Latest

ತುಕಾರಾಮ್ ಎಂಬ ತುಕಾಲಿ ಹಿಂದೆ ಬಂದ ಆಂಟಿ ಡ್ರಮ್ಮು ಸೇರಿದಳು!

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ತೇರಗಾಂವ್ ಮೂಲದವನಾದ ತುಕಾರಾಂ ದಾಂಡೇಲಿಗೆ ಮದುವೆ ಕಾರ್ಯಕ್ರಮ ಒಂದಕ್ಕೆ ಫೋಟೋಗ್ರಾಫರ್ ಆಗಿ ಹೋಗಿದ್ದು ಅಲ್ಲಿ ಎರಡು ಮಕ್ಕಳ ತಾಯಿಯಾದಂತಹ ಶಾಂತಕುಮಾರಿ ಎಂಬಾಕೆಯನ್ನು ಕಂಡಿರುತ್ತಾನೆ.  ನಂತರ ಅವರಿಬ್ಬರ ಮಧ್ಯೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿರುತ್ತದೆ. ಮದುವೆಯಾಗಿ ಎರಡು ಮಕ್ಕಳಿದ್ದರೂ ಶಾಂತಕುಮಾರಿ ಗಂಡನನ್ನು ಬಿಟ್ಟು, ತುಕಾರಾಮನ ಜೊತೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ  ತೇರಗಾಂವ್ ಎಂಬ ಹಳ್ಳಿಗೆ ಓಡಿ ಹೋಗಿ ಜೀವನ ನಡೆಸುತ್ತಿರುತ್ತಾಳೆ. ಈ ರೀತಿ ಓಡಿ ಹೋದ ಬಳಿಕ ಎರಡು ವರ್ಷಗಳ ಕಾಲ ಸುಖವಾಗಿಯೇ ಇರುತ್ತಾರೆ ಇದರ ಮಧ್ಯೆ ಶಾಂತಕುಮಾರಿಗೆ ತುಕಾರಾಮನ ಮೇಲೆ ಅನುಮಾನ ಹುಟ್ಟಲು ಆರಂಭಿಸುತ್ತದೆ. ತುಕಾರಾಮ ಮಹಿಳೆಯರ ಜೊತೆ ಸಾಮಾನ್ಯವಾಗಿ ಮಾತನಾಡಿದರು ಸಹ ಶಾಂತಕುಮಾರಿ ಅನುಮಾನ ಪಡುತ್ತಿದ್ದಳು. ಈ ವಿಚಾರವಾಗಿ ತುಕಾರಾಂ ಬೇಸತ್ತು ಹೋಗಿರುತ್ತಾನೆ. ಒಂದು ಕಡೆ ಆಕೆಯ ಅನುಮಾನದ ಹುಚ್ಚು ಹೆಚ್ಚಾಗುತ್ತಿದ್ದಂತೆ ಇತ್ತ ಈತ ತಾಳ್ಮೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತಾನೆ. ಹೆಂಡತಿಗೆ ಅನುಮಾನ ಹೆಚ್ಚಾಗಬಾರದು ಗಂಡನಿಗೆ ಕೋಪ ಮಿತಿಮೀರ ಬಾರದು ಎರಡು ಹುಚ್ಚೆದ್ದು ಕುಣಿದರೆ ಏನಾಗಬಹುದು ಅಂತಹದೊಂದು ಘಟನೆ ಇವರಿಬ್ಬರ ನಡುವೆ ನಡೆದಿದೆ. ಆಕೆಯ ಅನುಮಾನದ ಹುಚ್ಚನ್ನು ತಾಳಲಾರದ ತುಕಾರಾಂ ತುಕಾಲಿ ಕೆಲಸ ಒಂದಕ್ಕೆ ಮುಂದಾಗುತ್ತಾನೆ.
ಅದೇನೆಂದರೆ, ಆಕೆ ಗಂಡನನ್ನು ಬಿಟ್ಟು ಈತನ ಜೊತೆ ಪ್ರೀತಿ ಮಾಡಿ ಓಡಿ ಬಂದಿದ್ದರೂ ಸಹ ಈ ಎಲ್ಲಾ ವಿಚಾರಗಳನ್ನು ಮರೆತು ಆಕೆಯನ್ನೇ ಕೊಲೆ ಮಾಡಲು ಸ್ಕೆಚ್ ಹಾಕುತ್ತಾನೆ. ಫೆಬ್ರವರಿ 22ನೇ ತಾರೀಖಿನಂದು ಶಾಂತಕುಮಾರಿಯನ್ನು ಕೊಂದ ತುಕಾರಾಂ ಮನೆಯಲ್ಲೇ ಇರುವಂತಹ ಡ್ರಮ್ಮಿನ ಒಳಗೆ ಮುಚ್ಚಿ ಇಡುತ್ತಾನೆ. ನಂತರ ರಾತ್ರಿಯೆಲ್ಲ ಉಪಾಯ ಮಾಡಿ ಮರುದಿನ ವಾಹನವನ್ನು ಕರೆಸಿ ಚಾಲಕ ಹಾಗೂ ಒಬ್ಬ ಹಮಾಲಿಯ ಸಹಾಯ ಪಡೆದು ಕಸ ಎಸೆಯಬೇಕೆಂದು ಕರೆದುಕೊಂಡು ಹೋಗಿ ಡ್ರಮ್ಮಿನಲ್ಲಿರುವಂತಹ ಶಾಂತಕುಮಾರಿ ದೇಹವನ್ನು ಕಾಡಿನಲ್ಲಿ ಎಸೆದು ಬರುತ್ತಾನೆ. ಸ್ಥಳೀಯರು ಅನುಮಾನಗೊಂಡು ಮೊದಲೇ ಪೊಲೀಸರಿಗೆ ಮಾಹಿತಿ ನೀಡಿರುತ್ತಾರೆ. ಇವರು ಹಿಂತಿರುಗಿ ಬರುವಷ್ಟರಲ್ಲಿ ಪೊಲೀಸರು ತುಕಾರಾಮನಿಗಾಗಿ ಹೊಂಚು ಹಾಕಿಕೊಂಡು ಕಾಯುತ್ತಾ ಕುಳಿತಿರುತ್ತಾರೆ.  ಶವವನ್ನು ಎಸೆದು ಬಂದ ತುಕಾರಾಂ ಹಾಗೂ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿರುತ್ತಾರೆ.

kiran

Recent Posts

ಪತ್ನಿಯ ಶೀಲ ಶಂಕಿಸಿ ಶೆಡ್ ನಲ್ಲಿ ಕೂಡಿಟ್ಟ ಪೊಲೀಸ್ ಪೇದೆ.

ಜನರಿಗೆ ನ್ಯಾಯ ಕೊಡಿಸಬೇಕಿದ್ದ ಮಹಿಳೆಯರ ರಕ್ಷಣೆ ಮಾಡಬೇಕಿದ್ದ ಮಹಿಳೆಯರ ರಕ್ಷಣೆ ಸದಾ ಸಿದ್ದರಿರಬೇಕಾಗಿದ್ದ ಪೊಲೀಸ್ ಸಿಬ್ಬಂದಿಯೇ ತನ್ನ ಹೆಂಡತಿಯ ಶೀಲ…

1 month ago

ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕಾಮಗಾರಿ ಮಾಡಿದ ಬಿಲ್ ಮಾಡಿಕೊಡಲು ಗುತ್ತಿಗೆದಾರನ ಬಳಿ ಲಂಚ ಪಡೆಯುವಾಗ ಅಧಿಕಾರಿಗಳು ಲೋಕಾಯುಕ್ತ ಬಲೆಗೆ…

1 month ago

ಸಾಕು ತಂದೆಯಿಂದಲೇ ಭೀಕರ ಕೊಲೆಯಾದ ಇಬ್ಬರು ಹೆಣ್ಣು ಮಕ್ಕಳು.

ಬೆಂಗಳೂರಿನ ದಾಸರಹಳ್ಳಿಯಲ್ಲಿ ಸಾಕು ತಂದೆಯೊಬ್ಬ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ತಲೆಮೆರೆಸಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಈ ಭೀಕರ…

1 month ago

ಇನ್ನು ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿಸುವಂತಿಲ್ಲ: ಸಿಎಂ

ಕೃಷಿಕರಲ್ಲದವರಿಗೆ ಇನ್ನೂ ಕೃಷಿ ಭೂಮಿ ಸಿಗುವುದಿಲ್ಲ. ಬಿಜೆಪಿ ತಂದಿದ್ದ ಭೂ ಕಾಯ್ದೆ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ…

1 month ago

ಕಾಮ ಬಯಕೆ ಇದ್ದರೇ ‘ರೆಡ್ ಲೈಟ್ ಏರಿಯಾ’ಗೆ ಬನ್ನಿ, ಅತ್ಯಾಚಾರ ಮಾಡಬೇಡಿ: ಲೈಂಗಿಕ ಕಾರ್ಯಕರ್ತೆ

ಸೋನಾಗಾಚಿ ರೆಡ್ ಲೈಟ್ ಪ್ರದೇಶದ ಮಹಿಳೆಯೊಬ್ಬರು ಯುವ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯ ನಂತರ ಹೃದಯ ವಿದ್ರಾವಕ ಹೇಳಿಕೆಯೊಂದಿಗೆ…

1 month ago

ಶಾಲೆಯ ಮುಂದೆ ಇಲ್ಲ ಸ್ವಚ್ಛತೆ; ರೋಗಕ್ಕೆ ಆಹ್ವಾನ ನೀಡುತ್ತಿರುವ ಪಿಡಿಒ!

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಬಿಲಕೆರೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬಿಲಕೆರೂರ…

1 month ago