Crime

ಬೇಕರಿಯಲ್ಲಿ 6 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ ಪೋಕ್ಸೋ ಅಡಿಯಲ್ಲಿ ಬಂಧನ

ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದಲ್ಲಿ ಒಂದು ಬೆನ್ನೊಡಗೆ ಹುಟ್ಟಿಸುವ ಘಟನೆ ಬೆಳಕಿಗೆ ಬಂದಿದೆ. ಕೇರಳ ಮೂಲದವನೊಬ್ಬ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಕಾಮಿಯೊಬ್ಬನು, ಚಾಕೊಲೇಟ್ ನೀಡುವುದಾಗಿ ಹೇಳಿ 6 ವರ್ಷದ ಬಾಲಕಿಯನ್ನು ಹತ್ತಿರಕ್ಕೆ ಕರೆದು ಲೈಂಗಿಕ ಕಿರುಕುಳ ನೀಡಿರುವ ಘಟನೆ ಶನಿವಾರ ನಡೆದಿದ್ದು, ಇದೀಗ ದೊಡ್ಡ ಭೀತಿಗೆ ಕಾರಣವಾಗಿದೆ.

ಘಟನೆಯ ನಂತರ ಆತಂಕಗೊಂಡ ಬಾಲಕಿ ತನ್ನ ಮನೆಯವರಿಗೆ ಈ ಬಗ್ಗೆ ತಿಳಿಸಿದ ಪರಿಣಾಮ, ಪೋಷಕರು ಮತ್ತು ಸಂಬಂಧಿಕರು ಬೇಕರಿಗೆ ಧಾವಿಸಿ ಆರೋಪಿಯನ್ನು ಸಾರ್ವಜನಿಕರ ಸಹಾಯದಿಂದ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪೀಡಿತ ಬಾಲಕಿಯ ಪೋಷಕರ ದೂರಿನ ಮೇಲೆ ಪೆಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಬಂಧಿತನನ್ನು ಮೊಹಮ್ಮದ್ ಕುಟ್ಟಿ ಎಂದು ಗುರುತಿಸಲಾಗಿದೆ. ಇದೀಗ ಪೊಲೀಸರ ವಶದಲ್ಲಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಸದ್ಯ ಬೇಕರಿಯನ್ನು ಲಾಕ್ ಮಾಡಲಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸ್ ಬಲವನ್ನು ನಿಯೋಜಿಸಲಾಗಿದೆ. ಗ್ರಾಮಸ್ಥರಲ್ಲಿ ಈ ಘಟನೆ ಆಕ್ರೋಶ ಮೂಡಿಸಿದ್ದು, ಮಕ್ಕಳ ಸುರಕ್ಷತೆಯ ಬಗ್ಗೆ ಮತ್ತೆ ಪ್ರಶ್ನೆಗಳು ಉದ್ಭವಿಸುತ್ತಿವೆ.

nazeer ahamad

Recent Posts

ಸಿಇಟಿ ಪರೀಕ್ಷೆಯಲ್ಲಿ ಜನಿವಾರ ವಿವಾದ: ಸರ್ಕಾರದ ತ್ವರಿತ ಕ್ರಮ, ಅಧಿಕಾರಿ ಅಮಾನತು..

ಶಿವಮೊಗ್ಗ: ರಾಜ್ಯದ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯಿಂದ ಜನಿವಾರ ತೆಗೆಸಿದ ಘಟನೆ ತೀವ್ರ ವಾಗ್ದಾಳಿ ಮತ್ತು ವಿರೋಧಕ್ಕೆ ಕಾರಣವಾಗಿದೆ. ಸಮಾಜದ…

10 hours ago

ಪಡುಬಿದ್ರಿಯಲ್ಲಿ ಅಕ್ರಮ ಮರಳು ಸಾಗಾಟ: ಪರಾರಿಯಾದ ಚಾಲಕ, ಟಿಪ್ಪರ್ ವಶಕ್ಕೆ

ಪಡುಬಿದ್ರಿ: ಹೆಜಮಾಡಿ ಮಟ್ಟು ರಸ್ತೆಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್‌ವೊಂದು ಪಡುಬಿದ್ರಿ ಪೊಲೀಸರು ಎಪ್ರಿಲ್ 17ರ ಮಧ್ಯರಾತ್ರಿ ವಶಪಡಿಸಿಕೊಂಡಿದ್ದಾರೆ. ತುರ್ತು…

12 hours ago

ಗುರುಗ್ರಾಮ್ ಆಸ್ಪತ್ರೆಯಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ: ಟೆಕ್ನಿಷಿಯನ್ ದೀಪಕ್ ಬಂಧನ”

ಗುರುಗ್ರಾಮ್‌ನ ಖಾಸಗಿ ಆಸ್ಪತ್ರೆಗೆ ಸೇರಿದ್ದ ಮಹಿಳೆಯೊಬ್ಬರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಾಲ್ಕು ದಿನಗಳ ನಿರಂತರ ತನಿಖೆಯ ಬಳಿಕ ಪೊಲೀಸರ…

12 hours ago

ಆರ್ಥಿಕ ವಂಚನೆ ಹಾಗೂ ಮಾನಸಿಕ ಕಿರುಕುಳದಿಂದ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ: ಆರೋಪಿಗಳ ವಿರುದ್ಧ ಉಲ್ಕೊಂಡ ವೀಡಿಯೋ ವೈರಲ್.!

ಬೆಂಗಳೂರು: ಅನೇಕಲ್‌ನಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಆರ್ಥಿಕ ವಂಚನೆ ಮತ್ತು ಮಾನಸಿಕ ಕಿರುಕುಳದಿಂದ ತತ್ತರಿಸಿ ಜೀವನದ ಕ್ಷಣಿಕ ನಿರ್ಣಯ ಮಾಡಿಕೊಂಡ ದುರ್ಘಟನೆ…

13 hours ago

ಸಾಲದಲ್ಲಿ ಖರೀದಿಸಿದ ವ್ಯಾಪಾರ ವಾಹನಕ್ಕೆ ಬೆಂಕಿ: ಕೆಂಬಾರೆ ಗ್ರಾಮದ ದಂಪತಿಗೆ ಲಕ್ಷಾಂತರ ನಷ್ಟ.

ಬೆಳ್ಳೂರು ತಾಲ್ಲೂಕಿನ ಕೆಂಬಾರೆ ಗ್ರಾಮದಲ್ಲಿ ನಡೆದ ಒಂದು ದುರ್ಭಾಗ್ಯಕರ ಘಟನೆಯು ಸ್ಥಳೀಯರನ್ನು ಬೆಚ್ಚಿಬಿಟ್ಟಿದೆ. ಮಕ್ಕಳ ಆಟಿಕೆ ಸಾಮಗ್ರಿಗಳನ್ನು ಮಾರಾಟ ಮಾಡಿ…

14 hours ago

ರಿಷಿಕೇಶ ದುರಂತ: ರಿವರ್‌ ರಾಫ್ಟಿಂಗ್ ವೇಳೆ ನೀರಿಗೆ ಬಿದ್ದು ಯುವಕನ ಸಾವು

ಉತ್ತರಾಖಂಡದ ಪ್ರಸಿದ್ಧ ಪ್ರವಾಸಿ ತಾಣ ರಿಷಿಕೇಶದಲ್ಲಿ ನಡೆಯುತ್ತಿದ್ದ ರಿವರ್‌ ರಾಫ್ಟಿಂಗ್‌ನಾಗಮನ ಒಂದು ದುರಂತದಲ್ಲಿ ಅಂತ್ಯ ಕಂಡಿದೆ. ಡೆಹ್ರಾಡೂನ್‌ನಿಂದ ಪ್ರವಾಸಕ್ಕೆ ಬಂದಿದ್ದ…

15 hours ago