Latest

ಕ್ರಿಕೇಟ್ ಬೆಟ್ಟಿಂಗ್ ನಡೆಸುತ್ತಿದ್ದವರ ಬಂಧನ”

ಮುಂಡಗೋಡ: 05/04/2025 ರಂದು ಮುಂಡಗೋಡ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿಯನ್ನು ಮುಂಡಗೋಡ ಪೋಲಿಸರು ಬಂಧಿಸಿದ್ದಾರೆ. ಮಂಜುನಾಥ ತಂದೆ ನಾಗಪ್ಪ ಕೊರವರ ,ಸಾ||ಅಂಬೇಡ್ಕರ್ ಓಣಿ, ಮುಂಡಗೋಡ, ವೆಂಕಟೇಶ ತಂದೆ ಅಶೋಕ ಅರಿವಾಣ ಸಾ||ಆನಂದ ನಗರ. ಮುಂಡಗೋಡ, ಮಂಜುನಾಥ ತಂದೆ ಬೈಲಪ್ಪ ಆಸಂಗಿ ಸಾ॥ಗದಗ ಹಾಗೂ ಹರೀಶ ತಂದೆ ದೇವೆಂದ್ರಪ್ಪ ಬಾಳಮ್ಮನವರ ಸಾ//ಹೊಸಕೊಪ್ಪ (ಸಾಲಗಾಂವ)ತಾ||ಮುಂಡಗೋಡ ರವರೆಲ್ಲರೂ ಸೇರಿಕೊಂಡು ಪಂಜಾಬ ರಾಜ್ಯದ ಚಂಡಿಘರನಲ್ಲಿರುವ ಮಹಾರಾಜ ಯದವಿಂದ್ರ ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಾಜಸ್ಥಾನ ಮತ್ತು ಪಂಜಾಬ ತಂಡಗಳ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳ ಮೇಲೆ ಹಣ ಕಟ್ಟಿ ರಸ್ತೆಯಲ್ಲಿ ಬರಹೋಗುವ ಜನರನ್ನು ಕರೆದು ಜನರನ್ನು ಸಂಪರ್ಕಿಸಿ ಬೆಟ್ಟಿಂಗ್ ನಡೆಸುತ್ತಿದ್ದವರ ಮೇಲೆ ದಾಳಿ ಮಾಡಿದ್ದಾಗ ಬೆಟ್ಟಿಂಗ್ ನಡೆಸುತ್ತಿದ್ದವರ ಪೈಕಿ ಮಂಜುನಾಥ ತಂದೆ ನಾಗಪ್ಪ ಕೊರವರ, ಸಾ|ಅಂಬೇಡ್ಕರ್ ಓಣಿ. ಮುಂಡಗೋಡ ಈತನು ಪೊಲೀಸರ ಕೈಗೆ ಸಿಕ್ಕಿದ್ದು. ಕ್ರಿಕೇಟ ಬೇಟ್ಟಿಂಗ ನಡೆಸುತ್ತಿದ್ದ ಇನ್ನೂ ಮೂವರು ಓಡಿ ಹೋಗಿರುತ್ತಾರೆ. ಬಂಧಿತ ಆರೋಪಿಯಿಂದ ನಗದು ಹಣ 2300/-ರೂ. ಲಾವಾ ಕಂಪನಿಯ ಕೀಪ್ಯಾಡ್ ಮೋಬೈಲ್ ಮತ್ತು ಕ್ರಿಕೇಟ್ ಬೆಟ್ಟಿಂಗ್ ಬರೆದಿರುವ ನೋಟಬುಕ್ ,ಪೆನ್ನುಗಳನ್ನು ಜಪ್ತುಪಡಿಸಿಕೊಂಡು ಸದರಿಯವರ ಮೇಲೆ ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಎಮ್. ನಾರಾಯಣ ಐ.ಪಿ.ಎಸ್ ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಕಾರವಾರ, ಕೃಷ್ಣಮೂರ್ತಿ ಜಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಾರವಾರ. ಜಗದೀಶ ನಾಯ್ಕ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಾರವಾರ, ಶ್ರೀ ಗಣೇಶ ಕೆ. ಎಲ್ ಡಿ.ಎಸ್.ಪಿ ಶಿರಸಿ ರವರ ಮಾರ್ಗದರ್ಶನದಲ್ಲಿ ಶ್ರೀ ರಂಗನಾಥ ನೀಲಮ್ಮನವರ ಪೊಲೀಸ್ ನಿರೀಕ್ಷಕರು ಮುಂಡಗೋಡ ಪೋಲೀಸ್ ಠಾಣೆ ಇವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಮಹಾಂತೇಶ ಮುಧೋಳ, ಅನ್ವರ ಬಮ್ಮಿಗಟ್ಟಿ, ನಾಗಪ್ಪ ಎಮ್ ಇವರು ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.ವರದಿ: ಮಂಜುನಾಥ್ ಎಫ್ ಹೆಚ್

nazeer ahamad

Recent Posts

ಅಶ್ಲೀಲ ವರ್ತನೆಗೆ ಪ್ರಶ್ನೆ ಕೇಳಿದ ಮಹಿಳೆಯ ಪತಿ ಹಾಗೂ ಏಳು ಮಂದಿ ಮೇಲೆ ಹಲ್ಲ: ಆರೋಪಿಗಾಗಿ ಪೊಲೀಸರ ಹುಡುಕಾಟ.

ಬೆಂಗಳೂರು: ನಗರದಲ್ಲೊಂದು ಅಶ್ಲೀಲ ವರ್ತನೆ ಗಂಭೀರ ಹಲ್ಲೆ ಪ್ರಕರಣಕ್ಕೆ ಕಾರಣವಾಗಿದ್ದು, ಸಿಲಿಕಾನ್ ಸಿಟಿಯಲ್ಲಿರುವ ಶಿವಾಜಿನಗರದಲ್ಲಿ ಏಪ್ರಿಲ್ 13ರಂದು ಈ ಘಟನೆ…

3 hours ago

ಮಾಲೂರಿನಲ್ಲಿ ಗಾಂಜಾ ವಶ: ಎರಡು ರಾಜ್ಯದ ಇಬ್ಬರು ಆರೋಪಿಗಳ ಬಂಧನ

ಮಾಲೂರು: ಕೆ.ಐ.ಎ.ಡಿ.ಬಿ ಕೈಗಾರಿಕಾ ಪ್ರದೇಶದ ಸಮೀಪ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಒಟ್ಟು 700 ಗ್ರಾಂ ಗಾಂಜಾವನ್ನು ಮಾಲೂರು ಅಬಕಾರಿ ಅಧಿಕಾರಿಗಳು ಬುಧವಾರ…

5 hours ago

ಬಸ್ ಹತ್ತುವ ವಿಚಾರಕ್ಕೆ ಗಲಾಟೆ: ಗದಗ ಜಿಲ್ಲೆಯ ಮುಂಡರಗಿಯಲ್ಲಿ ಕಂಡಕ್ಟರ್ ಮೇಲೆ ಮೂವರಿಂದ ಹಲ್ಲೆ!

ಗದಗ ಜಿಲ್ಲೆ ಮುಂಡರಗಿಯಲ್ಲಿ ಬಸ್ ಹತ್ತುವ ಕುರಿತಂತೆ ನಡೆದ ಮಾತಿನ ಚಕಮಕಿ ಮಾರಾಮಾರಿಗೆ ಕಾರಣವಾಗಿ, ಮೂವರು ಯುವಕರು ಬಸ್ ಕಂಡಕ್ಟರ್…

6 hours ago

ತಾವರಕೆರೆ ಗ್ರಾಮದಲ್ಲಿ ತಾಲಿಬಾನ್ ಶೈಲಿಯಲ್ಲಿ ಮಹಿಳೆಯರ ಮೇಲೆ ಹಲ್ಲೆ.! ಆರು ಮಂದಿ ಬಂಧನ”

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಾವರಕೆರೆ ಗ್ರಾಮದಲ್ಲಿ ನಡೆದಿದೆ ಅಮಾನುಷ ಹಲ್ಲೆ ಪ್ರಕರಣ ಮತ್ತೊಮ್ಮೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಅಪ್ರಮಾಣಿತ…

7 hours ago

ಪೈಪ್‌ಲೈನ್‌ ಕಾಮಗಾರಿಯಲ್ಲಿ ಭೀಕರ ದುರ್ಘಟನೆ: ಮಣ್ಣು ಕುಸಿತದಿಂದ ಇಬ್ಬರು ಸಾವು, ಒಬ್ಬರು ನಾಪತ್ತೆ

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಪಕ್ಕದ ನ್ಯೂ ಗಾಂಧಿ ನಗರದಲ್ಲಿ ಬುಧವಾರ ಸಂಭವಿಸಿದ ಭೀಕರ ಅವಘಡದಲ್ಲಿ ಇಬ್ಬರು ಕೂಲಿ ಕಾರ್ಮಿಕರು ಮಣ್ಣುಕೆಳಗೆ…

9 hours ago

ರೀಲ್ಸ್‌ಗಾಗಿ ಮಚ್ಚು ಹಿಡಿದ ಪ್ರಕರಣ: ಮತ್ತೆ ರಜತ್ ಕಿಶನ್ ಬಂಧನ, ವಿನಯ್ ಗೌಡ ಪತ್ತೆ ಕಾರ್ಯ ಜೋರಾಗಿದೆಯೆ?”

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ರೀಲ್ಸ್‌ಗಾಗಿ ಮಚ್ಚು ಹಿಡಿದು ನಟಿಸಿದ್ದ ದುರಂತ ಇನ್ನೂ ರಜತ್ ಕಿಶನ್ ಹಾಗೂ ವಿನಯ್…

11 hours ago