ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಗ್ರಾಮವೊಂದರಲ್ಲಿ ಅತ್ಯಾಚಾರ ಪ್ರಕರಣದ ಆರೋಪದಲ್ಲಿ ಸರ್ಕಾರಿ ಪ್ರೌಢಶಾಲೆಯ ಅತಿಥಿ ಶಿಕ್ಷಕನೊಬ್ಬನನ್ನು ಮಾದನಹಿಪ್ಪರಗಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು 32 ವರ್ಷದ ಶಿವರಾಜ ಹಣಮಂತ ಎಂದು ಗುರುತಿಸಲಾಗಿದೆ.

ಪೊಲೀಸರು ನೀಡಿದ ಮಾಹಿತಿಯಂತೆ, 14 ವರ್ಷದ ಬಾಲಕಿ, 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ತನ್ನ ತಾಯಿ ಯುಗಾದಿ ಹಬ್ಬದ ನಿಮಿತ್ತ ಇತರೆ ಮಕ್ಕಳೊಂದಿಗೆ ತವರು ಮನೆಗೆ ತೆರಳಿದ್ದಾಗ ಸಂತ್ರಸ್ತೆ ಬಾಲಕಿ ಮಾತ್ರ ಪರೀಕ್ಷೆಯ ಕಾರಣದಿಂದಾಗಿ ಮನೆದಲ್ಲಿಯೇ ಉಳಿದಿದ್ದಳು.

ಸಂಜೆ ವೇಳೆ, ಅಜ್ಜಿಯ ಮನೆಯಿಂದ ತಿರುಗಿ ಬಂದ ಬಾಲಕಿ ತನ್ನ ಸ್ನೇಹಿತರ ಜತೆ ಮನೆಯಲ್ಲೇ ಟಿವಿ ನೋಡುತ್ತಿದ್ದ ಸಂದರ್ಭದಲ್ಲೇ, ಇತ್ತೀಚೆಗೆ ಅದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಅತಿಥಿ ಶಿಕ್ಷಕ ಶಿವರಾಜ, ಬಾಲಕಿಯನ್ನು ಹಿಂಬಾಲಿಸಿ ಮನೆಯೊಳಗೆ ನುಗ್ಗಿದ್ದಾನೆ. ಈ ದೃಶ್ಯ ಕಂಡ ಬಾಲಕಿಯ ಸ್ನೇಹಿತರು ಭಯಪಟ್ಟು ಸ್ಥಳದಿಂದ ಓಡಿದಿದ್ದಾರೆ.

ಬಾಲಕಿಯು ತಾಯಿ-ತಂದೆ ಇಲ್ಲದಾಗ ನಿನ್ನಗೆ ಏಕೆ ಬಂದೆ ಎಂದು ಕೇಳಿದಾಗ, ಶಿಕ್ಷಕ “ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ನಂಬಿಸಿ, ಬೆದರಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಹೀನ ಕೃತ್ಯ ನಂತರ ಪರಾರಿಯಾಗಿದ್ದ ಶಿಕ್ಷಕನನ್ನು ಪೊಲೀಸರು ಶೋಧಿಸಿ ಬಂಧಿಸಿದ್ದಾರೆ.

ಅತ್ಯಾಚಾರದಿಂದ ಪ್ರಜ್ಞೆ ತಪ್ಪಿದ ಬಾಲಕಿಯನ್ನು ಪೋಷಕರು ತಕ್ಷಣವೇ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ಪ್ರಜ್ಞೆ ಗೆತ್ತಿಕೊಂಡ ನಂತರ ಆತ ಮಾಡಿದ ದುಷ್ಕೃತ್ಯವನ್ನು ಪೋಷಕರಿಗೆ ತಿಳಿಸಿದ್ದಾಳೆ.

ಮಾಹಿತಿ ಪಡೆದುಕೊಂಡ ಪೊಲೀಸರ ತಂಡವು ಪ್ರಕರಣ ದಾಖಲಿಸಿಕೊಂಡು, ಪೊಕ್ಸೊ (POCSO) ಕಾಯ್ದೆಯಡಿಯಲ್ಲಿ ಕಾನೂನು ಕ್ರಮ ಜರುಗಿಸಿದ್ದು, ತನಿಖೆ ಮುಂದುವರಿಸುತ್ತಿದ್ದಾರೆ.

Related News

error: Content is protected !!