Latest

ಕ್ಷೀರಭಾಗ್ಯ ಹಾಲಿನ ಪುಡಿ ಕಳ್ಳಸಾಗಾಣಿಕೆ: ಗದಗದಲ್ಲಿ ಭರ್ಜರಿ ಪೊಲೀಸ್ ಕಾರ್ಯಾಚರಣೆ, ಇಬ್ಬರು ಬಂಧನ!

FacebookFacebookTwitterTwitterEmailEmailWhatsAppWhatsAppCopy LinkCopy LinkShareShare

ಗದಗ: ಬಡ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲು ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಕ್ಷೀರಭಾಗ್ಯ ಯೋಜನೆಗೆ ಖದೀಮರು ಕನ್ನ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಯೋಜನೆಯಡಿ ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಣೆಯಾಗಬೇಕಿದ್ದ ಹಾಲಿನ ಪುಡಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಗದಗ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

ಬೆಟಗೇರಿ ಪೊಲೀಸರು ಕಾರ್ಯಾಚರಣೆ ನಡೆಸಿ, ಮಹಾರಾಷ್ಟ್ರ ಪಾಸಿಂಗ್ ಹೊಂದಿರುವ ಕ್ಯಾಂಟರ್ ವಾಹನವನ್ನು ವಶಕ್ಕೆ ಪಡೆದು 313 ಕೆಜಿ ಹಾಲಿನ ಪುಡಿಯನ್ನು ಜಪ್ತಿ ಮಾಡಿದ್ದಾರೆ. ಈ ಹಾಲಿನ ಪುಡಿಯ ಮೌಲ್ಯ ಒಂದು ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ.

ಬಂಧಿತರು ಮತ್ತು ಅವರ ದಂಧೆ:
ಗೋಳಮಾರುಲು ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆ ಇಂಡಿ ಮೂಲದ ಸಂತೋಷ ಶಿಂದೆ (32) ಮತ್ತು ಬೆಟಗೇರಿಯ ಖಾಜಾಹುಸೇನ್ ಖಾದರನ್ನವರ (31) ಎಂಬುವರೇ ಈ ಅಪರಾಧದಲ್ಲಿ ಸಿಕ್ಕಿಬಿದ್ದವರು.

ಅವರ ದಂಧೆಯ ರೀತಿ ವಿಚಿತ್ರವಾಗಿದ್ದು, ಯಾರಿಗೂ ಅನುಮಾನ ಬಾರದಂತೆ ಶೇಂಗಾ ಹೊಟ್ಟಿನ ಚೀಲಗಳ ಮಧ್ಯೆ ಹಾಲಿನ ಪುಡಿಯನ್ನು ಮುಚ್ಚಿ ಸಾಗಾಟ ಮಾಡುತ್ತಿದ್ದರು. ಆದರೆ, ಪೊಲೀಸರ ಗುಪ್ತ ಮಾಹಿತಿ ಆಧಾರದ ಮೇಲೆ ನಡೆದ ಕಾರ್ಯಾಚರಣೆಯಲ್ಲಿ ಅವರ ಅಕ್ರಮ ಪತ್ತೆಯಾಗಿದ್ದು, ಬೆಟಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಘಟನೆಯು, ಸರ್ಕಾರದ ಪೌಷ್ಟಿಕ ಆಹಾರ ಯೋಜನೆಗಳ ಮೇಲೆ ಕಳ್ಳಸಾಗಣೆ ಮафಿಯಾ ಕೈಚಳಕ ಮುಂದುವರಿಯುತ್ತಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಪೊಲೀಸರು ಈ ದಂಧೆಯ ಹಿಂದಿನ ಮಾಫಿಯಾ ನಂಟುಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

nazeer ahamad

Recent Posts

ಅನಧಿಕೃತ ಕ್ಲಿನಿಕ್ ಗಳಿಗೆ ಬೀಗ ಜಡಿದ ಕೆ.ಪಿ.ಎಮ್.ಇ ಮುಂಡಗೋಡ ಪ್ರಾಧಿಕಾರ

ಮುಂಡಗೋಡ :- ತಾಲೂಕಿನಲ್ಲಿ ಕೆ.ಪಿ.ಎಮ್.ಇ ಖಾಯಿದೆ ಅಡಿಯಲ್ಲಿ ಕೆ.ಪಿ.ಎಮ್.ಇ ಮುಂಡಗೋಡ ಪ್ರಾಧಿಕಾರದ ತಂಡವು ದಾಳಿ ನಡೆಸಿ ಅನಧೀಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದ…

6 hours ago

ಮನೆಗಳಿಗೆ ನುಗ್ಗಿದ ನಾಗರಹಾವು; ಅರಣ್ಯ ಇಲಾಖೆಯಿಂದ ಸಂರಕ್ಷಣೆ.

ಹಾನಗಲ್ ತಾಲೂಕಿನ ಹೊಸಕೋಪ್ಪಾ ಗ್ರಾಮದ ಬಸವರಾಜ ಗೌಳಿ ಅವರ ಮನೆಯೊಳಗೆ ನುಗ್ಗಿದ ನಾಗರ ಹಾವನ್ನು ಗಿರೀಶ್ ವಲಯ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ…

6 hours ago

ಗುಂಡ್ಲುಪೇಟೆ: ಗಾಂಜಾ ಸಾಗಾಟದಲ್ಲಿ ಇಬ್ಬರು ಆರೋಪಿಗಳ ಬಂಧನ

ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಠಾಣೆ ಪೊಲೀಸರು ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ತ್ರಯಂಬಕಪುರ ಬಳಿ ಗುರುವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು…

6 hours ago

ಮಗುವಿಗೆ ಕಿರುಕುಳ: ಅಂಗನವಾಡಿ ಸಹಾಯಕಿ ಅಮಾನತು

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮಹಾರಾಜಕಟ್ಟೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಶೋಚನೀಯ ಘಟನೆ ಬೆಳಕಿಗೆ ಬಂದಿದೆ. ಅಂಗನವಾಡಿ ಸಹಾಯಕಿ ಚಂದ್ರಮ್ಮ…

7 hours ago

ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ: ಪ್ರೊಫೆಸರ್ ರಜನೀಶ್ ಕುಮಾರ್ ಬಂಧನ

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಸದ್ಯ ಭಾರೀ ಸಂಚಲನ ಸೃಷ್ಟಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸರ್ಕಾರಿ ಅನುದಾನಿತ ಕಾಲೇಜಿನ ಪ್ರಾಧ್ಯಾಪಕ ರಜನೀಶ್…

11 hours ago

ಪತ್ನಿಯ ಮೇಲೆ ಪತಿಯ ಕ್ರೂರ ಹಲ್ಲೆ: ಬ್ಯಾಂಕ್ ಮುಂದೆ ಆತಂಕಕಾರಿ ಘಟನೆ.

ಕೇರಳದ ತಳಿಪರಂಬದಲ್ಲಿ ಪತಿಯೊಬ್ಬ ತನ್ನ ಪತ್ನಿ ಮೇಲೆ ಭೀಕರ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಎಸ್‌ಬಿಐ ಪೂವಂ ಶಾಖೆಯಲ್ಲಿ…

11 hours ago