ಕುಮಟಾ ತಾಲೂಕಿನ ಗುಡೇಅಂಗಡಿಯ ನಿವಾಸಿ ಸುಮಾ ಮಡಿವಾಳ (32) ಅವರು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕುಮಟಾ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ಬೆಳಗ್ಗೆ 9.20ರ ವೇಳೆಗೆ, ಅವರು ಸೈಕಲ್ ರಿಪೇರಿ ಮಾಡುವ ಪ್ರಶಾಂತ ಮಡಿವಾಳ ಅವರೊಂದಿಗೆ ಬೈಕ್‌ನಲ್ಲಿ ಹೊಲನಗದ್ದೆಯಿಂದ ಕುಮಟಾ ಕಡೆ ಪ್ರಯಾಣಿಸುತ್ತಿದ್ದರು. ನಾಗಶ್ರೀ ವಾಟರ್ ಸರ್ವೀಸ್ ಸೆಂಟರ್ ಬಳಿ ತಲುಪಿದಾಗ, ಅಚಾನಕ್ ನಾಯಿ ರಸ್ತೆ ಮಧ್ಯೆ ಓಡಿದ ಕಾರಣ, ಪ್ರಶಾಂತ ಮಡಿವಾಳ ತಕ್ಷಣವೇ ಬೈಕ್ ನಿಲ್ಲಿಸಲು ಪ್ರಯತ್ನಿಸಿದರು.

ಈ ಅವಘಡದಲ್ಲಿ, ಬೈಕ್‌ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಸುಮಾ ಮಡಿವಾಳ ಆಯತಪ್ಪಿ ನೆಲಕ್ಕೆ ಬಿದ್ದರು. ಬಿದ್ದ ತಕ್ಷಣವೇ ಅವರ ಮೂಗಿನಿಂದ ರಕ್ತ ಹರಿಯಲು ಶುರುವಾದುದು, ತಲೆ ಹಾಗೂ ಹಣೆಗೂ ಗಂಭೀರ ಗಾಯಗಳಾಗಿದ್ದು, ಪರಿಸ್ಥಿತಿ ತೀವ್ರಗೊಂಡಿತು. ತಕ್ಷಣವೇ ಆಂಬುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಾಯಿತು, ಆದರೆ ಮೂರಾಕಟ್ಟಾ ಬಳಿ ಅವರು ಕೊನೆಯುಸಿರೆಳೆದರು.

ಸ್ಥಳೀಯ ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುವ 72 ವರ್ಷದ ಮಹಾದೇವ ಮಡಿವಾಳ ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರ ಮಾಹಿತಿ ಆಧಾರದ ಮೇಲೆ, ಬೈಕ್ ಸವಾರ ಪ್ರಶಾಂತ ಮಡಿವಾಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಘಟನೆಯ ಸಂಬಂಧ ಪಿಎಸ್‌ಐ ರವಿ ಗುಡ್ಡಿ ತನಿಖೆ ಮುಂದುವರಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!