ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಮೇಲೆ ಇದೀಗ ಜೀವ ಬೆದರಿಕೆ ಕೇಸ್ ದಾಖಲಾಗಿದೆ. ಖಾಸಗಿ ವಾಹಿನಿಯಲ್ಲಿ ಕಾಮಿಡಿಯನ್ ಆಗಿ ಕೆಲಸ ಮಾಡುತ್ತಿರುವ ಸೋಮಶೇಖರ್ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮಗೂ ತಮ್ಮ ಕುಟಂಬಕ್ಕೂ ಜೀವ ಬೆದರಿಕೆ ಇದೆ, ಅವರನ್ನು ಕರೆಸಿ ಎಚ್ಚರಿಕೆ ಕೊಡಿ ಎಂದು ಮನವಿ ಮಾಡಿದ್ದಾರೆ.
ಖಾಸಗಿ ಚಾನೆಲ್ ನಲ್ಲಿ ನಡೆದ ಕಾಮಿಡಿ ಗ್ಯಾಂಗ್ ಕಾರ್ಯಕ್ರಮದಿಂದ ಸೋಮಶೇಖರ್ ಅವರಿಗೆ ಒಂದಷ್ಟು ಹಣ ಬಂದಿತ್ತಂತೆ. ಆ ಹಣವನ್ನು ಸೀನಿಯರ್ ಗಳಾದ ಚಿದಾನಂದ್ ಹಾಗೂ ಅನಿ ಎನ್ನುವವರಿಗೂ ನೀಡಿ ಎಂದು ಕೇಳಿದ್ದರೆಂತೆ. ಅದಕ್ಕೆ ಒಪ್ಪದ ಸೋಮಶೇಖರ್ ಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಸಂಬಂಧ ದೂರು ದಾಖಲಿಸಿರುವ ಸೋಮಶೇಖರ್, ನಯನಾ ಮಾತನಾಡಿರುವ ಆಡಿಯೋ ಕೂಡ ನೀಡಿದ್ದಾರೆ.
ಆಡಿಯೋ : ಹಾಯ್ ಸೋಮ.. ನಾನು ಈ ಆಡಿಯೋವನ್ನು ನಮ್ಮ ಏರಿಯಾದ ಆರ್ ಆರ್ ನಗರ ಪೊಲೀಸ್ ಠಾಣೆಯಿಂದ ಕಳುಹಿಸುತ್ತಿದ್ದೇನೆ. ಚಿದುಗೆ ಮತ್ತು ಅನಿಗೆ ನೀನು ಹಣ ಕೊಟ್ಟಿಲ್ಲವಂತೆ. ಅವರಿಗೆ ಹಣ ನೀಡದೆ ಹೋದರೆ ಪೊಲೀಸರಿಗೆ ದೂರು ನೀಡುತ್ತೇವೆ. ಆಮೇಲೆ ಅವರೇ ನೀನು ಎಲ್ಲಿ ಇದ್ದರು ಎಳೆದು ತರುತ್ತಾರೆ. ಆ ಹಣ ಎಲ್ಲರಿಗೂ ಸೇರಿದ್ದು. ಆದ್ರೆ ನೀನು ನಿನ್ನ ಲುಚ್ಚಾ ಬುದ್ದಿಯನ್ನು ತೋರಿಸಿದ್ದೀಯಾ. ದಯವಿಟ್ಟು ಆದಷ್ಟು ಬೇಗ ದುಡ್ಡು ತಲುಪಿಸು ಇಲ್ಲವಾದರೆ ನಾವೂ ಏನು ಮಾಡುವುದಕ್ಕೂ ಹೇಸುವುದಿಲ್ಲ. ಮಿಸ್ಟರ್ ಸೋಮ ಅವರೇ ಅದೇನೋ ರೂಲ್ಸ್ ಬಗ್ಗೆ ಎಲ್ಲಾ ಮಾತಾಡಿದ್ರಂತೆ. ಹೋಗಿ ಅದ್ಯಾವ ಪೊಲೀಸ್ ಸ್ಟೇಷನ್ ಗೆ ಹೋಗುತ್ತೀರಾ ಹೋಗಿ. ಅದೇನು ದೂರು ಕೊಡ್ತೀರಾ ಕೊಡಿ. ನಿಮಗಿದು ಲಾಸ್ಟ್ ಕಾಲ್, ಇನ್ಮೇಲೆ ಬೆಂಗಳೂರಿನಲ್ಲಿ ಅದೇಗೆ ಓಡಾಡ್ತೀಯಾ ಅನ್ನೋದನ್ನ ನಾನು ನೋಡ್ತೀನಿ ಎಂದು ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.
ಜನರಿಗೆ ನ್ಯಾಯ ಕೊಡಿಸಬೇಕಿದ್ದ ಮಹಿಳೆಯರ ರಕ್ಷಣೆ ಮಾಡಬೇಕಿದ್ದ ಮಹಿಳೆಯರ ರಕ್ಷಣೆ ಸದಾ ಸಿದ್ದರಿರಬೇಕಾಗಿದ್ದ ಪೊಲೀಸ್ ಸಿಬ್ಬಂದಿಯೇ ತನ್ನ ಹೆಂಡತಿಯ ಶೀಲ…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕಾಮಗಾರಿ ಮಾಡಿದ ಬಿಲ್ ಮಾಡಿಕೊಡಲು ಗುತ್ತಿಗೆದಾರನ ಬಳಿ ಲಂಚ ಪಡೆಯುವಾಗ ಅಧಿಕಾರಿಗಳು ಲೋಕಾಯುಕ್ತ ಬಲೆಗೆ…
ಬೆಂಗಳೂರಿನ ದಾಸರಹಳ್ಳಿಯಲ್ಲಿ ಸಾಕು ತಂದೆಯೊಬ್ಬ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ತಲೆಮೆರೆಸಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಈ ಭೀಕರ…
ಕೃಷಿಕರಲ್ಲದವರಿಗೆ ಇನ್ನೂ ಕೃಷಿ ಭೂಮಿ ಸಿಗುವುದಿಲ್ಲ. ಬಿಜೆಪಿ ತಂದಿದ್ದ ಭೂ ಕಾಯ್ದೆ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ…
ಸೋನಾಗಾಚಿ ರೆಡ್ ಲೈಟ್ ಪ್ರದೇಶದ ಮಹಿಳೆಯೊಬ್ಬರು ಯುವ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯ ನಂತರ ಹೃದಯ ವಿದ್ರಾವಕ ಹೇಳಿಕೆಯೊಂದಿಗೆ…
ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಬಿಲಕೆರೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬಿಲಕೆರೂರ…