Crime

ಸಾಲಗಾರರ ಕಾಟ; ಯುವಕ ಆತ್ಮಹತ್ಯೆಗೆ ಯತ್ನ…!

ಕುಂದಗೋಳ: ಸಾಲಗಾರರ ಕಾಟದಿಂದ ಬೇಸತ್ತು ಯುವಕನೊಬ್ಬ ಮನನೊಂದು ಕಳೆನಾಶಕವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕುಂದಗೋಳ ಗ್ರಾಮೀಣ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಕುಂದಗೋಳ ಪಟ್ಟಣದ ನಿವಾಸಿ ಸುನೀಲ ಹೆೇಮಣ್ಣ ಪಾತ್ರೋಟಿ (26) ಎಂಬ ಯುವಕ ತಮ್ಮ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಎಂಬ ಕಾರಣದಿಂದ ಚಿಕಿತ್ಸೆಗೆ ಅಂತ 2023ರಲ್ಲಿ ಆರೋಪಿತ ನಾದ ಸಂತೋಷ ಸಿದ್ದಪ್ಪ ಮುಳ್ಳೂಳ್ಳಿ ಇವರಿಂದ 40 ಸಾವಿರ ರೂಪಾಯಿ ಕೈಗಡ ಸಾಲವನ್ನು ತೆಗೆದುಕೊಂಡಿರುತ್ತಾನೆ. ನಾಲ್ಕು ತಿಂಗಳ ಬಳಿಕ ಸಾಲ ಪಡೆದ ತಂದೆ ತೀರಿ ಹೋಗಿರುತ್ತಾರೆ. ಸಾಲಗಾರರು ಮರಳಿ ಹಣವನ್ನು ಕೂಡು ಎಂತು ಕೇಳಿದಾಗ ಸ್ವಲ್ಪ ದಿನ ನಂತರ ಕೊಡುತ್ತೇನೆ ಎಂದು ಸುನೀಲ್ ಹೇಳಿರುತ್ತಾನೆ.

ಬಳಿಕ 2024 ರ ಅಗಸ್ಟ್ ರಂದು 4 ಆರೋಪಿಗಳು ಸೇರಿಕೊಂಡು ಸುನೀಲ ಪಾತ್ರೋಟಿ ಇವರ ಮನೆಯ ಮುಂದೆ ಹೋಗಿ 30 ಸಾವಿರ ರೂಪಾಯಿಗೆ ಬಡ್ಡಿ ಸೇರಿ 1,80 ಸಾವಿರ ಆಗಿದೆ ಎಂದು ಕಿರುಕುಳ ಕೊಟ್ಟಿದ್ದಕ್ಕೆ ಸಾಲಗಾರ ಸುನೀಲ ಆರೋಪಿತ ನಾದ ಸಂತೋಷ ಸಿದ್ದಪ್ಪ ಮುಳ್ಳೂಳ್ಳಿ ಇವನಿಗೆ ಪ್ರತಿವಾರ ಪೋನ್ ಫೇ ಹಾಗೂ ಕೈಗಡ 5 ಸಾವಿರ ರೂಪಾಯಿ ನೀಡುತ್ತ ಬಂದಿರುತ್ತಾನೆ.

ಇದಲ್ಲದೆ ಸಾಲ ತೀರಿಲ್ಲ ಎಂದು ಬೆಟದೂರ ರಸ್ತ ಬಳಿ ಸಂತೋಷ ಮೂಳ್ಳೂಳ್ಳಿ, ಜತೆ ಶಿವು ಮೂಳ್ಳೂಳ್ಳಿ, ಪ್ರವೀಣ ಮುದೆಣ್ಣವರ, ಪ್ರಕಾಶ ಮೂಳ್ಳೂಳ್ಳಿ, ಸೇರಿಕೂಂಡು ಸುನೀಲ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡಿ ಕಾರನ್ನು ತೆಗೆದುಕೊಂಡು ಹೋಗಿರುತ್ತಾರೆ. ಇದರಿಂದಾಗಿ ಮನನೊಂದು ಸುನೀಲ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯುತ್ನಿಸಿದ್ದಾನೆ. ಈ ಕುರಿತು ಕುಂದಗೋಳ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

kiran

Recent Posts

ಬೈಕನಿಂದ ಬಿದ್ದು ಎಸ್.ಕೆ.ಡಿ.ಆರ್.ಪಿ ಕುಮಟಾ ಸಿಬ್ಬಂದಿ ಸಾವು

ಕುಮಟಾ ತಾಲೂಕಿನ ಗುಡೇಅಂಗಡಿಯ ನಿವಾಸಿ ಸುಮಾ ಮಡಿವಾಳ (32) ಅವರು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕುಮಟಾ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.…

2 hours ago

ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿದ್ದಾಗ ಸಿಕ್ಕಿಬಿದ್ದ ವಿದ್ಯಾರ್ಥಿನಿ ಮನನೊಂದು ಆತ್ಮಹತ್ಯೆ: ಬಾಗಲಕೋಟೆಯಲ್ಲಿ ದುಃಖದ ಘಟನೆ

ಬಾಗಲಕೋಟೆ ಜಿಲ್ಲೆಯಲ್ಲಿ ನಕಲು ಮಾಡುತ್ತಿರುವಾಗ ಸಿಕ್ಕಿಬಿದ್ದ ಪಿಯುಸಿ ವಿದ್ಯಾರ್ಥಿನಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಮುಧೋಳ ಪಟ್ಟಣದ…

2 hours ago

ಹೊಸಕೋಟೆ ಎಟಿಎಂ ದರೋಡೆ: 6 ನಿಮಿಷದಲ್ಲಿ ₹30 ಲಕ್ಷ ದೋಚಿ ಪರಾರಿಯಾದ ಕಳ್ಳರು!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆಯಲ್ಲಿ ಎಟಿಎಂ ದರೋಡೆ ಪ್ರಕರಣದಿಂದ ಭಾರೀ ಚರ್ಚೆ ಮೂಡಿಸಿದೆ. ಕೇವಲ ಆರು ನಿಮಿಷಗಳೊಳಗೆ,…

12 hours ago

ಐಪಿಎಸ್ ಅಧಿಕಾರಿಯಿಂದ ಅಪ್ರಾಪ್ತ ಬಾಲಕಿಯ ವಿವಾಹ: ವಯಸ್ಸು ತಿದ್ದುಪಡಿ ಮಾಡಿಸಿದ ಆರೋಪ

ಬೆಳಗಾವಿಯಲ್ಲಿ ಶಾಕಿಂಗ್ ಘಟನೆ ಬೆಳಕಿಗೆ ಬಂದಿದ್ದು, ಅಪ್ರಾಪ್ತ ಬಾಲಕಿಯ ವಿವಾಹಕ್ಕೆ ಸ್ವತಃ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರೇ ಕೈಜೋಡಿಸಿರುವ ಮಾಹಿತಿಯಾಗಿದೆ. ಬೆಳಗಾವಿ…

1 day ago

ಲಂಚ ಪ್ರಕರಣ: ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯ ಪಿಎಸ್‌ಐ ಮತ್ತು ಕಾನ್‌ಸ್ಟೆಬಲ್ ಅಮಾನತು

ಬೆಂಗಳೂರು: ಲಂಚ ಸ್ವೀಕರಿಸಿದ ಆರೋಪದ ಹಿನ್ನೆಲೆಯಲ್ಲಿ ಎಚ್‌ಎಸ್‌ಆರ್‌ ಲೇಔಟ್ ಪೊಲೀಸ್‌ ಠಾಣೆಯ ಪಿಎಸ್‌ಐ ಬಸವರಾಜ್ ಹಾಗೂ ಕಾನ್‌ಸ್ಟೆಬಲ್‌ ಒಬ್ಬರನ್ನು ಅಮಾನತು…

1 day ago

6 ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಶಿರಸಿ ಜೆ.ಎಂ.ಎಫ್.ಸಿ ಕೋರ್ಟ್ ನ ಭ್ರಷ್ಟ ಎ. ಪಿ.ಪಿ ಪ್ರಕಾಶ ಲಮಾಣಿ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ನ್ಯಾಯಾಲಯದ ಹೆಚ್ಚುವರಿ ಸಹಾಯಕ ಸಾರ್ವಜನಿಕ ಅಭಿಯೋಜಕ (ಎಪಿಪಿ) ಪ್ರಕಾಶ್ ಲಮಾಣಿ ಅವರನ್ನು ಲೋಕಾಯುಕ್ತ ಪೊಲೀಸರು…

1 day ago