Latest

ಕುಡಿದ ಮತ್ತಿನಲ್ಲಿ ಪಾನ್ ಶಾಪ್ ಅಂಗಡಿ ಮಾಲೀಕನಿಂದ ಹಲ್ಲೆ ಮಾಡಿಸಿಕೊಂಡು ಆಸ್ಪತ್ರೆ ಸೇರಿದ ಆಟೋ ಚಾಲಕ.

ಮದ್ಯಪಾನ ಮಾಡಿ ನಿಶೆಯಲ್ಲಿ ಪಾನಶಾಪ್ ಅಂಗಡಿಗೆ ಹೋಗಿ ಬೇಕಾಗಿದ್ದನ್ನ ಪಡೆದು ಕೊಂಡಿದ್ದಾನೆ ನಂತರ ಪಾನ್ ಶಾಪ್ ಅಂಗಡಿ ಮಾಲೀಕ ಹಣ ಕೊಡಿ ಎಂದರೇ ಮದ್ಯಪಾನ ಮಾಡಿದ್ದ ಆಟೋ ಚಾಲಕ ನನಗೇ ಹಣ ಕೆಳುತ್ತಿಯಾ ಮಗನೇ ಎಂದೂ ಹಲ್ಲೆ ಮಾಡಲು ಯತ್ನಿಸಿದ್ದಾನೆ ಆಗ ಪಾನ್ ಶಾಪ್ ಅಂಗಡಿ ಮಾಲೀಕ ತನ್ನ ಜೀವವನ್ನು ಸಂರಕ್ಷಿಸಿಕೊಳ್ಳಲು ಅಲ್ಲಿಯೇ ಇದ್ದ ಕತ್ತರಿಯಿಂದ ಹೊಟ್ಟೆಯ ಭಾಗಕ್ಕೇ ಬರ್ಬರವಾಗಿ ಇರಿದ ಘಟನೆ ಸ್ಮಾರ್ಟ್ ಸಿಟಿ ಹುಬ್ಬಳ್ಳಿಯ ಗೋಕುಲ್ ರೋಡ್ ಹರ್ಷ ಪಾನ್ ಶಾಪ್ ದಲ್ಲಿ ನಡೆದಿದೆ.
ನಿನ್ನೆ ಮದ್ಯಾಹ್ನದ ಸಮಯದಲ್ಲಿ ಹುಬ್ಬಳ್ಳಿಯ ಗೋಕುಲ್ ರೋಡ್ ನಲ್ಲಿರುವ ಒಂದು ಬಾರ್ ಅಂಡ್ ರೆಸ್ಟೋರೆಂಟ್ ಗೆ ಬಂದ ಸ್ಥಳೀಯ ನಿವಾಸಿ ಆಟೋ ಚಾಲಕ ಸೋಮು ಎಂಬ ವ್ಯಕ್ತಿ ಕಂಠ ಪೂರ್ತಿ ಕುಡಿದು ( ಮದ್ಯಪಾನ ಮಾಡಿ ) ಮದ್ಯದ ನೀಶೆಯಲ್ಲಿ ಹರ್ಷ ಪಾನ್ ಶಾಪ್ ಗೆ ಬಂದಿದ್ದಾನೆ ಪಾನ್ ಶಾಪ್ ದಲ್ಲಿ ತನಗೆ ಬೇಕಾಗಿದ್ದನ್ನು ಕೇಳಿ ಪಡೆದಿದ್ದಾನೆ ಆಮೇಲೆ ಪಾನ್ ಶಾಪ್ ಅಂಗಡಿ ಮಾಲೀಕ ಸೋಮು ಗೆ ಬಿಲ್ ಕೊಡಿ ಎಂದು ಕೇಳಿದ್ದಾನೆ ಅದರಿಂದ ಕುಡಿದ ನಿಶೆಯಲ್ಲಿದ್ದ ಸೋಮು ಪಾನ್ ಶಾಪ್ ಮಾಲೀಕನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ ಪಾನ್ ಶಾಪ್ ಮಾಲೀಕ ವೃದ್ದನಾಗಿದ್ದು ತನ್ನ ಜೀವವನ್ನು ಸಂರಕ್ಷಿಸಿಕೊಳ್ಳಲು ಎಲೆ (ಬೀಡಾ) ಕತ್ತರಿಸುವ ಕತ್ತರಿಯಿಂದ ಆಟೋ ಚಾಲಕನ (ಸೋಮು) ಹೊಟ್ಟೆಯ ಭಾಗಕ್ಕೇ ಬರ್ಬರವಾಗಿ ಇರಿದಿದ್ದಾನೆ ಈ ದುರ್ಘನೆಯಲ್ಲಿ ತೀವ್ರ ಗಂಭೀರವಾಗಿ ಗಾಯಗೊಂಡ ಸೋಮುನನ್ನು ಸ್ಥಳೀಯರು ಕೂಡಲೇ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಇನ್ನೂ ಮಾಹಿತಿ ತಿಳಿದ ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪಾನ್ ಶಾಪ್ ಅಂಗಡಿ ಮಾಲೀಕ ವೃದ್ಧನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
ವರದಿ: ಶಿವು ಹುಬ್ಬಳ್ಳಿ.

kiran

Recent Posts

ಪತ್ನಿಯ ಶೀಲ ಶಂಕಿಸಿ ಶೆಡ್ ನಲ್ಲಿ ಕೂಡಿಟ್ಟ ಪೊಲೀಸ್ ಪೇದೆ.

ಜನರಿಗೆ ನ್ಯಾಯ ಕೊಡಿಸಬೇಕಿದ್ದ ಮಹಿಳೆಯರ ರಕ್ಷಣೆ ಮಾಡಬೇಕಿದ್ದ ಮಹಿಳೆಯರ ರಕ್ಷಣೆ ಸದಾ ಸಿದ್ದರಿರಬೇಕಾಗಿದ್ದ ಪೊಲೀಸ್ ಸಿಬ್ಬಂದಿಯೇ ತನ್ನ ಹೆಂಡತಿಯ ಶೀಲ…

4 weeks ago

ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕಾಮಗಾರಿ ಮಾಡಿದ ಬಿಲ್ ಮಾಡಿಕೊಡಲು ಗುತ್ತಿಗೆದಾರನ ಬಳಿ ಲಂಚ ಪಡೆಯುವಾಗ ಅಧಿಕಾರಿಗಳು ಲೋಕಾಯುಕ್ತ ಬಲೆಗೆ…

1 month ago

ಸಾಕು ತಂದೆಯಿಂದಲೇ ಭೀಕರ ಕೊಲೆಯಾದ ಇಬ್ಬರು ಹೆಣ್ಣು ಮಕ್ಕಳು.

ಬೆಂಗಳೂರಿನ ದಾಸರಹಳ್ಳಿಯಲ್ಲಿ ಸಾಕು ತಂದೆಯೊಬ್ಬ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ತಲೆಮೆರೆಸಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಈ ಭೀಕರ…

1 month ago

ಇನ್ನು ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿಸುವಂತಿಲ್ಲ: ಸಿಎಂ

ಕೃಷಿಕರಲ್ಲದವರಿಗೆ ಇನ್ನೂ ಕೃಷಿ ಭೂಮಿ ಸಿಗುವುದಿಲ್ಲ. ಬಿಜೆಪಿ ತಂದಿದ್ದ ಭೂ ಕಾಯ್ದೆ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ…

1 month ago

ಕಾಮ ಬಯಕೆ ಇದ್ದರೇ ‘ರೆಡ್ ಲೈಟ್ ಏರಿಯಾ’ಗೆ ಬನ್ನಿ, ಅತ್ಯಾಚಾರ ಮಾಡಬೇಡಿ: ಲೈಂಗಿಕ ಕಾರ್ಯಕರ್ತೆ

ಸೋನಾಗಾಚಿ ರೆಡ್ ಲೈಟ್ ಪ್ರದೇಶದ ಮಹಿಳೆಯೊಬ್ಬರು ಯುವ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯ ನಂತರ ಹೃದಯ ವಿದ್ರಾವಕ ಹೇಳಿಕೆಯೊಂದಿಗೆ…

1 month ago

ಶಾಲೆಯ ಮುಂದೆ ಇಲ್ಲ ಸ್ವಚ್ಛತೆ; ರೋಗಕ್ಕೆ ಆಹ್ವಾನ ನೀಡುತ್ತಿರುವ ಪಿಡಿಒ!

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಬಿಲಕೆರೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬಿಲಕೆರೂರ…

1 month ago