Latest

ಕಿರಾಣಿ ಅಂಗಡಿಗಳಿಗೆ ಅಕ್ರಮವಾಗಿ ಮದ್ಯ ಪೂರೈಕೆ; ಕಣ್ಮುಚ್ಚಿ ಕುಳಿತಿರುವ ನಾಲಾಯಕ್ ಅಧಿಕಾರಿಗಳು!

ಬಿಜಾಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನಲ್ಲಿ ಕಿರಾಣಿ ಅಂಗಡಿಗಳು ಹಾಗೂ ಪಾನ್ ಶಾಪ್ ಗಳಲ್ಲಿ ಸಹ ಮದ್ಯ ದೊರೆಯುತ್ತಿದೆ. ಬೇನಾಳ ಆರ್ ಸಿ ಗ್ರಾಮದ ಅಂಗಡಿಗಳಿಗೆ ಒಟಿ, ಬಿಪಿ, ವಿಸ್ಕಿ ಮುಂತಾದ ಬ್ರ್ಯಾಂಡ್ ಗಳನ್ನು ಆಲಮಟ್ಟಿ ಮಾರ್ಗದಿಂದ ಬಂದು ಬೇನಾಳ ಗ್ರಾಮ ಹಾಗೂ ಚಿಮ್ಮಲಗಿ ಗಣಿ ಮುಂತಾದ ಗ್ರಾಮಗಳಿಗೆ KA 29 A 7515 ನಂಬರ್ ನ ಆಟೋದಲ್ಲಿ ದಿನಾಲೂ ಗ್ರಾಮದ ಕಿರಾಣಿ ಅಂಗಡಿಗಳಿಗೆ ಹಾಗೂ ಪಾನ್ ಶಾಪ್ ಗಳಿಗೆ ಪುರೈಕೆ ಮಾಡುತ್ತಿದ್ದಾರೆ.

ಸ್ಥಳೀಯರ ಮಾಹಿತಿ ಮೇರೆಗೆ ಭ್ರಷ್ಟರ ಬೇಟೆ ಪತ್ರಿಕೆಯ ವರದಿಗಾರರು ಇಂದು ಮುಂಜಾನೆ ಅಕ್ರಮವಾಗಿ ಮದ್ಯಪೂರಕ್ಕೆ ಮಾಡುತ್ತಿರುವ ಆಟೋವನ್ನು ಹಿಡಿದು ಪ್ರಶ್ನಿಸಿರುತ್ತಾರೆ. ಆತ ನನಗೆ ಲೈಸೆನ್ಸ್ ಕೊಟ್ಟಿದ್ದಾರೆ ನಾನು ಎಲ್ಲಾ ಕಡೆ ಪೂರೈಕೆ ಮಾಡಬಹುದು ಎಂದು ಹೇಳಿಕೊಂಡಿರುತ್ತಾನೆ. ಈ ರೀತಿ ಕಿರಾಣಿ ಅಂಗಡಿಗಳಿಗೆ ಹಾಗೂ ಪಾನ್ ಶಾಪ್ ಗಳಿಗೆ ಪೂರೈಕೆ ಮಾಡಲು ಅನುಮತಿ ಕೊಟ್ಟವರು ಯಾರು?

ರಾಜಾರೋಷವಾಗಿ ನನಗೆ ಅನುಮತಿ ಕೊಟ್ಟಿದ್ದಾರೆ ನಾನು ಪೂರೈಕೆ ಮಾಡುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದಾನೆ ಎಂದರೆ ಇವನಿಗೆ ಇಷ್ಟು ಧೈರ್ಯ ಬರಲು ಅಧಿಕಾರಿಗಳೇ ಕಾರಣಾನಾ? ರಾಜ ರೋಷವಾಗಿ ಈ ರೀತಿ ಬೆಳಗಿನ ಹೊತ್ತೆ ಅಕ್ರಮ ಮದ್ಯವನ್ನು ಅಂಗಡಿಗಳಿಗೆ ಪೂರೈಕೆ ಮಾಡುತ್ತಿದ್ದರು ಸಹ ಕುರುಡರಂತೆ ವರ್ತಿಸುತ್ತಿರುವ ಅಧಿಕಾರಿಗಳಿಗೆ ಏನೆನ್ನಬೇಕು? ಅಕ್ರಮವಾಗಿ ಮದ್ಯ ಸಾಗಾಣಿಕೆಗೆ ಬಿಟ್ಟು ಅಧಿಕಾರಿಗಳೇನು ಕಮಿಷನ್ ಲೆಕ್ಕ ಹಾಕುತ್ತಿದ್ದಾರಾ? ಅಥವಾ ನಮಗೇಕೆ ಎಂದು ನಿದ್ದೆ ಮಾಡುತ್ತಿದ್ದಾರಾ?

ಪ್ರತಿಯೊಂದು ಹಳ್ಳಿಗಳಿಗೆ ಈ ರೀತಿ ಮದ್ಯವನ್ನು ಪೂರೈಕೆ ಮಾಡಿದರೆ ಅಲ್ಲಿನ ಜನರು ಕುಡಿದು ಹಾಳಾಗಿ ಅವರ ಕುಟುಂಬ ಬೀದಿಗೆ ಬಂದರೆ ನೋಡುವವರು ಯಾರು?  ಬಾಗೇವಾಡಿ ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮದ್ಯ ಸಾಗಾಣಿಕೆ ಹಾಗೂ ಮದ್ಯ ಮಾರಾಟಕ್ಕೆ ಕಡಿವಾಣ ಯಾವಾಗ?

ವರದಿ: ಸಂಗಪ್ಪ ಚಲವಾದಿ

 

kiran

Recent Posts

ಪತ್ನಿಯ ಶೀಲ ಶಂಕಿಸಿ ಶೆಡ್ ನಲ್ಲಿ ಕೂಡಿಟ್ಟ ಪೊಲೀಸ್ ಪೇದೆ.

ಜನರಿಗೆ ನ್ಯಾಯ ಕೊಡಿಸಬೇಕಿದ್ದ ಮಹಿಳೆಯರ ರಕ್ಷಣೆ ಮಾಡಬೇಕಿದ್ದ ಮಹಿಳೆಯರ ರಕ್ಷಣೆ ಸದಾ ಸಿದ್ದರಿರಬೇಕಾಗಿದ್ದ ಪೊಲೀಸ್ ಸಿಬ್ಬಂದಿಯೇ ತನ್ನ ಹೆಂಡತಿಯ ಶೀಲ…

1 month ago

ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕಾಮಗಾರಿ ಮಾಡಿದ ಬಿಲ್ ಮಾಡಿಕೊಡಲು ಗುತ್ತಿಗೆದಾರನ ಬಳಿ ಲಂಚ ಪಡೆಯುವಾಗ ಅಧಿಕಾರಿಗಳು ಲೋಕಾಯುಕ್ತ ಬಲೆಗೆ…

1 month ago

ಸಾಕು ತಂದೆಯಿಂದಲೇ ಭೀಕರ ಕೊಲೆಯಾದ ಇಬ್ಬರು ಹೆಣ್ಣು ಮಕ್ಕಳು.

ಬೆಂಗಳೂರಿನ ದಾಸರಹಳ್ಳಿಯಲ್ಲಿ ಸಾಕು ತಂದೆಯೊಬ್ಬ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ತಲೆಮೆರೆಸಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಈ ಭೀಕರ…

1 month ago

ಇನ್ನು ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿಸುವಂತಿಲ್ಲ: ಸಿಎಂ

ಕೃಷಿಕರಲ್ಲದವರಿಗೆ ಇನ್ನೂ ಕೃಷಿ ಭೂಮಿ ಸಿಗುವುದಿಲ್ಲ. ಬಿಜೆಪಿ ತಂದಿದ್ದ ಭೂ ಕಾಯ್ದೆ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ…

2 months ago

ಕಾಮ ಬಯಕೆ ಇದ್ದರೇ ‘ರೆಡ್ ಲೈಟ್ ಏರಿಯಾ’ಗೆ ಬನ್ನಿ, ಅತ್ಯಾಚಾರ ಮಾಡಬೇಡಿ: ಲೈಂಗಿಕ ಕಾರ್ಯಕರ್ತೆ

ಸೋನಾಗಾಚಿ ರೆಡ್ ಲೈಟ್ ಪ್ರದೇಶದ ಮಹಿಳೆಯೊಬ್ಬರು ಯುವ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯ ನಂತರ ಹೃದಯ ವಿದ್ರಾವಕ ಹೇಳಿಕೆಯೊಂದಿಗೆ…

2 months ago

ಶಾಲೆಯ ಮುಂದೆ ಇಲ್ಲ ಸ್ವಚ್ಛತೆ; ರೋಗಕ್ಕೆ ಆಹ್ವಾನ ನೀಡುತ್ತಿರುವ ಪಿಡಿಒ!

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಬಿಲಕೆರೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬಿಲಕೆರೂರ…

2 months ago