ಹಣಕಾಸಿನ ಸಮಸ್ಯೆಗಳಿಂದ ಒತ್ತಡಕ್ಕೊಳಗಾಗಿದ್ದ ವಿದ್ಯಾರ್ಥಿ ಆತ್ಮಹತ್ಯೆ. ಚಂಡೀಗಢ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಹರಿಯಾಣದ 19 ವರ್ಷದ ವಿದ್ಯಾರ್ಥಿಯೋರ್ವ ನೀರಿನ ಟ್ಯಾಂಕರ್ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿದ್ಯಾರ್ಥಿ ಸುಮಿತ್ ಚಿಕ್ರಾ ಜುಲೈ 18 ರಂದು ಪಂಜಾಬ್ ನ ಘರುವಾನ್ ಗ್ರಾಮದಲ್ಲಿ ಐದು ಅಂತಸ್ತಿನ ನೀರಿನ ಟ್ಯಾಂಕ್ ನಿಂದ ಹಾರಿ ಆತ್ಮಹತ್ಯೆಗೆ ಮಾಡಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.
ಹಣಕಾಸಿನ ಸಮಸ್ಯೆಗಳಿಂದ ಒತ್ತಡಕ್ಕೊಳಗಾಗಿದ್ದ ವಿದ್ಯಾರ್ಥಿ ಸುಮಿತ್ ಚಿಕ್ರಾ ಈ ನಿರ್ಧಾರ ಕೈಗೊಂಡಿದ್ದಾನೆ. ಅವನನ್ನು ರಕ್ಷಿಸಲು ಇಬ್ಬರು ಪ್ರಯತ್ನಿಸಿದರೂ ಉಳಿಸಲು ಸಾಧ್ಯವಾಗಿಲ್ಲ ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಕೆಳಗೆ ಬಿದ್ದ ಪರಿಣಾಮ ಆಸ್ಪತ್ರೆಗೆ ಸಾಗಿಸುವ ವೇಳೆ ಆತ ಮೃತಪಟ್ಟಿದ್ದಾನೆ.

error: Content is protected !!