ಚಾಮರಾಜನಗರ ಜಿಲ್ಲೆಯ ಹೆಗ್ಗೋಠಾರ ಗ್ರಾಮದಲ್ಲಿ ದಲಿತ ಮಹಿಳೆ ನೀರಿನ ಟ್ಯಾಂಕರ್ ನಲ್ಲಿ ನೀರು ಕುಡಿದ ಕಾರಣ ಟ್ಯಾಂಕರನ್ನು ಖಾಲಿ ಮಾಡಿ ಗಂಜಲ ಹಾಕಿ ತೊಳೆದಿರುವ ಪ್ರಕರಣ ನಡೆದಿದ್ದು ಈ ವಿಚಾರವಾಗಿ ತಾಸಿಲ್ದಾರ್ ರವರು ಎಲ್ಲ ದಲಿತ ಯುವಕರನ್ನು ಕರೆಸಿ, ಊರಿನಲ್ಲಿರುವ ಎಲ್ಲಾ ಟ್ಯಾಂಕರ್ ನ ನಲ್ಲಿಗಳಲ್ಲಿ ನೀರು ಕುಡಿಯುವಂತೆ ಮಾಡಿದ್ದಾರೆ.
ಹಾಗೂ ಟ್ಯಾಂಕರ್ ನ ಮೇಲೆ ಇದು ಸಾರ್ವಜನಿಕರ ಆಸ್ತಿಯಾಗಿದ್ದು ಎಲ್ಲಾ ಸಮುದಾಯದವರು ಇದನ್ನು ಬಳಸಬಹುದು ಎಂದು ಬರೆಸಿರುತ್ತಾರೆ. ಅಷ್ಟು ಮಾತ್ರವಲ್ಲದೆ ನೊಂದ ಮಹಿಳೆಯನ್ನು ಪತ್ತೆ ಹಚ್ಚಿ ಆಕೆಯಿಂದಲೂ ದೂರನ್ನು ಪಡೆದು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಟ್ಯಾಂಕ್‌ ಖಾಲಿ ಮಾಡಿ, ಗೋಮೂತ್ರದಿಂದ ಶುದ್ಧೀಕರಿಸಿದ ಗ್ರಾಮಸ್ಥರು!

error: Content is protected !!