ಬಾಗಲಕೋಟೆ: ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ನಾಯನೆಗಲಿ ಟೋಲ್ ನ ಕಾರ್ಮಿಕ ಪೇಮೆಂಟ್ ಹಾಗೂ ಕೆಲಸದಿಂದ ತೆಗೆದಿದ್ದಕ್ಕಾಗಿ ಮನನೊಂದು ಆತ್ಮಹತ್ಯೆಗೆ ಶರಣು.ನಾಯನೆಗಲಿ ಗ್ರಾಮದ ವಾರೆಪ್ಪ ಪೂಜಾರಿ ಮೃತ ವ್ಯಕ್ತಿ.ಗ್ರಾಮದ ಟೋಲ್ ನಲ್ಲಿ ಕಾರ್ಮಿಕರನ್ನು ಬಿಟ್ಟು ಕೆಲಸ ಮಾಡಿಸುತ್ತಿದ್ದ ಸುಮಾರು 10 ತಿಂಗಳಿಂದ ಟೋಲ್ ಕಂಪನಿಯವರು ಪೇಮೆಂಟ್ ಕೊಟ್ಟಿರುವುದಿಲ್ಲ, ಕೇಳೋಕೆ ಹೋಗಿದ್ದಾಗ ಎಲ್ಲಿ ಆರ ಹೋಗಿ ಆತ್ಮಹತ್ಯೆ ಮಾಡಿಕೊಂಡು ಸಾಯಿ ನಿನಗ ಪೇಮೆಂಟು ಕೊಡಲ್ಲ,ನಿನ್ನ ಕೆಲಸದಿಂದ ತೆಗೆದು ಹಾಕ್ತೀವಿ ಎಂದು ದಬ್ಬಾಳಿಕೆ ಮಾಡಿ ಕೆಲಸದಿಂದ ಸಹ ತೆಗೆದು ಹಾಕಿದ್ದರು,ಇದರ ಸಲುವಾಗಿ ಎರಡು ದಿನದಿಂದ ಟೋಲ್ ನ ಮುಂಭಾಗ ಕಾರ್ಮಿಕರ ನ್ನು ಇಟ್ಟುಕೊಂಡು ಪ್ರತಿಭಟನೆ ಮಾಡಿದರು ಸ್ಪಂದನೆ ಮಾಡದ ಅಧಿಕಾರಿಗಳ ನಡೆಗೆ ಮನನೊಂದು ಆತ್ಮಹತ್ಯೆಗೆ ಇಡಾಗಿದ್ದಾರೆ.ಟೂಲ್ ನ ಬಾಜು ಈ ಘಟನೆ ಸಿಸಿ ಟಿವಿಯಲ್ಲಿ ಸೇರೆಯಾಗಿದ್ದು ಅವರಿಗೆ ಕಾನಲಿಲ್ಲವೆ ಎಂಬ ಪ್ರಶ್ನೆ ಎದ್ದು ಕಾಣುತ್ತದೆ,ಇದಕ್ಕೆ ನೇರ ಕಾರಣ ಈ ಪಿಎಂಬಿಪಿಎಲ್ ಕಂಪನಿಯ ಸಾಯಿರಾಂ,ಬಸವನಗೌಡ ಪಾಟೀಲ ಸೋಲ್ಹಾಪೂರ,ಪರಶುರಾಮ ಮಾಳವಿ,ದುರ್ಗಪ್ಪ ಮಾದರ,ರಾಮನಗೌಡ ಮರಿಗೌಡ್ರ,ಸಿಖಂಧರ ರೇಷ್ಮಿ ರವರೆಂದು ನೊಂದ ಕುಟುಂಬಸ್ಥರ ಆಕ್ರಂದನವಾಗಿದೆ,ಸ್ಥಳಕ್ಕೆ ಡಿವೈಎಸ್ಪಿ ಹಾಗೂ ಸಿಪಿಐ ರವರು ಬೇಟಿ ನೀಡಿದ್ದಾರೆ.

ವರದಿ:ಸಂಗಪ್ಪ ಚಲವಾದಿ

error: Content is protected !!