ಮುಂಡಗೋಡ: ಪಟ್ಟಣದ ಬೆಂಡಿಗೇರಿ ಪೆಟ್ರೋಲ್ ಬಂಕ್ ಹತ್ತಿರ ನಿಲ್ಲಿಸಿದ್ದ ಬೈಕನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ.
ಅಕ್ಟೋಬರ್ 17 ರಂದು ಮುಂಡಗೋಡದ ಬೆಂಡಿಗೇರಿ ಪೆಟ್ರೋಲ್ ಬಂಕ್ ಹತ್ತಿರ ನಿಲ್ಲಿಸಿದ್ದ ಬಜಾಜ್ ಪ್ಲಾಟಿನಾ ಬೈಕನ್ನು ಯಾರೋ ಕಳ್ಳತನ ಮಾಡಿದ್ದಾರೆಂದು ಲಕ್ಕೊಳ್ಳಿ ಗ್ರಾಮದ ಕೃಷ್ಣಾ ಸಿಂಗನಳ್ಳಿ ಅವರು ದೂರು ದಾಖಲಿಸಿದ್ದರು.
ಈ ಪ್ರಕರಣವನ್ನು ಕೈಗೆತ್ತಿಕೊಂಡ ಮುಂಡಗೋಡ ಪೊಲೀಸರು ತಾಲೂಕಿನ ಬಡ್ಡಿಗೇರಿ ಗ್ರಾಮದ ವಿಠ್ಠೂ ಬೀರು ಎಡಿಗೆ ಎಂಬಾತನನ್ನು ಬಂಧಿಸಿ ಕಳ್ಳತನ ಮಾಡಿದ್ದ ಬೈಕನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣವನ್ನು ಭೇದಿಸಲು ಉತ್ತರ ಕನ್ನಡದ ಎಸ್.ಪಿ.ಸುಮನ್ ಪನ್ನೆಕರ್,ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಎಸ್. ಬದರಿನಾಥ್,ಡಿ.ಎಸ್.ಪಿ. ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಸಿದ್ದಪ್ಪ ಸಿಮಾನಿ,ಪಿ.ಎಸ್.ಐ ಬಸವರಾಜ್ ಮಬನೂರ,ಪಿ.ಎಸ್.ಐ ನಿಂಗಪ್ಪ ಜಕ್ಕಣ್ಣವರ,ಪ್ರೊಬೇಷನರಿ ಪಿ.ಎಸ್.ಐ ಮಹೇಶ ಮಾಳಿ,ಸಿಬ್ಬಂದಿಗಳಾದ ಮಹ್ಮದ ಸಲಿಂ,ಕೊಟೇಶ್ ನಾಗರವಳ್ಳಿ ಅಣ್ಣಪ್ಪ ಬಡಿಗೇರ,ಬಸವರಾಜ ಲಮಾಣಿ, ಶಂಭುಲಿಂಗ ಜಾವೂರ,ಅರುಣ ಬಾಗೇವಾಡಿ,ಎ ಎಚ್ ಸಿ ನಾಗರಾಜ ಬೇಗಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರುಗಳಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಕಾರವಾರ ರವರು ಪ್ರಶಂಸಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ
ವರದಿ: ಮಂಜುನಾಥ ಹರಿಜನ

error: Content is protected !!