ಜನಸಾಮಾನ್ಯರ ಮೇಲೆ ದರ್ಪ ತೋರಿಸೋಕೆ ಹೋದ್ರೆ ಏನಾಗುತ್ತೇ ಅನ್ನೋಕೆ ಈ ಘಟನೆಯೇ ಸಾಕ್ಷಿ. ರೈಲ್ವೇ ನಿಲ್ದಾಣದಲ್ಲಿ ಟಿಕೆಟ್ ಕಲೆಕ್ಟರ್ ಜೊತೆ ಮಾತಿನ ಚಕಮಕಿ ನಡೆಸ್ತಿರೋ ಮಹಿಳೆ. ಮಾತಿಗೆ ಮಾತು ಬೆಳೆದು ಟಿಸಿ ಮುಂದೆ ಕಣ್ಣೀರು. ಮಹಿಳೆಯ ಕಣ್ಣೀರ ಕಥೆ ಕಂಡು ಟಿಕೆಟ್ ಕಲೆಕ್ಟರ್ ಅನ್ನ ತರಾಟೆಗೆ ತೆಗೆದುಕೊಂಡ ಸಹ ಪ್ರಯಾಣಿಕರು. ಇಂತದೊಂದು ದೃಶ್ಯ ಕಂಡು ಬಂದಿರೋದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ.
ಕೆ.ಆರ್ ಪುರಂನ ರೈಲ್ವೇ ನಿಲ್ದಾಣದಿಂದ ಲಖನೌಗೆ ಪ್ರಯಾಣ ಬೆಳೆಸಲು ಮಹಿಳೆಯೊಬ್ಬರು ತಮ್ಮ ಲಗೇಜ್ ಸಮೇತರಾಗಿ ಆಗಮಿಸಿದ್ರು. ಈ ವೇಳೆ ಮಹಿಳೆಯನ್ನ ಕಂಡ ಟಿಕೆಟ್ ಕಲೆಕ್ಟರ್ ಒರ್ವ ಟಿಕೆಟ್ ತೋರಿಸುವಂತೆ ಸೂಚಿಸಿದ್ನಂತೆ. ಈ ವೇಳೆ ಟಿಕೆಟ್ ತೋರಿಸಿದ ಮಹಿಳೆಗೆ ಟಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಅಂತ ಮಹಿಳೆ ಆರೋಪಿಸಿದ್ದಾಳೆ. ಟ್ರೈನ್ ಏರುವ ಮುನ್ನವೇ ಟಿಸಿ ನನ್ನ ಬಳಿ ಟಿಕೆಟ್ ಕೇಳಿದ್ದು ಎಷ್ಟು ಸರಿ ಅಂತ ಸಹ ಮಹಿಳೆ ಅಸಮಾಧಾನ ಹೊರಹಾಕಿದ್ದಾಳೆ. ಅಲ್ಲದೇ ಮಹಿಳೆಯನ್ನ ಚುಡಾಯಿಸುವ ದೃಷ್ಠಿಯಿಂದ ಟಿಕೆಟ್ ಕಲೆಕ್ಟರ್ ಈ ರೀತಿ ವರ್ತಿಸಿದ್ದಾನೆ ಅಂತ ಸಹ ಮಹಿಳೆ ಆರೋಪಿಸಿದ್ದಾರೆ. ಬಳಿಕ ಮಹಿಳೆ ರೈಲ್ವೇ ನಿಲ್ದಾಣದಲ್ಲಿ ಕಣ್ಣೀರಿಡ್ತಿರೋದನ್ನ ಕಂಡ ಸಹ ಪ್ರಯಾಣಿಕರು ಟಿಸಿಯನ್ನ ತರಾಟೆಗೆ ತೆಗೆದುಕೊಂಡು ಎಳೆದಾಡಿದ್ದಾರೆ. ಸದ್ಯ ಈ ದೃಶ್ಯ ಎಲ್ಲೆಡೆ ವೈರಲ್ ಆಗ್ತಿದ್ದು, ಟಿಸಿ ವರ್ತನೆ ಬಗ್ಗೆ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಸಿ ಮದ್ಯಪಾನ ಮಾಡಿ ಈ ರೀತಿ ವರ್ತಿಸಿದ್ದಾನೆ ಅಂತ ಸಹ ಹೇಳಲಾಗ್ತಿದೆ.
ಟಿಕೆಟ್ ಕಲೆಕ್ಟರ್ ಮಹಿಳೆಯೊಂದಿಗೆ ಗಲಾಟೆ ಮಾಡಿ ಸ್ಥಳದಿಂದ ಎಸ್ಕೇಪ್ ಆಗ್ತಿದ್ದ ವೇಳೆ ಸಹ ಪ್ರಯಾಣಿಕರು ಆತನನ್ನ ಎಳೆದು ತಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವಾಗ ಈ ದೃಶ್ಯ ಎಲ್ಲೆಡೆ ವೈರಲ್ ಆಗಿ ಭಾರೀ ವಿರೋಧ ವ್ಯಕ್ತವಾಗಲು ಶುರುವಾಯ್ತೋ ತಕ್ಷಣ ಎಚ್ಚೆತ್ತ ರೈಲ್ವೇ ಅಧಿಕಾರಿಗಳು ಟಿಕೆಟ್ ಕಲೆಕ್ಟರ್ ಅನ್ನ ಕೆಲಸದಿಂದ ಅಮಾನತು ಮಾಡಿದ್ದಾರೆ. ಉಪ್ಪು ತಿಂದವನು ನೀರು ಕುಡಿಯಲೇಬೇಕು ಅನ್ನೋ ಹಾಗೆ ಮಹಿಳೆ ಮೇಲೆ ಅಧಿಕಾರದ ದರ್ಪ ತೋರಿದ ಟಿಕೆಟ್ ಕಲೆಕ್ಟರ್ ಕೆಲಸ ಕಳೆದುಕೊಂಡು ಮನೆ ಸೇರಿದ್ದಾನೆ.
ಜನರಿಗೆ ನ್ಯಾಯ ಕೊಡಿಸಬೇಕಿದ್ದ ಮಹಿಳೆಯರ ರಕ್ಷಣೆ ಮಾಡಬೇಕಿದ್ದ ಮಹಿಳೆಯರ ರಕ್ಷಣೆ ಸದಾ ಸಿದ್ದರಿರಬೇಕಾಗಿದ್ದ ಪೊಲೀಸ್ ಸಿಬ್ಬಂದಿಯೇ ತನ್ನ ಹೆಂಡತಿಯ ಶೀಲ…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕಾಮಗಾರಿ ಮಾಡಿದ ಬಿಲ್ ಮಾಡಿಕೊಡಲು ಗುತ್ತಿಗೆದಾರನ ಬಳಿ ಲಂಚ ಪಡೆಯುವಾಗ ಅಧಿಕಾರಿಗಳು ಲೋಕಾಯುಕ್ತ ಬಲೆಗೆ…
ಬೆಂಗಳೂರಿನ ದಾಸರಹಳ್ಳಿಯಲ್ಲಿ ಸಾಕು ತಂದೆಯೊಬ್ಬ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ತಲೆಮೆರೆಸಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಈ ಭೀಕರ…
ಕೃಷಿಕರಲ್ಲದವರಿಗೆ ಇನ್ನೂ ಕೃಷಿ ಭೂಮಿ ಸಿಗುವುದಿಲ್ಲ. ಬಿಜೆಪಿ ತಂದಿದ್ದ ಭೂ ಕಾಯ್ದೆ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ…
ಸೋನಾಗಾಚಿ ರೆಡ್ ಲೈಟ್ ಪ್ರದೇಶದ ಮಹಿಳೆಯೊಬ್ಬರು ಯುವ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯ ನಂತರ ಹೃದಯ ವಿದ್ರಾವಕ ಹೇಳಿಕೆಯೊಂದಿಗೆ…
ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಬಿಲಕೆರೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬಿಲಕೆರೂರ…