ಹುಣಸೂರು ವನ್ಯಜೀವಿ ಉಪವಿಭಾಗದ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ಪೊನ್ನಂಪೇಟೆ ತಾಲ್ಲೂಕಿನ ಟಿ. ಶೆಟ್ಟಿಗೇರಿ ಗ್ರಾಮದ ಕೆರೆ ಸಮೀಪ ಅಕ್ರಮವಾಗಿ ಹುಲಿ ಉಗುರು ಮಾರಾಟ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಹುಲಿ ಯೋಜನೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಲಕ್ಷ್ಮಿಕಾಂತ್ ಈ ಮಾಹಿತಿಯನ್ನು ತಿಳಿಸಿದ್ದಾರೆ.
ಕಾಫಿ ತೋಟದ ಬಳಿಯಲ್ಲಿಯೇ ಬಂಧನ
ಘಟನೆ ಟಿ. ಶೆಟ್ಟಿಗೇರಿಯ ಸಂರಕ್ಷಿತ ಅರಣ್ಯ ಪ್ರದೇಶದ ಬಳಿಯ ಗಣಪತಿ ಎಂಬುವರಿಗೆ ಸೇರಿದ ಕಾಫಿ ತೋಟದ ಸಮೀಪ ನಡೆದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಮಾರುವಹಿವಾಟು ನಡೆಯುತ್ತಿರುವಾಗ ದಾಳಿ ನಡೆಸಿದರು. ಆರೋಪಿಗಳು ಮಾರುತಿ ವ್ಯಾನ್ನಲ್ಲಿ ಆಗಮಿಸಿದ್ದಾಗ, ಮಹಿಳೆಯೊಬ್ಬಳೊಂದಿಗೆ ಹುಲಿ ಉಗುರುಗಳ ವಹಿವಾಟು ನಡೆಸುತ್ತಿದ್ದ ವೇಳೆ ಅವರನ್ನು ವಶಕ್ಕೆ ಪಡೆಯಲಾಯಿತು.
12 ಹುಲಿ ಉಗುರು ಪತ್ತೆ
ಆರೋಪಿಗಳಿಂದ ವಶಪಡಿಸಿಕೊಂಡ ಡಬ್ಬಿಯನ್ನು ಪರಿಶೀಲಿಸಿದಾಗ ಅದರಲ್ಲಿ 12 ಹುಲಿ ಉಗುರುಗಳು ಇದ್ದವು. ಈ ಪ್ರಕರಣದಲ್ಲಿ ಟಿ. ಶೆಟ್ಟಿಗೇರಿ ಗ್ರಾಮದ ನಿವಾಸಿ ರಾಜಪ್ಪ ಬಿನ್ ನಂಜಪ್ಪ (63) ಮತ್ತು ಬೆಂಗಳೂರಿನ ಬನಶಂಕರಿ ಲೇಔಟ್ ನಿವಾಸಿ ಗೀತಾ (63) ಎಂಬುವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಮೂರುನೇ ಆರೋಪಿ ಪರಾರಿ – ಹುಲಿ ಚರ್ಮದ ಶಂಕೆ
ಈ ಘಟನೆಯಲ್ಲಿ ಮತ್ತೊಬ್ಬ ಆರೋಪಿ, ಶೆಟ್ಟಿಗೇರಿ ನಿವಾಸಿ ಸಂಜು, ಸ್ಥಳದಿಂದ ಪರಾರಿಯಾಗಿದ್ದು, ಆತನ ಬಳಿ ಹುಲಿ ಚರ್ಮ ಇರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆತನ ನಿವಾಸದಲ್ಲಿ ನಡೆಸಿದ ಶೋಧ ಕಾರ್ಯದಲ್ಲಿ ಕೆಲ ಮಾರಕಾಸ್ತ್ರಗಳು ಹಾಗೂ ಗುಂಡುಗಳು ಪತ್ತೆಯಾಗಿವೆ.
ಆರೋಪಿಗಳ ವಶಕ್ಕೆ – ವಾಹನ ವಶ
ಆರೋಪಿಗಳು ಬಳಸುತ್ತಿದ್ದ ಮಾರುತಿ ವ್ಯಾನ್ನ್ನು ವಶಪಡಿಸಿಕೊಂಡು, ವಶಕ್ಕೆ ಪಡೆದ ಎಲ್ಲ ವಸ್ತುಗಳನ್ನು ಶ್ರೀಮಂಗಲ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಅರಣ್ಯ ಇಲಾಖೆ ಕಾರ್ಯಾಚರಣೆ
ಈ ಕಾರ್ಯಾಚರಣೆಯಲ್ಲಿ ACF ಲಕ್ಷ್ಮಿಕಾಂತ್, RFO ಸುಬ್ರಹ್ಮಣ್ಯ, ಪ್ರಮೋದ್ ಮನೋಹರ್, ಅರ್ಪಿತಾ, STPF ಪ್ಲಾಟೂನ್ 3 ಘಟಕದ RFO ಶಶಿಕುಮಾರ್, ಚಂದನ್, ಅರಣ್ಯ ಪಾಲಕರು ರಾಜು ಹಾಗೂ ನಾಗೇಂದ್ರ ಮಹದೇವ್ ಭಾಗವಹಿಸಿದ್ದರು. ಘಟನೆ ಕುರಿತಾಗಿ ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ.
ಹಾವೇರಿ: ಎಟಿಎಂ ಕಾರ್ಡ್ ವಂಚನೆ ನಡೆಸಿದ ಪ್ರಕರಣದಲ್ಲಿ ಹಿರೇಮೊರಬ ಗ್ರಾಮದ ಗಿರೀಶ್ ಎಂಬ ವ್ಯಕ್ತಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಘಟನೆ…
ಬೆಂಗಳೂರು, ಫೆಬ್ರವರಿ 21: ವಿದೇಶಿ ಉದ್ಯೋಗ ನೀಡುವ ಆಮಿಷವೊಡ್ಡಿ ಬರೋಬ್ಬರಿ 53 ಮಂದಿಗೆ ಕೋಟಿ, ಕೋಟಿ ರೂ ವಂಚಿಸಿ, ದಂಪತಿ…
ದಾವಣಗೆರೆ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿರಂತರವಾಗಿ ಬೆಳೆಯುತ್ತಿದ್ದು, ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ರಾಜ್ಯ…
ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಖಜೂರಿ ಗ್ರಾಮದ ಯುವಕ ರಾಹುಲ್, ಕಳೆದ ಜನವರಿ 30ರಿಂದ ಕಾಣೆಯಾಗಿದ್ದು, ಆತನ ಶವ ಮಹಾರಾಷ್ಟ್ರದ…
ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಕೃಷಿ ಇಲಾಖೆಯ…
ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಭಾಷೆಯ ವಿವಾದ ಸ್ಫೋಟಗೊಂಡಿದ್ದು, ಮರಾಠಿ ಭಾಷೆಯಲ್ಲಿ ಟಿಕೆಟ್ ಕೇಳಿದ್ದಕ್ಕೆ ಕನ್ನಡದಲ್ಲಿ ಮಾತನಾಡಲು ಸೂಚಿಸಿದ ಬಸ್ ಕಂಡಕ್ಟರ್…