Crime

“ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ: ಲಂಚಕ್ಕೆ ಡಿಮ್ಯಾಂಡ್, ಠಾಣೆಯಲ್ಲಿ ಹಲ್ಲೆ – ಪೊಲೀಸರ ವಿರುದ್ಧ ಗಂಭೀರ ಆರೋಪ!”

ಡ್ರಿಂಕ್ ಅಂಡ್ ಡ್ರೈವ್ (Drink and Drive) ತಪಾಸಣೆ ವೇಳೆ ಪೊಲೀಸರು ಲಂಚಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ ಎಂಬ ಗಂಭೀರ ಆರೋಪವೊಂದು ಮಾಡಲಾಗಿದೆ. ವಾಹನ ಸವಾರನೊಬ್ಬ, ಪೊಲೀಸ್ ಅಧಿಕಾರಿಗಳು ₹3 ಸಾವಿರ ಲಂಚಕ್ಕೆ ಒತ್ತಾಯಿಸಿದರು, ನಗದು ಕೊಡಲು ಸಾಧ್ಯವಿಲ್ಲ, ಗೂಗಲ್ ಪೇ ಮಾಡುತ್ತೇನೆ ಎಂದಾಗ ನಿರಾಕರಿಸಿದರು ಎಂದು ದೂರು ನೀಡಿದ್ದಾರೆ.

ಲಂಚದ ಬೇಡಿಕೆ ಆರೋಪ

ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೆ ದಂಡ ವಿಧಿಸಲಾಗುವುದು, ಅದನ್ನು ಕೋರ್ಟ್‌ನಲ್ಲಿ ಪಾವತಿಸಬೇಕು ಎಂಬ ನಿಯಮವಿದೆ. ಆದರೆ, ವಿಜಯನಗರ ಸಂಚಾರಿ ಠಾಣೆ ಪೊಲೀಸರು ನೇರವಾಗಿ ಹಣ ಕೇಳಿದರಂತೆ. ಈಶ್ವರ್ ಎಂಬ ಬೈಕ್ ಸವಾರನ ಪ್ರಕಾರ, ಮಾರ್ಚ್ 14ರ ರಾತ್ರಿ ಜಿಟಿ ಮಾಲ್ ಬಳಿ ಪೊಲೀಸರು ತಪಾಸಣೆ ಮಾಡುತ್ತಿದ್ದರು. ಆರ್‌ಎಕ್ಸ್ ಬೈಕ್‌ನಲ್ಲಿ ಮದ್ಯ ಸೇವಿಸಿ ಬರುತ್ತಿದ್ದ ಈಶ್ವರ್ ಅವರನ್ನು ತಡೆದು, “₹10 ಸಾವಿರ ದಂಡ ಆಗುತ್ತದೆ, ₹3 ಸಾವಿರ ನೀಡಿದರೆ ಬಿಟ್ಟುಕೊಡುತ್ತೇವೆ” ಎಂದು ತಿಳಿಸಿದ್ದರಂತೆ.

ಈಶ್ವರ್ ನಗದು ಇಲ್ಲವೆಂದು ಗೂಗಲ್ ಪೇ ಮಾಡಲು ಯತ್ನಿಸಿದಾಗ, ಪೊಲೀಸರು ಕೇವಲ ನಗದು ಬೇಕು ಎಂದು ಒತ್ತಾಯಿಸಿದ್ರಂತೆ. ಈಶ್ವರ್ ಕೋರ್ಟ್‌ನಲ್ಲಿ ಪೂರ್ಣ ದಂಡ ಪಾವತಿಸುತ್ತೇನೆ ಎಂದಾಗ, ಅವರ ಬೈಕ್ ಅನ್ನು ಠಾಣೆಗೆ ವಾಪಸು ತೆಗೆದುಕೊಂಡು ಹೋಗಿದ್ದಾರೆ.

ಠಾಣೆಯಲ್ಲಿ ಹಲ್ಲೆ ಆರೋಪ

ಮಾರ್ಚ್ 15ರಂದು ಕೋರ್ಟ್‌ನಲ್ಲಿ ₹13 ಸಾವಿರ ದಂಡ ಪಾವತಿಸಿದ ಈಶ್ವರ್, ಮಾರ್ಚ್ 16ರಂದು ತನ್ನ ಸ್ನೇಹಿತನೊಂದಿಗೆ ಬೈಕ್ ವಾಪಸು ಪಡೆಯಲು ವಿಜಯನಗರ ಸಂಚಾರಿ ಪೊಲೀಸ್ ಠಾಣೆಗೆ ತೆರಳಿದ್ದರು. ಅದೇ ಸಂದರ್ಭದಲ್ಲಿ, ಪೊಲೀಸರು ಅವರ ಮೇಲೆ ಹಲ್ಲೆ ನಡೆಸಿದ್ರಂತೆ.

ಆಸ್ಪತ್ರೆಯಿಂದ ವಿಡಿಯೋ ಮೂಲಕ ದೂರು
ಈಶ್ವರ್ ಹಲ್ಲೆಯ ಬಗ್ಗೆ ವಿಡಿಯೋ ಮಾಡಿದ್ದು, “ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೂಟ್ ನಿಂದ ಒದ್ದಿದ್ದಾರೆ. ಹಲ್ಲೆಯಿಂದ ನಾನು ಅಸ್ವಸ್ಥನಾಗಿದ್ದೆ, ಸ್ನೇಹಿತರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ” ಎಂದು ಹೇಳಿದ್ದಾರೆ.

ಪೊಲೀಸ್ ಇಲಾಖೆಯಿಂದ ತನಿಖೆ

ಈ ಪ್ರಕರಣ ಸಂಬಂಧ ಪಶ್ಚಿಮ ವಿಭಾಗ ಸಂಚಾರ ಡಿಸಿಪಿ ಅನಿತಾ ಹದ್ದಣ್ಣನವರ್ ಅವರು ವರದಿ ಕೇಳಿದ್ದಾರೆ. ಎಸಿಪಿ ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.

ಭ್ರಷ್ಟರ ಬೇಟೆ

Recent Posts

ಹಿರಿಯ ಸೇನಾ ಅಧಿಕಾರಿ ಮತ್ತು ಆತನ ಪುತ್ರನ ಮೇಲೆ ಪೊಲೀಸ್ ಹಲ್ಲೆ: 12 ಅಧಿಕಾರಿಗಳು ಅಮಾನತು

ಪಟಿಯಾಲಾದಲ್ಲಿ ಹಿರಿಯ ಸೇನಾ ಅಧಿಕಾರಿ ಪುಷ್ಪಿಂದರ್ ಸಿಂಗ್ ಬಾತ್ ಮತ್ತು ಅವರ ಮಗ ಅಂಗದ್ ಸಿಂಗ್ ಮೇಲೆ ಮೂವರು ಪಂಜಾಬ್…

14 hours ago

ಪತಿಗೆ ಮದ್ಯ ಕುಡಿಸಿ ನವವಿವಾಹಿತೆಯ ಮೇಲೆ ಅತ್ಯಾಚಾರ…!

ಒಡಿಶಾದ ಬಾಲಸೋರ್ ಜಿಲ್ಲೆಯ ಜಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಬಲಿಯಾಪಾಳ ಗ್ರಾಮದಲ್ಲಿ ನೊಂದ ಮಹಿಳೆಯ ನೆರೆಮನೆಯವನೊಬ್ಬ ಅತ್ಯಾಚಾರ ಎಸಗಿದ ಘಟನೆಯು…

14 hours ago

ರಾಜ್ಯದಲ್ಲೇ ಅತಿದೊಡ್ಡ ಖೋಟಾ ನೋಟು ಜಾಲ ಪತ್ತೆ: ಕಾನ್ಸ್‌ಸ್ಟೇಬಲ್ ಸೇರಿ ನಾಲ್ವರು ಬಂಧನ

ರಾಯಚೂರಿನ ಪಶ್ಚಿಮ ಠಾಣೆ ಪೊಲೀಸರು ರಾಜ್ಯದಲ್ಲೇ ಅತಿದೊಡ್ಡ ಖೋಟಾ ನೋಟು ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ದಂಧೆಯಲ್ಲಿ ತೊಡಗಿದ್ದ ಪೊಲೀಸರು…

14 hours ago

ಪಾಕ್ ಕ್ರಿಕೆಟಿಗ ರಜಾ ಹಸನ್ ಭಾರತ ಮೂಲದ ಪೂಜಾ ಬೊಮನ್ ಜೊತೆ ಎಂಗೇಜ್: ನ್ಯೂಯಾರ್ಕ್‌ನಲ್ಲಿ ಸೆಟಲ್

ಪಾಕಿಸ್ತಾನ ಕ್ರಿಕೆಟಿಗ ರಜಾ ಹಸನ್ ಭಾರತ ಮೂಲದ ಹಿಂದೂ ಯುವತಿ ಪೂಜಾ ಬೊಮನ್ ಜೊತೆ ನ್ಯೂಯಾರ್ಕ್‌ನಲ್ಲಿ ಸೆಟಲ್ ಆಗಿದ್ದು, ಇವರ…

14 hours ago

ಕ್ರಿಸ್ ಗೇಲ್ ಹೆಸರು ದುರುಪಯೋಗಿಸಿ 2.8 ಕೋಟಿ ರೂ. ವಂಚನೆ: ಹೈದರಾಬಾದ್‌ನಲ್ಲಿ ಹೂಡಿಕೆ ಹಗರಣ

ಹೈದರಾಬಾದ್‌ನಲ್ಲಿ ವ್ಯಕ್ತಿಯೊಬ್ಬ ಪಶ್ಚಿಮ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಹೆಸರನ್ನು ಬಳಸಿಕೊಂಡು 2.8 ಕೋಟಿ ರೂ. ವಂಚನೆ ನಡೆಸಿದ ಘಟನೆ…

14 hours ago

ಹಫೀಜ್ ಸಯೀದ್ ಸಾವಿನ ವದಂತಿಗಳು: ಪಾಕಿಸ್ತಾನಿ ಪತ್ರಕರ್ತೆ ಮೋನಾ ಆಲಂ ಸ್ಪಷ್ಟನೆ

ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಕೊಲ್ಲಲ್ಪಟ್ಟಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಪಾಕಿಸ್ತಾನಿ ಪತ್ರಕರ್ತೆ ಮೋನಾ ಆಲಂ…

14 hours ago