Latest

ಯಾರು ಇಲ್ಲದ ಸಮಯದಲ್ಲಿ ಪ್ರೇಯಸಿಯನ್ನು ನೋಡಲು ಹೋದ ಪ್ರೀಯತಮ: ನಡೆದೇ ಹೋಯಿತು ಆಘಾತಕಾರಿ ಘಟನೆ!

ಯುವ ಪ್ರೇಮಿಗಳಿಬ್ಬರು ಪ್ರೀತಿಗಾಗಿ ಬಲಿಯಾಗಿರುವ ಘಟನೆ ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಕಳ್ಳಕವಟಗಿಯಲ್ಲಿ ನಡೆದಿದೆ.

ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಅಪ್ರಾಪ್ತ ಯುವತಿ ಮತ್ತು ಅದೇ ಪಕ್ಕದ ಗ್ರಾಮದ ಗೋಣಸಗಿ ಗ್ರಾಮದ ಮಲ್ಲಿಕಾರ್ಜುನ ಜಮಖಂಡಿ ಅವರ ಪ್ರೇಮಾಂಕುರವಾಗಿತ್ತು. ಎರಡು ಜೋಡಿಗಳು ಪ್ರತಿನಿತ್ಯ ತಿಕೋಟಾದಿಂದ ವಿಜಯಪುರಕ್ಕೆ ಕಾಲೇಜಿಗೆ ಬಸ್ಸಿನಲ್ಲಿ ಬಂದು ಹೋಗುತ್ತಿದ್ದರು. ದಿನನಿತ್ಯ ಕಾಲೇಜಿಗೆ ಬಂದು ಹೋಗುತ್ತಿರುವ ಎರಡು ಜೋಡಿಗಳ ಪರಿಚಯ ಪ್ರೇಮಲೋಕಕ್ಕೆ ಧೂಡಿಕೊಂಡು ಹೋಗಿತ್ತು.

ತಮ್ಮ ಕಾಲೇಜಿನ ಬಿಡುವಿನ ಸಮಯದಲ್ಲ ಈ ಎರಡು ಜೋಡಿಗಳು ಪ್ರೀತಿ-ಪ್ರೇಮ ಗಾರ್ಡನ್ನು,ಸಿನಿಮಾ,ಶಾಪಿಂಗ್ ಅಂತ ಸಿಟಿ ಸುತ್ತಾಡುತ್ತಿದ್ದರು. ಇವರಿಬ್ಬರ ಪ್ರೇಮದಾಟವು ಮನೆಯ ಹಿರಿಯರಿಗೂ ಗೊತ್ತಾಗುತ್ತಿದ್ದಂತೆ ಎರಡು ಕಡೆಯವರು ತಮ್ಮ ಮಗ ಮಗಳಿಗೆ ಬುದ್ಧಿವಾದ ಹೇಳಿದ್ದರು. ಯುವಕ ಮಲ್ಲಿಕಾರ್ಜುನನ್ನು ಅವರ ತಂದೆ ವಿಜಯಪುರ ಕಾಲೇಜನ್ನು ಬಿಡಿಸಿ ಬನಹಟ್ಟಿಯ ಸೈನಿಕ ಶಾಲೆಗೆ ಸೇರಿಸಿದ್ದ ಆದರೂ ಕೂಡ ದಿನನಿತ್ಯ ಇಬ್ಬರು ಕೂಡ ಮೊಬೈಲಿನಲ್ಲಿ ತಾಸುಗಟ್ಟಲೆ ಮಾತನಾಡುತ್ತಿದ್ದರು. ಅದೇ ರೀತಿ ಮುಂದುವರೆದ ಅವರ ಪ್ರೇಮ ಮಧುರ ಮುಂದೊಂದು ದಿನ ಅಂದರೆ ಇದೇ ಸೆಪ್ಟೆಂಬರ್ 22ನೇ ತಾರೀಕಿನಂದು ಯುವಕ ಮಲ್ಲಿಕಾರ್ಜುನನಿಗೆ ಕರೆ ಮಾಡಿದ ಯುವತಿ ನಮ್ಮ ಮನೆಯಲ್ಲಿ ಯಾರು ಇಲ್ಲ ನೀನು ಮನೆಗೆ ಬಾ ಅಂತ ಕರೆಸಿಕೊಂಡಕೊಂಡಿದ್ದಳು.

ಮನೆಯಲ್ಲಿ ಕಂಡ ಮಲ್ಲಿಕಾರ್ಜುನನ್ನು ಯುವತಿಯ ತಂದೆ ಗುರಪ್ಪ ನೋಡಿ ಕೆಂಡಮಂಡಲಾಗಿದ್ದ. ತಕ್ಷಣ ಮಗಳನ್ನು ಯಾರು ಇವನು ಯಾಕೆ ಇವನ ಜೊತೆ ನಿನ್ನೆ ನಿನ್ನ ಒಡನಾಟ ಬಿಡು ಸರಿಯಲ್ಲ ಎಂಬ ಬುದ್ಧಿವಾದ ಹೇಳಿದ್ದ. ತಂದೆ ಬುದ್ಧಿವಾದ ಹೇಳಿದ್ದಕ್ಕೆ ಕೋಪಿತಗೊಂಡ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು.ಮತ್ತಷ್ಟು ಕೋಪಿತಕೊಂಡ ತಂದೆ ಗುರಪ್ಪ ನನ್ನ ಮಗಳ ಸಾವಿಗೆ ಆ ಮಲ್ಲಿಕಾರ್ಜುನನೇ ಕಾರಣವೆಂಬ ಆತುರದಿಂದ ಅದೇ ವಿಷವನ್ನು ಆ ಮಲ್ಲಿಕಾರ್ಜುನನಿಗೆ ಸೇವಿಸಿ.
ಯುವತಿಯ ತಂದೆ ಗುರಪ್ಪ ಮತ್ತು ಅಳಿಯ ಅಜಿತ ಸೇರಿಕೊಂಡು ಮಲ್ಲಿಕಾರ್ಜುನನ ಕೈಕಾಲು ಕಟ್ಟಿ ಗೋಣಿಚೀಲದಲ್ಲಿ ಹಾಕಿಕೊಂಡು ಹೋಗಿ ಬೀಳಗಿ ಹತ್ತಿರ ಕೃಷ್ಣಾ ನದಿಗೆ ಎಸೆದು ಬಂದಿರುತ್ತಾನೆ..

ಮಲ್ಲಿಕಾರ್ಜುನನ ತಂದೆಯ ದೂರಿನನ್ವಯ ಹುಡುಕಾಟ ನಡೆಸಿದ ಪೊಲೀಸರಿಗೆ ಏನು ಬೀಳಗಿಯ ಕೃಷ್ಣಾ ನದಿಯ ದಡದಲ್ಲಿ ಮಲ್ಲಿಕಾರ್ಜುನನ ಶವ ಪತ್ತೆಯಾಗಿದೆ..
ಮಲ್ಲಿಕಾರ್ಜುನನ್ನು ಯುವತಿಯ ತಂದೆ ಗುರಪ್ಪ ಮತ್ತು ಅಳಿಯಯ ಅಜಿತ್ ಅವರು ಕೊಲೆ ಮಾಡಿ ಕೃಷ್ಣಾ ನದಿಗೆ ಎಸೆದಿದ್ದಾರೆ ಎಂಬುದು ಪೊಲೀಸ್ ತನಿಕೆಯಿಂದ ಹೊರಬಂದಿದೆ ಸದ್ಯ ಆರೋಪಿ ಯುವತಿಯ ತಂದೆ ಗುರಪ್ಪ ಹಾಗೂ ಅಳಿಯ ಅಜಿತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

kiran

Recent Posts

ಪತ್ನಿಯ ಶೀಲ ಶಂಕಿಸಿ ಶೆಡ್ ನಲ್ಲಿ ಕೂಡಿಟ್ಟ ಪೊಲೀಸ್ ಪೇದೆ.

ಜನರಿಗೆ ನ್ಯಾಯ ಕೊಡಿಸಬೇಕಿದ್ದ ಮಹಿಳೆಯರ ರಕ್ಷಣೆ ಮಾಡಬೇಕಿದ್ದ ಮಹಿಳೆಯರ ರಕ್ಷಣೆ ಸದಾ ಸಿದ್ದರಿರಬೇಕಾಗಿದ್ದ ಪೊಲೀಸ್ ಸಿಬ್ಬಂದಿಯೇ ತನ್ನ ಹೆಂಡತಿಯ ಶೀಲ…

4 weeks ago

ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕಾಮಗಾರಿ ಮಾಡಿದ ಬಿಲ್ ಮಾಡಿಕೊಡಲು ಗುತ್ತಿಗೆದಾರನ ಬಳಿ ಲಂಚ ಪಡೆಯುವಾಗ ಅಧಿಕಾರಿಗಳು ಲೋಕಾಯುಕ್ತ ಬಲೆಗೆ…

1 month ago

ಸಾಕು ತಂದೆಯಿಂದಲೇ ಭೀಕರ ಕೊಲೆಯಾದ ಇಬ್ಬರು ಹೆಣ್ಣು ಮಕ್ಕಳು.

ಬೆಂಗಳೂರಿನ ದಾಸರಹಳ್ಳಿಯಲ್ಲಿ ಸಾಕು ತಂದೆಯೊಬ್ಬ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ತಲೆಮೆರೆಸಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಈ ಭೀಕರ…

1 month ago

ಇನ್ನು ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿಸುವಂತಿಲ್ಲ: ಸಿಎಂ

ಕೃಷಿಕರಲ್ಲದವರಿಗೆ ಇನ್ನೂ ಕೃಷಿ ಭೂಮಿ ಸಿಗುವುದಿಲ್ಲ. ಬಿಜೆಪಿ ತಂದಿದ್ದ ಭೂ ಕಾಯ್ದೆ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ…

1 month ago

ಕಾಮ ಬಯಕೆ ಇದ್ದರೇ ‘ರೆಡ್ ಲೈಟ್ ಏರಿಯಾ’ಗೆ ಬನ್ನಿ, ಅತ್ಯಾಚಾರ ಮಾಡಬೇಡಿ: ಲೈಂಗಿಕ ಕಾರ್ಯಕರ್ತೆ

ಸೋನಾಗಾಚಿ ರೆಡ್ ಲೈಟ್ ಪ್ರದೇಶದ ಮಹಿಳೆಯೊಬ್ಬರು ಯುವ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯ ನಂತರ ಹೃದಯ ವಿದ್ರಾವಕ ಹೇಳಿಕೆಯೊಂದಿಗೆ…

1 month ago

ಶಾಲೆಯ ಮುಂದೆ ಇಲ್ಲ ಸ್ವಚ್ಛತೆ; ರೋಗಕ್ಕೆ ಆಹ್ವಾನ ನೀಡುತ್ತಿರುವ ಪಿಡಿಒ!

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಬಿಲಕೆರೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬಿಲಕೆರೂರ…

1 month ago