ಚಿಕ್ಕಮಗಳೂರಿನಲ್ಲಿರುವ ಕಾಂಗ್ರೆಸ್ ನಾಯಕಿ ಅವರ ಮನೆ ಮೇಲೆ ದಿಡೀರ್ ಐ ಟಿ ದಾಳಿ ಜಿಲ್ಲಾ ರಾಜಕೀಯದಲ್ಲಿ ಸಂಚಲನ ಉಂಟಾಗಿದೆ.
ಮಾಜಿ ಎಂ.ಎಲ್ ಸಿ ಹಾಗೂ ಸಿದ್ದರಾಮಯ್ಯ ನವರ ಆಪ್ತವಲಯದಲ್ಲಿ ಗುರುತಿಸಿ ಕೊಂಡಿರುವ ಗಾಯಿತ್ರಿ ಶಾಂತೇಗೌಡರವರ ಮನೆ ,ಕ್ರಷರ್ ಗಳ ಮೇಲೆ ದಾಳಿ ನಡಿಸಿರುವ ಐ ಟಿ ಇಲಾಖೆ ಹಲವಾರು ದಾಖಲೆಗಳನ್ನು ತೆಗೆದುಕೊಂಡು ಹೋಗಿದೆ.

ಮುಂದಿನ ಚಿಕ್ಕ ಮಗಳೂರು ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಯಾಗಿರುವ ಗಾಯತ್ರಿ ಶಾಂತೇಗೌಡರ ಪ್ರಭಾವ ಹೆಚ್ಚಾಗಿರುವುದರಿಂದ ಚುನಾವಣೆಯಲ್ಲಿ ಗೆದ್ದು ಬಿಡುತ್ತಾರೆ ಎಂದು ಸಿ ಟಿ ರವಿ ಅವರೆ ಐ ಟಿ ರೈಡ್ ಮಾಡಿಸಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡಿಸುವ ಮೂಲಕ ಆರೋಪಿಸಿದ್ದಾರೆ.

error: Content is protected !!