Categories: Latest

ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಆತ್ಮಹತ್ಯೆ.

ಬೆಂಗಳೂರು: ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ನಾಲ್ಕನೇ ಮಹಡಿಯಿಂದ ಹಾರಿ 21 ವರ್ಷದ ಬಿಸಿಎ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಮೃತಳು ಕೇರಳದ ಕೋಝಿಕ್ಕೋಡ್ ಮೂಲದ ಲಕ್ಷ್ಮಿ ಮಿತ್ರ ಎಂದು ಗುರುತಿಸಲಾಗಿದೆ.

ಲಕ್ಷ್ಮಿ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆರನೇ ಸೆಮಿಸ್ಟರ್ ಬಿಸಿಎ (ವಿಮಾನಯಾನ) ವಿದ್ಯಾರ್ಥಿನಿಯಾಗಿದ್ದು, ಮಧ್ಯಾಹ್ನ ಸುಮಾರು 1:30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.

ಘಟನೆ ಸಂಭವುತ್ತಿದ್ದಂತೆಯೇ ಕಾಲೇಜು ಸಿಬ್ಬಂದಿ ತಕ್ಷಣವೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಆದರೆ ವೈದ್ಯರು ಅಲ್ಲಿಯೇ ಆಕೆ ಮೃತಪಟ್ಟಿರುವುದಾಗಿ ದೃಢಪಡಿಸಿದರು.

ಈ ತನಕ ಆತ್ಮಹತ್ಯೆಯ ಕಾರಣ ಸ್ಪಷ್ಟವಾಗಿಲ್ಲ, ಹಾಗೂ ಯಾವುದೇ ಸುಳಿವು ಅಥವಾ ಸುದೀರ್ಘ ಪತ್ರ ಪತ್ತೆಯಾಗಿಲ್ಲ. ಸ್ಥಳೀಯ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದು, ಸಂತ್ರಸ್ತೆಯ ಪೋಷಕರ ಆಗಮನಕ್ಕಾಗಿ ಕಾಯುತ್ತಿದ್ದಾರೆ.

ಘಟನೆಗೆ ನಿಖರ ಕಾರಣ ಏನಿರಬಹುದು ಎಂಬುದನ್ನು ತಿಳಿಯಲು ಪೊಲೀಸರು ವಿದ್ಯಾರ್ಥಿನಿಯ ಸ್ನೇಹಿತರು, ಕಾಲೇಜು ಸಿಬ್ಬಂದಿ ಹಾಗೂ ಕುಟುಂಬ ಸದಸ್ಯರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

nazeer ahamad

Recent Posts

ಪತ್ನಿಯೊಂದಿಗೆ ಜಗಳವಾಡಿ ಮೂರು ವರ್ಷದ ಮಗನನ್ನು ಕೊಂದ ಪಾಪಿ ತಂದೆ.!

ಪುಣೆ: ಪತ್ನಿಯೊಂದಿಗಿನ ಕಲಹದ ಬಳಿಕ ತನ್ನ ಮೂರು ವರ್ಷದ ಮಗನನ್ನು ಹತ್ಯೆ ಮಾಡಿದ ಆರೋಪದ ಮೇಲೆ ಐಟಿ ಎಂಜಿನಿಯರ್ ಮಾಧವ್…

4 hours ago

ಒಎಎಸ್‌ ಅಧಿಕಾರಿಯ ಲವ್‌, ಸೆಕ್ಸ್‌, ಧೋಕಾ: ಬುಡಕಟ್ಟು ಯುವತಿಗೆ ನ್ಯಾಯ!

ಜಗತ್ಸಿಂಗ್‌ಪುರ: ಆರುತಿಂಗಳ ಹೋರಾಟದ ನಂತರ ಬುಡಕಟ್ಟು ಸಮುದಾಯದ ಯುವತಿ ಒಎಎಸ್‌ ಅಧಿಕಾರಿಯ ವಿರುದ್ಧ ನಡೆದ ತನ್ನ ನ್ಯಾಯಯುದ್ಧದಲ್ಲಿ ಜಯ ಸಾಧಿಸಿದ್ದಾಳೆ.…

4 hours ago

ಹೊಸೂರು ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: ಆರು ಜನ ಗಂಭೀರ ಗಾಯ

ಗದಗ ತಾಲೂಕಿನ ಹೊಸೂರು ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಸ್ಫೋಟದ…

6 hours ago

ಆಧಾರ್ ಕಾರ್ಡ್ ಮಾಡಿಸಲು ಅಲೆದಾಟದಿಂದ ಬೇಸತ್ತು ಪ್ರಧಾನಿ ಮೋದಿಗೆ ಪತ್ರ ಬರೆದ ಅಜ್ಜಿ

ಯಲ್ಲಾಪುರ:-ಕಳೆದ 10 ವರ್ಷಗಳಿಂದ ಆಧಾರ್ ಕಾರ್ಡ ಮಾಡಿಸಲು ಅಲೆದಾಡುತ್ತಿರುವ ಯಲ್ಲಾಪುರ ಕಾನಗೋಡಿನ 80 ವರ್ಷದ ಸರಸ್ವತಿ ಹೆಗಡೆ ಇದೀಗ ಪ್ರಧಾನಿ…

7 hours ago

ಕುರುಪ್ಪಂಪಾಡಿಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ: ತಾಯಿ ಸೇರಿದಂತೆ ಇಬ್ಬರ ಬಂಧನ

ಕುರುಪ್ಪಂಪಾಡಿಯಲ್ಲಿ ತನ್ನ ಸಹಜೀವನ ಸಂಗಾತಿಯಿಂದ ಲೈಂಗಿಕ ಕಿರುಕುಳಕ್ಕೆ ಗುರಿಯಾದ ಇಬ್ಬರು ಅಪ್ರಾಪ್ತ ಬಾಲಕಿಯರ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ನಡೆಸಿದ…

7 hours ago

ಮನೆ ಕಳ್ಳತನ ಪ್ರಕರಣ:ಕಳ್ಳನಿಗೆ ಹೆಡೆಮುರಿ ಕಟ್ಟಿದ ತಾವರಗೇರಾ ಪೊಲೀಸರು.

ತಾವರಗೇರಾ:- ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ತಾವರಗೇರಾ ಪಟ್ಟಣದ ವಿಶ್ವೇಶ್ವರಯ್ಯ ನಗರದಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಕಳ್ಳನನ್ನು ಹಿಡಿಯುವಲ್ಲಿ…

7 hours ago