Latest

25 ವರ್ಷಗಳ ಸ್ನೇಹದ ಅಂತ್ಯ: ಜೆನ್ನಿಯ ಅಗಲಿಕೆಗೆ ಮ್ಯಾಗ್ಡಾದ ಮನಕಲಕುವ ಪ್ರತಿಕ್ರಿಯೆ

ರಷ್ಯಾದ ಸರ್ಕಸ್ ಆನೆಯೊಂದು ತನ್ನ 25 ವರ್ಷಗಳ ಸಹಚರನ ಅಗಲಿಕೆಗೆ ಮರುಗಿದ ಭಾವನಾತ್ಮಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮ್ಯಾಗ್ಡಾ ಎಂಬ ಆನೆ, ತನ್ನ ದೀರ್ಘಕಾಲದ ಸಂಗಾತಿ ಜೆನ್ನಿ ಸಾವಿಗೆ ಕಣ್ಣೀರಿಟ್ಟ ದುಃಖದ ಕ್ಷಣವೇ ಇದಾಗಿದೆ.

ಜೆನ್ನಿಯ ಅಗಲಿಕೆಗೆ ಮ್ಯಾಗ್ಡಾದ ಭಾವನಾತ್ಮಕ ಪ್ರತಿಕ್ರಿಯೆ

ಮ್ಯಾಗ್ಡಾ ಮತ್ತು ಜೆನ್ನಿ 25 ವರ್ಷಗಳಿಗೂ ಹೆಚ್ಚು ಕಾಲ ಒಟ್ಟಿಗೆ ಸರ್ಕಸ್ ಪ್ರದರ್ಶನಗಳನ್ನು ನೀಡಿದ ಜೋಡಿ ಆನೆಗಳಾಗಿದ್ದು, ಇತ್ತೀಚೆಗೆ ಜೆನ್ನಿ ಕುಸಿದು ಬಿದ್ದು ಸಾವನ್ನಪ್ಪಿದಳು. ಮ್ಯಾಗ್ಡಾ, ತನ್ನ ಗೆಳತಿಯ ಪಕ್ಕದಲ್ಲೇ ಗಂಟೆಗಟ್ಟಲೆ ನಿಂತು ದುಃಖವನ್ನು ವ್ಯಕ್ತಪಡಿಸಿತು.

ವಿಡಿಯೋ ದೃಶ್ಯಗಳಲ್ಲಿ ಮ್ಯಾಗ್ಡಾ ಮೊದಲು ಜೆನ್ನಿಯನ್ನು ತಟ್ಟಿ ಎಬ್ಬಿಸಲು ಪ್ರಯತ್ನಿಸುವುದು, ಬಳಿಕ ಅವಳ ಸೊಂಡಿಲಿನಿಂದ ಸುತ್ತುವರೆದು, ಅವಳನ್ನು ಬಿಟ್ಟು ಹೋಗಲು ಮನಸ್ಸಿಲ್ಲದೆ ಪಕ್ಕದಲ್ಲೇ ನಿಂತಿರುವುದು ಕಾಣಬಹುದು. ಪಶುವೈದ್ಯರು ಹತ್ತಿರ ಬರುವುದನ್ನು ತಡೆಯುತ್ತಿದ್ದ ಮ್ಯಾಗ್ಡಾದ ಭಾವನೆಗಳು ಸಾಕಷ್ಟು ಜನರ ಹೃದಯಕ್ಕೆ ತಟ್ಟಿವೆ.

ಸಮಾಜಿಕ ಜಾಲತಾಣದಲ್ಲಿ ಭಾವುಕರ ಪ್ರತಿಕ್ರಿಯೆ

ಈ ದೃಶ್ಯ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಆನೆಗಳ ಬಾಂಧವ್ಯವನ್ನು ಶ್ಲಾಘಿಸಿದ್ದಾರೆ.

“ಪ್ರೀತಿಗೆ ಯಾವುದೇ ಮಿತಿಯಿಲ್ಲ” ಎಂದು ಒಬ್ಬರು ಬರೆದರೆ,

“ಮಾನವರನ್ನು ಹೊರತುಪಡಿಸಿ, ಅಂತ್ಯಕ್ರಿಯೆಯ ವಿಧಿಗಳನ್ನು ಮಾಡುವ ಏಕೈಕ ಸಸ್ತನಿ ಆನೆಗಳು. ಅವು ತುಂಬಾ ಬುದ್ಧಿವಂತ ಹಾಗೂ ಭಾವನಾತ್ಮಕ” ಎಂದು ಮತ್ತೊಬ್ಬರು ಹೇಳಿದ್ದಾರೆ.

ಮ್ಯಾಗ್ಡಾ ಮತ್ತು ಜೆನ್ನಿಯ ಸಂಬಂಧ

25 ವರ್ಷಗಳ ಸಹವಾಸದಲ್ಲೂ, ಮ್ಯಾಗ್ಡಾ ಮತ್ತು ಜೆನ್ನಿಯ ನಡುವೆಯೂ ಕೆಲ ಭಿನ್ನಾಭಿಪ್ರಾಯಗಳೂ ಇತ್ತ. 2021 ರಲ್ಲಿ ನಿವೃತ್ತಿಯಾಗುವ ಮೊದಲು, ಈ ಜೋಡಿ ರಷ್ಯಾದ ಕಜಾನ್ ನಗರದಲ್ಲಿ ಬಹುತೇಕ ತಮ್ಮ ವೃತ್ತಿಜೀವನ ಕಳೆದಿದ್ದವು. ಒಂದು ಪ್ರದರ್ಶನದ ವೇಳೆ, ಜೆನ್ನಿ ಅಸಹನೆಗೊಂಡು ಮ್ಯಾಗ್ಡಾಗೆ ಗುದ್ದಿದ ಘಟನೆ ನಡೆದಿತ್ತು, ಇದರಿಂದ ಪ್ರೇಕ್ಷಕರಲ್ಲಿ ಆತಂಕ ಉಂಟಾಯಿತು. “ಇದು ಪ್ರೀತಿಯ ಸಹಚರನ ಅಭಿವ್ಯಕ್ತಿ – ಅಸೂಯೆ” ಎಂದು ಸರ್ಕಸ್ ಪ್ರತಿನಿಧಿಗಳು ಹೇಳಿದ್ದರು.

ಈ ಘಟನೆಗೆ ಒಂದು ವಾರದ ನಂತರ, ಎರಡೂ ಆನೆಗಳು ತಮ್ಮ ತರಬೇತುದಾರನ ಮೇಲೆ ದಾಳಿ ಮಾಡಿ ತೀವ್ರ ಗಾಯಗೊಳಿಸಿದ್ದವು. ತರಬೇತುದಾರನಿಗೆ ಬೆನ್ನು ಮೂಳೆ ಮುರಿತ, ಪಕ್ಕೆಲುಬು ಮುರಿತ ಮತ್ತು ಶ್ವಾಸಕೋಶಕ್ಕೆ ಗಾಯಗಳಾದವು. ಈ ಘಟನೆಯ ನಂತರ, ಅವುಗಳನ್ನು ನಿವೃತ್ತಿಗೊಳಿಸಲಾಯಿತು.

ಭಾವನಾತ್ಮಕ ವಿದಾಯ

ಜೆನ್ನಿಯ ಅಗಲಿಕೆಯಿಂದ ಮ್ಯಾಗ್ಡಾ ಅತೀವ ದುಃಖಗೊಂಡಿದ್ದು, ಈ ಭಾವನಾತ್ಮಕ ಘಟನೆ ಪ್ರಪಂಚದಾದ್ಯಂತ ಜನರ ಗಮನ ಸೆಳೆದಿದೆ. ಆನೆಗಳ ಭಾವನಾತ್ಮಕ ಬುದ್ಧಿವಂತಿಕೆ ಹಾಗೂ ಅವುಗಳು ತೀವ್ರವಾದ ದುಃಖವನ್ನು ಅನುಭವಿಸಬಲ್ಲವು ಎಂಬುದಕ್ಕೆ ಇದು ಮತ್ತೊಂದು ನಿದರ್ಶನವಾಗಿದೆ.

ಭ್ರಷ್ಟರ ಬೇಟೆ

Recent Posts

ಭಟ್ಕಳದ ಶಿರಾಲಿಯಲ್ಲಿ 26 ಜನರ ವಿರುದ್ಧ ಜೂಜಾಟ ಪ್ರಕರಣ ದಾಖಲು

ಭಟ್ಕಳ ತಾಲ್ಲೂಕಿನ ಶಿರಾಲಿ ಗ್ರಾಮದ ಕೇಶವಮೂರ್ತಿ ಹಿತ್ಲು ಪ್ರದೇಶದಲ್ಲಿ ಮಾಚ್ 15ರ ರಾತ್ರಿ ಅಕ್ರಮ ಜೂಜಾಟ ನಡೆಯುತ್ತಿದ್ದ ಸ್ಥಳದಲ್ಲಿ ಭಟ್ಕಳ…

7 minutes ago

ಹೋಳಿ ಹಬ್ಬದ ಊಟದಿಂದ ವಿದ್ಯಾರ್ಥಿಗಳಿಗೆ ಫುಡ್ ಪಾಯಿಸನಿಂಗ್: ಓರ್ವ ಮೃತಪಟ್ಟ ದುರ್ಘಟನೆ

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಟಿ. ಕಾಗೇಪುರ ಗ್ರಾಮದಲ್ಲಿ ಗೋಕುಲ ವಿದ್ಯಾಸಂಸ್ಥೆಯ ಹಾಸ್ಟೆಲ್‌ನಲ್ಲಿ ಭೋಜನ ಸೇವಿಸಿದ 30 ವಿದ್ಯಾರ್ಥಿಗಳು ಫುಡ್…

10 minutes ago

ರಾಜ್ಯದಲ್ಲೇ ಅತಿದೊಡ್ಡ ಡ್ರಗ್ಸ್ ಜಾಲ ಪತ್ತೆ: ₹75 ಕೋಟಿ ಮೌಲ್ಯದ ಎಂಡಿಎಂಎ ವಶ, ದಕ್ಷಿಣ ಆಫ್ರಿಕಾ ಮಹಿಳೆಯರ ಬಂಧನ

ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಡ್ರಗ್ಸ್ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದು, ಈ ಪ್ರಕರಣದಲ್ಲಿ ದಕ್ಷಿಣ ಆಫ್ರಿಕಾ ಮೂಲದ ಇಬ್ಬರು…

19 minutes ago

ಪಾಕಿಸ್ತಾನದ ಸೈನಿಕರ ವಾಹನಗಳ ಮೇಲೆ ಬಾಂಬ್ ದಾಳಿ…!

ಪಾಕಿಸ್ತಾನದ ಕ್ವೆಟ್ಟಾದಿಂದ ತಫ್ತಾನ್‌ಗೆ ತೆರಳುತ್ತಿದ್ದ ಭದ್ರತಾ ಪಡೆಗಳ ವಾಹನಗಳ ಮೇಲೆ ಭಾನುವಾರ ಭೀಕರ ದಾಳಿ ನಡೆದಿದ್ದು, 90 ಸೈನಿಕರು ಮೃತಪಟ್ಟಿದ್ದಾರೆ…

25 minutes ago

ಅಮೆರಿಕಾ-ಇರಾಕ್ ಸೇನೆಯ ಜಂಟಿ ದಾಳಿಯಲ್ಲಿ ISIS ನಾಯಕ ಅಬು ಖದಿಜಾ ಹತ

ಅಮೆರಿಕಾ ಮತ್ತು ಇರಾಕ್ ಸೇನೆಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ISIS ಉನ್ನತ ನಾಯಕ ಅಬು ಖದಿಜಾ ವಧೆಯಾಗಿರುವುದು ದೃಢಪಟ್ಟಿದೆ. ಅಮೆರಿಕಾ…

28 minutes ago

ತಲೆ ಕೂದಲಿಲ್ಲ ಎಂದು ಪತ್ನಿಯ ಕಿರುಕುಳ; ಬೇಸತ್ತ ಪತಿ ಆತ್ಮಹತ್ಯೆ..!

ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ಪತ್ನಿಯ ನಿರಂತರ ಅಪಹಾಸ್ಯ ಮತ್ತು ಕಿರುಕುಳಕ್ಕೆ ತಳಮಳಗೊಂಡ ಪತಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ…

33 minutes ago