Crime

ಜೀವ ರಕ್ಷಕರೇ ಹಿಟ್ ಅಂಡ್ ರನ್ – ಸ್ಕೂಟರ್ ಗೆ ಗುದ್ದಿ ಪೊಲೀಸರು ಎಸ್ಕೇಪ್: ಸ್ಕೂಟರ್ ಸವಾರ ಬಲಿ!

ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ಮಚ್ಚೇರಿ ಗ್ರಾಮದಲ್ಲಿ ಜೀವ ಉಳಿಸಬೇಕಾದ ಪೊಲೀಸರೇ ಹಿಟ್ ಅಂಡ್ ರನ್ ಅಪಘಾತ ಮಾಡಿ ಪರಾರಿಯಾದ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸ್ ಜೀಪ್ ಹಿಂಬದಿಯಿಂದ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತನನ್ನು ಗಂಗಾಧರ್ (49) ಎಂದು ಗುರುತಿಸಲಾಗಿದೆ.

ಪೊಲೀಸ್ ಜೀಪ್ ಡಿಕ್ಕಿ – ಸ್ಥಳದಲ್ಲೇ ಸ್ಕೂಟರ್ ಸವಾರ ಸಾವು

ಕಡೂರು – ಮರವಂಜಿ ರಾಜ್ಯ ಹೆದ್ದಾರಿಯಲ್ಲಿ ಸಿಂಗಟಗೆರೆ ಪೊಲೀಸ್ ಠಾಣೆಗೆ ಸೇರಿದ ಜೀಪ್ ವೇಗವಾಗಿ ಬಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದೆ. ಅಪಘಾತದ ತಕ್ಷಣವೇ ಪೊಲೀಸರು ಜೀಪ್ ನಿಲ್ಲಿಸದೆ ಪರಾರಿಯಾದ ಘಟನೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಥಳೀಯರಿಂದ ತೀವ್ರ ಆಕ್ರೋಶ

ಘಟನಾ ಸ್ಥಳದಲ್ಲಿ ನೂರಾರು ಸ್ಥಳೀಯರು ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದಾರೆ. ಮೃತದೇಹವನ್ನು ಸ್ಥಳದಿಂದ ತೆಗೆದುಕೊಳ್ಳಲು ಸಹ ಒಪ್ಪುತ್ತಿಲ್ಲ. ಪೊಲೀಸರ ನಿರ್ಲಕ್ಷ್ಯ ಮತ್ತು ಮಾನವೀಯತೆಯನ್ನು ಮರೆತು ಪರಾರಿಯಾದ ನಡೆ ಖಂಡನೆಗೆ ಕಾರಣವಾಗಿದೆ.

ಪೊಲೀಸ್ ಜೀಪ್ ಚಾಲಕ ಅಮಾನತು – ಪ್ರಕರಣ ದಾಖಲು

ಘಟನೆ ಸಂಬಂಧ ಚಿಕ್ಕಮಗಳೂರು ಎಸ್‌ಪಿ ವಿಕ್ರಮ್ ಅಮಟೆ ತಕ್ಷಣ ಕಠಿಣ ಕ್ರಮ ಕೈಗೊಂಡಿದ್ದು, ಜೀಪ್ ಚಾಲಕ ಶಿವಕುಮಾರ್ ಅವರನ್ನು ಅಮಾನತು ಮಾಡಿದ್ದಾರೆ. ಅಲ್ಲದೆ, ಪೊಲೀಸ್ ವಾಹನವನ್ನು ವಶಕ್ಕೆ ಪಡೆದು, ಶಿವಕುಮಾರ್ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಘಟನೆ ಪೊಲೀಸರ ನಿಯಂತ್ರಣಹೀನತೆಗೆ ಮತ್ತೊಮ್ಮೆ ಕನ್ನಡಿಯಾಗಿದ್ದು, ಸ್ಥಳೀಯರು ಕಠಿಣ ಕ್ರಮದ ಮುಗಿಯದ ನ್ಯಾಯದ ಹಕ್ಕು ಕೇಳುತ್ತಿದ್ದಾರೆ.

ಭ್ರಷ್ಟರ ಬೇಟೆ

Recent Posts

ಮುಳಬಾಗಿಲು ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ನಡುವೆ ತಟ್ಟೆ ತೊಳೆಯುವ ವಿಚಾರಕ್ಕೆ ಮಾರಾಮಾರಿ!

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಲ್ಲನಾಯಕನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ಗಲಾಟೆಯ ಘಟನೆ ನಡೆದಿದೆ.…

49 minutes ago

ಒಂದೇ ಗೂಗಲ್ ಸ್ಟಾರ್ ರೇಟಿಂಗ್ ಕಾರಣ: ಪಿಜಿ ಮಾಲೀಕನಿಂದ ವಿದ್ಯಾರ್ಥಿಗೆ ಹಲ್ಲೆ!”

ದಕ್ಷಿಣ ಕನ್ನಡ ಜಿಲ್ಲೆಯ ಕದ್ರಿಯಲ್ಲಿ ಪಿಜಿಯ ಅವ್ಯವಸ್ಥೆ ಕುರಿತಂತೆ ಗೂಗಲ್ ರೇಟಿಂಗ್‌ನಲ್ಲಿ ಕೆಳಮಟ್ಟದ ಅಂಕ ನೀಡಿದ್ದಕ್ಕೆ ಪಿಜಿ ಮಾಲೀಕನ ಕೋಪಕ್ಕೊಳಗಾದ…

2 hours ago

ಲಕ್ನೋದಲ್ಲಿ ರಾತ್ರಿ ವಿಚಿತ್ರ ಹಂಗಾಮಾ: ರಸ್ತೆ ಮೇಲೆ ಕುಳಿತು ಮಹಿಳೆಯ ಅಸಹಜ ವರ್ತನೆ,! ಪೊಲೀಸರು ವಶಕ್ಕೆ

ಉತ್ತರಪ್ರದೇಶದ ಲಕ್ನೋ ನಗರದ ವಿಭೂತಿ ಖಾಂಡ್ ಪ್ರದೇಶದಲ್ಲಿ ಬುಧವಾರ (ಮಾರ್ಚ್ 19) ರಾತ್ರಿ ಅಚ್ಚರಿಯ ಘಟನೆಯೊಂದು ನಡೆದಿದೆ. ರಾತ್ರಿ ಸುಮಾರು…

3 hours ago

ನಶೆ ಮಾಡಿದ ವ್ಯಕ್ತಿಯಿಂದ ದೇವಸ್ಥಾನಕ್ಕೆ ಕಲ್ಲು ತೂರಾಟ!

ಬೆಳಗಾವಿ ನಗರದ ಪಾಂಗುಳ ಗಲ್ಲಿಯಲ್ಲಿರುವ ಅಶ್ವತ್ಥಾಮ ದೇವಸ್ಥಾನದ ಮೇಲೆ ಕಲ್ಲು ತೂರಿದ ಘಟನೆಯೊಂದು ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಜ್ವಲ್…

5 hours ago

ಠಾಣೆಯೊಳಗೆ ಜೂಜಾಟ! ಐದು ಖಾಕಿ ಅಧಿಕಾರಿಗಳು ಅಮಾನತ್ತು.

ಚಿತ್ತಾಪುರ ತಾಲೂಕಿನ ವಾಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ವಿರುದ್ಧವಾಗಿ ಇಸ್ಪೀಟ್ ಆಟ ಆಡಿದ್ದ ಐವರು ಪೊಲೀಸರನ್ನು ಅಮಾನತು ಮಾಡಲು ಜಿಲ್ಲಾ…

5 hours ago

ಬ್ಲೂಟೂತ್ ಮೂಲಕ ಪೊಲೀಸ್ ಪರೀಕ್ಷೆಯಲ್ಲಿ ಮೋಸ: ರಾಜಸ್ಥಾನದ ಮಹಿಳಾ ಎಸ್‌.ಐ ಬಂಧನ!”

ರಾಜಸ್ಥಾನದಲ್ಲಿ 2021ನೇ ಸಾಲಿನ ಸಬ್-ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದ ಪೇಪರ್ ಲೀಕ್ ಪ್ರಕರಣದಲ್ಲಿ ರಾಜ್ಯದ ವಿಶೇಷ ಕಾರ್ಯಾಚರಣೆ ಗುಂಪು (SOG)…

6 hours ago