Latest

ಕಳಚೆ ಭೂಕುಸಿತ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಕಳಚೆ ಭೂಕುಸಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದು, ಈ ವೇಳೆ ಹಲವರು ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸಿದರು. ಇದಕ್ಕೆ ವಿರುದ್ಧವಾಗಿ ಇನ್ನೂ ಕೆಲವರು ಪುನರ್ವಸತಿ ಬದಲು ಪರಿಹಾರ ಕೊಡಿ ಎಂದು ಆಗ್ರಹಿಸಿದರು.

ಈ ಬಗ್ಗೆ ನಿರ್ಣಯ ಕೈಗೊಳ್ಳಲು ಶಿರಸಿ ಉಪವಿಭಾಗಾಧಿಕಾರಿ ಕಾವ್ಯರಾಣಿ ಅವರ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಗ್ರಾಮಸಭೆ ನಡೆಸುವಂತೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಮೌಖಿಕ ಆದೇಶ ನೀಡಿದರು. ಸಂತ್ರಸ್ತರಿಗೆ ಪುನರ್ವಸತಿ ಅಥವಾ ಪರಿಹಾರವಾ ಎಂಬ ವಿಷಯದಲ್ಲಿನ ಗೊಂದಲವನ್ನು ಆ ಗ್ರಾಮಸಭೆಯಲ್ಲಿ ಬಗೆಹರಿಸಿಕೊಳ್ಳುವಂತೆ ಅವರು ಸೂಚಿಸಿದರು.

ಯಲ್ಲಾಪುರಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಮೊದಲು ನೇರವಾಗಿ ಕಳಚೆಗೆ ತೆರಳಿದರು. ಅಲ್ಲಿನ ಕಮಲಾಕರ ಗಾಂವಕರ್ ಅವರ ಮನೆ ಹಾಗೂ ಸುತ್ತಲಿನ ಪರಿಸರ ವೀಕ್ಷಿಸಿದರು. ತೋಟಕ್ಕೆ ತೆರಳಿ ಅಲ್ಲಿ ಆದದಹಾನಿಯ ಬಗ್ಗೆ ಅಂದಾಜಿಸಿದರು. ರಸ್ತೆ ಬದಿಯ ಇನ್ನೆರಡು ತೋಟಗಳನ್ನು ವೀಕ್ಷಿಸಿ ಹಾನಿ ತಡೆಗೆ ಕೈಗೊಳ್ಳಬಹುದಾದ ಮಾರ್ಗಗಳ ಬಗ್ಗೆ ತಹಶೀಲ್ದಾರ್ ಯಲ್ಲಪ್ಪ ಗೋಣೆನ್ನವ‌ರ್ ಹಾಗೂ ಕಂದಾಯ ನಿರೀಕ್ಷಕಿ ಜ್ಯೋತಿ ನಾಯ್ಕ ಅವರೊಂದಿಗೆ ಚರ್ಚಿಸಿದರು. ತಳಕೆ ಬೈಲ್ ಭೂಕುಸಿತ ಸ್ಥಳ ವೀಕ್ಷಣೆ ಮಾಡಿದ ಅವರು ನಂತರ ಬೀಗ ಬೀಗಾರ-ಬಾಗಿನಕಟ್ಟಾ ರಸ್ತೆ ಸಂಪರ್ಕ ಕಡಿತವಾಗಿರುವುದನ್ನು ಗಮನಿಸಿದರು

ಅಲ್ಲಿದ್ದ ಜನ ತಮ್ಮ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಮುಂದಿಟ್ಟರು. ಇಡೀ ಊರನ್ನು ಸ್ಥಳಾಂತರಿಸಲು ಕಾನೂನಿನಲ್ಲಿ ಅವಕಾಶವಿದ್ದು, ಕೆಲ ಕುಟುಂಬಗಳಿಗೆ ಮಾತ್ರ ಬೇರೆಡೆ ವಸತಿ ಕಲ್ಪಿಸುವುದು ಕಷ್ಟ ವಸತಿಗೆ ಬೇರೆ ಜಾಗ ನೀಡಿ, ಪರಿಹಾರ ಕೊಡುವುದರ ಜೊತೆ ಇಲ್ಲಿನ ತೋಟವನ್ನು ಹಾಗೇ ಬಿಡಿ ಎಂಬ ಬೇಡಿಕೆ ಈಡೇರಿಕೆಗೆ ಅವಕಾಶವಿಲ್ಲ ಎಂದು ಅಲ್ಲಿದ್ದವರಿಗೆ ತಿಳಿಹೇಳಿದರು.

ಗ್ರಾಮಸ್ಥರು ಒಗ್ಗಟ್ಟಿನಿಂದ ನಿರ್ಣಯ ಕೈಗೊಂಡರೆ ಮಾತ್ರ ಅರಣ್ಯ ಭೂಮಿಯನ್ನು ಕಂದಾಯ ಭೂಮಿಯನ್ನಾಗಿ ಪರಿವರ್ತಿಸಿ ಪುನರ್ವಸತಿ ಸಾಧ್ಯ ಎನ್ನುವದರ ಬಗ್ಗೆ ವಿವರಿಸಿದರು. ಗ್ರಾಮಸ್ಥರ ಮನವೊಲೈಸಿ ಸರಿಯಾದ ನಿರ್ಣಯ ಕೈಗೊಳ್ಳಲು ಸಹಾಯ ಮಾಡುವಂತೆ ಅಧೀನ ಅಧಿಕಾರಿಗಳಿಗೆ ತಿಳಿಸಿದರು. ನಂತರ ತಹಶೀಲ್ದಾರ್ ಕಚೇರಿಯ ರೆಕಾರ್ಡ್ ರೂಂಗೆ ತೆರಳಿ ದಾಖಲೆಗಳನ್ನು ಗಮನಿಸಿದರು. ಗ್ರಾಮ ಆಡಳಿತಾಧಿಕಾರಿಗಳಿಗೆ ಅಗತ್ಯವಿರುವ ಕಪಾಟುಗಳನ್ನು ಹಸ್ತಾಂತರಿಸಿದರು. ಗ್ರಾಮ ಆಡಳಿತಾಧಿಕಾರಿ ದೀಪಿಕಾ ಹೊಸನಿ, ಪಿಡಿಓ ಗಂಗಾಧರ ಭಟ್ಟ, ತಾ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ ಧನವಾಡಕರ್ ಜೊತೆಗಿದ್ದರು.

ಭ್ರಷ್ಟರ ಬೇಟೆ

Recent Posts

ಪತ್ನಿಯೊಂದಿಗೆ ಜಗಳವಾಡಿ ಮೂರು ವರ್ಷದ ಮಗನನ್ನು ಕೊಂದ ಪಾಪಿ ತಂದೆ.!

ಪುಣೆ: ಪತ್ನಿಯೊಂದಿಗಿನ ಕಲಹದ ಬಳಿಕ ತನ್ನ ಮೂರು ವರ್ಷದ ಮಗನನ್ನು ಹತ್ಯೆ ಮಾಡಿದ ಆರೋಪದ ಮೇಲೆ ಐಟಿ ಎಂಜಿನಿಯರ್ ಮಾಧವ್…

3 hours ago

ಒಎಎಸ್‌ ಅಧಿಕಾರಿಯ ಲವ್‌, ಸೆಕ್ಸ್‌, ಧೋಕಾ: ಬುಡಕಟ್ಟು ಯುವತಿಗೆ ನ್ಯಾಯ!

ಜಗತ್ಸಿಂಗ್‌ಪುರ: ಆರುತಿಂಗಳ ಹೋರಾಟದ ನಂತರ ಬುಡಕಟ್ಟು ಸಮುದಾಯದ ಯುವತಿ ಒಎಎಸ್‌ ಅಧಿಕಾರಿಯ ವಿರುದ್ಧ ನಡೆದ ತನ್ನ ನ್ಯಾಯಯುದ್ಧದಲ್ಲಿ ಜಯ ಸಾಧಿಸಿದ್ದಾಳೆ.…

4 hours ago

ಹೊಸೂರು ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: ಆರು ಜನ ಗಂಭೀರ ಗಾಯ

ಗದಗ ತಾಲೂಕಿನ ಹೊಸೂರು ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಸ್ಫೋಟದ…

6 hours ago

ಆಧಾರ್ ಕಾರ್ಡ್ ಮಾಡಿಸಲು ಅಲೆದಾಟದಿಂದ ಬೇಸತ್ತು ಪ್ರಧಾನಿ ಮೋದಿಗೆ ಪತ್ರ ಬರೆದ ಅಜ್ಜಿ

ಯಲ್ಲಾಪುರ:-ಕಳೆದ 10 ವರ್ಷಗಳಿಂದ ಆಧಾರ್ ಕಾರ್ಡ ಮಾಡಿಸಲು ಅಲೆದಾಡುತ್ತಿರುವ ಯಲ್ಲಾಪುರ ಕಾನಗೋಡಿನ 80 ವರ್ಷದ ಸರಸ್ವತಿ ಹೆಗಡೆ ಇದೀಗ ಪ್ರಧಾನಿ…

6 hours ago

ಕುರುಪ್ಪಂಪಾಡಿಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ: ತಾಯಿ ಸೇರಿದಂತೆ ಇಬ್ಬರ ಬಂಧನ

ಕುರುಪ್ಪಂಪಾಡಿಯಲ್ಲಿ ತನ್ನ ಸಹಜೀವನ ಸಂಗಾತಿಯಿಂದ ಲೈಂಗಿಕ ಕಿರುಕುಳಕ್ಕೆ ಗುರಿಯಾದ ಇಬ್ಬರು ಅಪ್ರಾಪ್ತ ಬಾಲಕಿಯರ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ನಡೆಸಿದ…

7 hours ago

ಮನೆ ಕಳ್ಳತನ ಪ್ರಕರಣ:ಕಳ್ಳನಿಗೆ ಹೆಡೆಮುರಿ ಕಟ್ಟಿದ ತಾವರಗೇರಾ ಪೊಲೀಸರು.

ತಾವರಗೇರಾ:- ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ತಾವರಗೇರಾ ಪಟ್ಟಣದ ವಿಶ್ವೇಶ್ವರಯ್ಯ ನಗರದಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಕಳ್ಳನನ್ನು ಹಿಡಿಯುವಲ್ಲಿ…

7 hours ago