ತಂದೆ ಮರಣದ ನಂತರ ತಾಯಿಯ ಹೆಸರಿಗೆ ಖಾತೆ ಬದಲಾವಣೆಗೆ ಎಂದು ಬಂದಿದ್ದ ಗ್ರಾಮಸ್ಥನ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮ ಲೆಕ್ಕಾಧಿಕಾರಿ ಗಿರಿಯಪ್ಪ ಶುಕ್ರವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ ಬಳ್ಳಾರಿ ಜಿಲ್ಲೆ ಬಳ್ಳಾರಿ ತಾಲ್ಲೂಕು ಹೊಸ ಯರಗುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲ್ಲಿ ಬರುವ ಬೆಣಕಲ್ಲು ಗ್ರಾಮದ ಸ ನಂ 68/ಬಿ 8 ಎಕರೆ 7 ಗುಂಟೆ ಜಮೀನನ್ನು ಹನುಮಂತಪ್ಪ ಹೆಸರುನಲ್ಲಿತ್ತು.ಅವರು ನಿಧಾನವಾಗಿ ದ್ದರಿಂದ ಪತ್ನಿ ಕಡದೂರು ಸತ್ಯಮ್ಮ ಹೆಸರಿಗೆ ಪೌತಿ ಖಾತೆ ಬದಲಾವಣೆಗೆ ಮಾಡಬೇಕಿತ್ತು ಇದಕ್ಕಾಗಿ ಮಗ ಕಡದೂರು ಮಾರಪ್ಪ ಅರ್ಜಿ ಸಲ್ಲಿಸಲು ಬಂದಾಗ ಗ್ರಾಮ ಲೆಕ್ಕಾಧಿಕಾರಿ ಗಿರಿಯಪ್ಪ 20,000 ಸಾವಿರ ರೂ ಗಳನು ಬೇಡಿಕೆ ಇಟ್ಟಿದ್ದರು ಇದರ ಖಚಿತ ಮಾಹಿತಿ ಪಡೆದ ಲೋಕಾಯುಕ್ತ ಪೊಲೀಸರು ತಾಸಿಲ್ದಾರ ಕಛೇರಿಯಲ್ಲಿ ಹಣ ಸ್ವೀಕರಿಸುತ್ತಿರುವ ವೇಳೆ ದಾಳಿ ಮಾಡಿ ಗಿರಿಯಪ್ಪ ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

 

ವರದಿ: ರಮೇಶ ಎನ್, ಬಳ್ಳಾರಿ ರೂರಲ್

error: Content is protected !!