ಚೆನ್ನೈ ಸೂಪರ್ ಕಿಂಗ್ಸ್‌ಗೆ (CSK) ಭಾರೀ ನಷ್ಟವಾಗಿದ್ದು, ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಐಪಿಎಲ್ 2025ರ ಮುಂದಿನ ಪಂದ್ಯಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಮೊಣಕೈ ಮೂಳೆ ಮುರಿತದಿಂದಾಗಿ ಅವರು ಟೂರ್ನಿಯಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ. ಈ ಹಿನ್ನೆಲೆ, ಎಂಎಸ್ ಧೋನಿ ಮತ್ತೆ ತಂಡದ ನಾಯಕತ್ವ ವಹಿಸಲಿದ್ದಾರೆ.

ಈ ಕುರಿತು ಸಿಎಸ್ಕೆದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಗುರುವಾರ (ಏಪ್ರಿಲ್ 10) ಸ್ಪಷ್ಟನೆ ನೀಡಿದ್ದು, ಚೆನ್ನೈನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.

ಗಾಯಕ್ವಾಡ್‌ಗೇನಾಯಿತು ಎಂಬ ವಿವರಕ್ಕೆ ಬಾರದ್ರೆ, ಮಾರ್ಚ್ 30ರಂದು ಗುವಾಹಟಿಯಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಜೋಫ್ರಾ ಆರ್ಚರ್ ಎಸೆದ ಶಾರ್ಟ್ ಬಾಲ್‌ ಏರಿ ಅವರ ಮೊಣಕೈಗೆ ಬಿದ್ದಿದೆ. ತಕ್ಷಣ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಮೂಳೆ ಮುರಿತವಾಗಿರುವುದು ದೃಢಪಟ್ಟಿದೆ.

ಈ ಗಾಯದಿಂದಾಗಿ ಅವರು ಈ ಋತುವಿನ ಉಳಿದ ಪಂದ್ಯಗಳಿಂದ ಹೊರಬಿದ್ದಿದ್ದು, ಧೋನಿ ಮತ್ತೆ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಧೋನಿಯ ಅನುಭವ ಹಾಗೂ ನಾಯಕತ್ವ CSKಗೆ ಇತರ ಪಂದ್ಯಗಳಲ್ಲಿ ಬಲ ನೀಡಲಿದೆ ಎನ್ನಲಾಗಿದೆ.

Related News

error: Content is protected !!