ಸಿ.ಸಿ.ಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಿನಾಂಕ ೧೨/೦೯/೨೦೨೨ ರಂದು ಮಂಡಿ ಮೊಹಲ್ಲಾದ ಪುಲಿಕೇಶಿ ರಸ್ತೆಯಲ್ಲಿರುವ ಕರ್ನಾಟಕ ಆಟೋ ಕುಷನ್‌ವರ್ಕ್ಸ್ಗೆ ದಾಳಿ ಮಾಡಿ ಮಟ್ಕಾ ದಂದೆಯಲ್ಲಿ ತೊಡಗಿದ್ದ ಒಬ್ಬ ಆರೋಪಿಯನ್ನು ಬಂಧಿಸಿ ಮಟ್ಕಾ ದಂಧೆಯಲ್ಲಿ ಗಿರಾಕಿಗಳಿಂದ ಸಂಗ್ರಹಿಸಿದ ರೂ ೭೦.೦೦೦/- ನಗದು ಹಣ ಮತ್ತು ೪ ಮಟ್ಕಾ ಚೀಟಿಗಳನ್ನು ವಶಪಡಿಸಿಕೊಂಡಿರುತ್ತಾರೆ. ಹಾಗೂ ದಿನಾಂಕ ೧೫/೦೯/೨೦೨೨ ರಂದು ಉದಯಗಿರಿ ಪೊಲೀಸ್ ಠಾಣಾ ಸರಹದ್ದು ಕೆ.ಎನ್.ಪುರ ಟೆಂಟ್ ರಸ್ತೆಯಲ್ಲಿರುವ ಆರ್.ಜೆ ಟೀ ಸ್ಟಾಲ್‌ನಲ್ಲಿ ದಾಳಿ ಮಾಡಿ ಮಟ್ಕಾ ದಂದೆಯಲ್ಲಿ ತೊಡಗಿದ್ದ ಒಬ್ಬ ಆರೋಪಿಯನ್ನು ಬಂಧಿಸಿ ಮಟ್ಕಾ ದಂಧೆಯಲ್ಲಿ ಗಿರಾಕಿಗಳಿಂದ ಸಂಗ್ರಹಿಸಿದ ರೂ ೨೦.೦೦೦/- ನಗದು ಹಣ ಮತ್ತು ೪ ಮಟ್ಕಾ ಚೀಟಿಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.
ಈ ದಾಳಿ ಕಾರ್ಯವನ್ನು ಮೈಸೂರು ನಗರದ ಡಿಸಿಪಿ, ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ ವಿಭಾಗ ರವರಾದ ಶ್ರೀಮತಿ ಗೀತ ಎಂ.ಎಸ್, ಐ.ಪಿ.ಎಸ್ ಹಾಗೂ ಸಿ.ಸಿ.ಬಿ ಘಟಕದ ಎ.ಸಿ.ಪಿ ರವರಾದ ಶ್ರೀ ಸಿ.ಕೆ. ಅಶ್ವಥನಾರಾಯಣ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಎ. ಮಲ್ಲೇಶ್, ಎ.ಎಸ್.ಐ ರಾಜು ಹಾಗೂ ಸಿಬ್ಬಂದಿಗಳಾದ ರವಿಕುಮಾರ್.ಎಸ್, ರಾಧೇಶ್.ಬಿ, ಸುಬಾನಲ್ಲಾ ಬಾಲ್‌ದಾರ್, ಕೆ,ಜಿ. ಶ್ರೀನಿವಾಸ ರವರುಗಳು ಮಾಡಿರುತ್ತಾರೆ.
ಈ ದಾಳಿ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ: ಚಂದ್ರಗುಪ್ತ, ಐ.ಪಿ.ಎಸ್. ರವರು ಪ್ರಶಂಸಿಸಿರುತ್ತಾರೆ.

error: Content is protected !!