಗಳು ವಶಕ್ಕೆ.

ಹೊಸಪೇಟೆ:- ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಹೊಸಪೇಟೆ ಪೊಲೀಸ್ ಠಾಣೆ ಸಿಬ್ಬಂದಿಯವರು ಬಂಧಿಸಿದ್ದಾರೆ ಹಾಗೂ ಕಳ್ಳತನವಾದ ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ.
01/09/2023 ರ ರಾತ್ರಿ 9:30 ರ ಸಮಯದಲ್ಲಿ ಹೊಸಪೇಟೆಯ ಮೆಹಬೂಬ್ ನಗರದ ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಟಿವಿಎಸ್ ಸ್ಟಾರ್ ಸಿಟಿ ಮೋಟಾರ್ ಸೈಕಲ್ ನಂ ಕೆಎ -35 ಇಬಿ -2324 (80,000 ರೂ) ಬೆಲೆ ಬಾಳುವ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ದಿನಾಂಕ 16-09-2023 ರ ರಾತ್ರಿ 10:00 ಗಂಟೆಗೆ ಬೈಕ್ ಮಾಲೀಕ ನೀಡಿದ್ದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ 17/09/2023 ರಂದು ಬೆಳಗಿನ ಜಾವ ಮೇಲ್ಕಂಡ ಪ್ರಕರಣದ ಪತ್ತೆ ಕಾರ್ಯದಲ್ಲಿ ತೊಡಗಿದ್ದ ಅಪರಾಧ ವಿಭಾಗದ ಎ ಎಸ್ ಐ ಶ್ರೀ ಬಿ ಎಂ ಸುರೇಶ್ ಹಾಗೂ ಸಿಬ್ಬಂದಿಯವರು ಠಾಣಾ ಸರಹದ್ದಿನಲ್ಲಿರುವ ಬಳ್ಳಾರಿ ರೋಡ್ ಸರ್ಕಲ್ ನಲ್ಲಿ ವಾಹನ ತಪಾಸಣೆ ಮತ್ತು ನಿಗಾವಣೆಯಲ್ಲಿದ್ದಾಗ ಎರಡು ಮೋಟಾರ್ ಸೈಕಲ್ ಗಳಲ್ಲಿ ಬಂದ ನಾಲ್ಕು ಜನ ಹುಡುಗರ ಮೇಲೆ ಅನುಮಾನ ಬಂದು ಹಿಡಿದುಕೊಂಡು ವಿಚಾರಣೆಗೆ ಒಳಪಡಿಸಿದಾಗ ತಾವು ತಂದಿರುವ ಮೋಟಾರ್ ಸೈಕಲ್ ಗಳು ಕಳ್ಳತನ ಮಾಡಿದ್ದವು ಎಂದು ತಿಳಿಸಿದರು.

ನಂತರ ಅವರನ್ನು ಠಾಣೆಗೆ ಕರೆದುಕೊಂಡು ಬಂದು ಕೂಲಂಕುಷವಾಗಿ ವಿಚಾರಣೆ ಮಾಡಲು ತಮ್ಮ ತಪ್ಪನ್ನು ಒಪ್ಪಿಕೊಂಡು ನಾವುಗಳು ಈಗೆ ಸುಮಾರು ಆರು ತಿಂಗಳು ಹಿಂದಿನಿಂದ ಹೊಸಪೇಟೆಯ ವಿವಿಧ ಸ್ಥಳಗಳಲ್ಲಿ ಹಾಗೂ ಇತರೆ ಬೇರೆ ಊರುಗಳಲ್ಲಿ ನಿಲ್ಲಿಸಿದ್ದ ಮೋಟಾರ್ ಸೈಕಲ್ ಗಳನ್ನು ಕಳ್ಳತನ ಮಾಡಿಕೊಂಡು ಬಂದು ಅವುಗಳ ನಂಬರ್ ಪ್ಲೇಟ್ ಕಿತ್ತುಹಾಕಿ ಬಣ್ಣಗಳನ್ನ ಬದಲಾಯಿಸಿ ವೀಲಿಂಗ್ ಮಾಡಲು ಉಪಯೋಗಿಸಿ ನಂತರ ಬೇರೆಯವರಿಗೆ ಮಾರಾಟ ಮಾಡಲು ಪ್ರಯತ್ನಿಸಿದ್ದೇವೆ ಎಂದು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು ಅವರುಗಳಿಂದ ವಿವಿಧ ಕಂಪನಿಯ ಒಟ್ಟು 14 ಮೋಟಾರ್ ಸೈಕಲ್ ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ತನಿಖೆಯ ನಂತರ ಆರೋಪಿತರನ್ನು ಮಾನ್ಯ ನ್ಯಾಯಾಲಯದ ಆದೇಶ ಪಡೆದು ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಪುನಃ ಆರೋಪಿತರನ್ನು ವಿಚಾರಣೆಗೆ ಒಳಪಡಿಸಿದಾಗ ಮತ್ತೆ ವಿವಿಧ ಕಂಪನಿಯ 15 ಮೋಟಾರ್ ಸೈಕಲ್ ಗಳು ಕಳ್ಳತನ ಮಾಡಿರುವುದು ಬೆಳಕಿಗೆ ತಂದರು ಒಟ್ಟಾರೆಯಾಗಿ 29 ಮೋಟಾರ್ ಸೈಕಲ್ ಗಳು ಬೆಲೆ 22.95 ಲಕ್ಷ ರೂಪಾಯಿ ಬೆಲೆ ಬಾಳುವ ಮೋಟಾರ್ ಸೈಕಲ್ ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಕಳ್ಳತನದಲ್ಲಿ ಪಾಲ್ಗೊಂಡಿದ್ದ ಆರೋಪಿಗಳಾದ ಸೋಹೆಲ್ 19ವರ್ಷ ಹೊಸಪೇಟೆ ನಿವಾಸಿ,ಹೊನ್ನೂರು ಸ್ವಾಮಿ 22ವರ್ಷ ಹೊಸಪೇಟೆ ನಿವಾಸಿ,ತಯಾಬ್ 19ವರ್ಷ ಹೊಸಪೇಟೆ ನಿವಾಸಿ,ಸಾಧಿಕ್ 19 ವರ್ಷ ಹೊಸಪೇಟೆ ನಿವಾಸಿ.

ಹೊಸಪೇಟೆ ಉಪ ವಿಭಾಗ ಡಿಎಸ್ಪಿ ಯವರಾದ ಶ್ರೀ ಟಿ.ಮಂಜುನಾಥ್ ರವರ ಮಾರ್ಗದರ್ಶನದಲ್ಲಿ ಪಟ್ಟಣ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಎಸ್ ಎಂ ಬಾಳನಗೌಡ ನೇತೃತ್ವದಲ್ಲಿ ಪಿಎಸ್ಐ ಗಳಾದ ಶ್ರೀ ಎಂ.ಮುನಿರತ್ನ,ಶ್ರೀ ಕೆ.ರಾಜಶೇಖರ್,ಹಾಗೂ ಎ ಎಸ್ ಐ ಶ್ರೀ ಬಿ.ಎಂ.ಸುರೇಶ್ ನೇತೃತ್ವದ ಪೊಲೀಸ್ ತಂಡವು ನಾಲ್ವರು ಮೋಟಾರ್ ಸೈಕಲ್ ಕಳ್ಳರನ್ನು ಬಂಧಿಸಿ 29 ಬೈಕುಗಳು ಸೇರಿ ಒಟ್ಟು 22.92ಲಕ್ಷ ರೂಪಾಯಿ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡ ಬಗ್ಗೆ ಹೊಸಪೇಟೆ ಠಾಣೆಯ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಜರುಗಿಸಿದರು.

ಈ ಒಂದು ಕಾರ್ಯಾಚರಣೆಯಲ್ಲಿ ಸಿಬ್ಬಂದಿಯವರಾದ ಕೆ.ಶ್ರೀ ರಾಮರೆಡ್ಡಿ, ಬಿ.ರಾಘವೇಂದ್ರ,ಲಿಂಗರಾಜ್,ಪರಶುನಾಯ್ಕಾ, ಜೆ.ಕೊಟ್ರೇಶ್, ಜೆ.ಫಕ್ಕೀರಪ್ಪ,ದೇವೇಂದ್ರಪ್ಪ,ಮಲಕಾಜಪ್ಪ,ಮಂಜುನಾಥ್,ಶಿವಪ್ಪ,ಮತ್ತು ಶ್ರೀ ದುರ್ಗಿಭಾಯಿ ರವರು ಪಾಲ್ಗೊಂಡಿದ್ದರು ಇವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರು,ವಿಜಯನಗರ ಜಿಲ್ಲೆಯವರಾದ ಮಾನ್ಯ ಶ್ರೀ ಬಿ.ಎಲ್.ಶ್ರೀ ಹರಿಬಾಬು, ಐಪಿಎಸ್ ಶ್ಲಾಘಿಸಿರುತ್ತಾರೆ.

ವರದಿ:ಮಣಿಕಂಠ.ಬಿ

kiran

Recent Posts

ಪತ್ನಿಯ ಶೀಲ ಶಂಕಿಸಿ ಶೆಡ್ ನಲ್ಲಿ ಕೂಡಿಟ್ಟ ಪೊಲೀಸ್ ಪೇದೆ.

ಜನರಿಗೆ ನ್ಯಾಯ ಕೊಡಿಸಬೇಕಿದ್ದ ಮಹಿಳೆಯರ ರಕ್ಷಣೆ ಮಾಡಬೇಕಿದ್ದ ಮಹಿಳೆಯರ ರಕ್ಷಣೆ ಸದಾ ಸಿದ್ದರಿರಬೇಕಾಗಿದ್ದ ಪೊಲೀಸ್ ಸಿಬ್ಬಂದಿಯೇ ತನ್ನ ಹೆಂಡತಿಯ ಶೀಲ…

4 weeks ago

ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕಾಮಗಾರಿ ಮಾಡಿದ ಬಿಲ್ ಮಾಡಿಕೊಡಲು ಗುತ್ತಿಗೆದಾರನ ಬಳಿ ಲಂಚ ಪಡೆಯುವಾಗ ಅಧಿಕಾರಿಗಳು ಲೋಕಾಯುಕ್ತ ಬಲೆಗೆ…

1 month ago

ಸಾಕು ತಂದೆಯಿಂದಲೇ ಭೀಕರ ಕೊಲೆಯಾದ ಇಬ್ಬರು ಹೆಣ್ಣು ಮಕ್ಕಳು.

ಬೆಂಗಳೂರಿನ ದಾಸರಹಳ್ಳಿಯಲ್ಲಿ ಸಾಕು ತಂದೆಯೊಬ್ಬ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ತಲೆಮೆರೆಸಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಈ ಭೀಕರ…

1 month ago

ಇನ್ನು ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿಸುವಂತಿಲ್ಲ: ಸಿಎಂ

ಕೃಷಿಕರಲ್ಲದವರಿಗೆ ಇನ್ನೂ ಕೃಷಿ ಭೂಮಿ ಸಿಗುವುದಿಲ್ಲ. ಬಿಜೆಪಿ ತಂದಿದ್ದ ಭೂ ಕಾಯ್ದೆ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ…

1 month ago

ಕಾಮ ಬಯಕೆ ಇದ್ದರೇ ‘ರೆಡ್ ಲೈಟ್ ಏರಿಯಾ’ಗೆ ಬನ್ನಿ, ಅತ್ಯಾಚಾರ ಮಾಡಬೇಡಿ: ಲೈಂಗಿಕ ಕಾರ್ಯಕರ್ತೆ

ಸೋನಾಗಾಚಿ ರೆಡ್ ಲೈಟ್ ಪ್ರದೇಶದ ಮಹಿಳೆಯೊಬ್ಬರು ಯುವ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯ ನಂತರ ಹೃದಯ ವಿದ್ರಾವಕ ಹೇಳಿಕೆಯೊಂದಿಗೆ…

1 month ago

ಶಾಲೆಯ ಮುಂದೆ ಇಲ್ಲ ಸ್ವಚ್ಛತೆ; ರೋಗಕ್ಕೆ ಆಹ್ವಾನ ನೀಡುತ್ತಿರುವ ಪಿಡಿಒ!

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಬಿಲಕೆರೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬಿಲಕೆರೂರ…

1 month ago