ಉತ್ತರಕನ್ನಡ ಜಿಲ್ಲೆಯಲ್ಲಿ ಬರುವಂತಹ ಕದಂಬರನಾಡು ಬನವಾಸಿ ಹತ್ತಿರ ಇರುವ ತಿಗಣೆ ಎಂಬ ಗ್ರಾಮ ಈ ತಿಗಣೆ ಎಂಬ ಗ್ರಾಮದಲ್ಲಿ ಹಲವಾರು ಗ್ರಾಮಸ್ಥರು ತಮ್ಮ ಗದ್ದೆ ಜಮೀನುಗಳನ್ನು ಆಧಾರವಾಗಿಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ ಅದರಲ್ಲೂ ಗ್ರಾಮಸ್ಥರೆಲ್ಲರೂ ಸೇರಿ ತಮ್ಮ ತಮ್ಮ ಕೈಯಲ್ಲಾದಷ್ಟು ಹಣ ಹಾಕಿ ಗ್ರಾಮದಿಂದ ತಮ್ಮ ತಮ್ಮ ಜಮೀನು ಗದ್ದೆಗೆ ತಾವೇ ರಸ್ತೆ ನಿರ್ಮಿಸಿಕೊಂಡಿದ್ದರೂ
ಕಳೆದ 6 – 7 ತಿಂಗಳಿನ ಕೆಳಗೆ ಸ್ಥಳಿಯ ಗುತ್ತಿಗೆದಾರರು ಅಂದಾಜು 10 ಲಕ್ಷ ರೂ ಗಳಲ್ಲಿ ರಸ್ತೆ ಪುನರ್ ನಿರ್ಮಾಣ ಮಾಡಿದ್ದರು ಆದರೇ ಮೊದಲಿಗಿಂತಲೂ ಈಗ ಅವರು ಮಾಡಿರುವ ರಸ್ತೆಯಲ್ಲಿ ಒಂದು ದ್ವಿಚಕ್ರ ವಾಹನ ಓಡಾಡಲು ಹರಸಾಹಸ ಪಡುತ್ತಿದ್ದಾರೆ ನಡೆದುಕೊಂಡು ಓಡಾಡಲು ತುಂಬಾ ಕಷ್ಟವಾಗುತ್ತಿದೆ ಮಳೆಗಾಲದಲ್ಲಂತೂ ಮುಗದೆ ಹೋಯ್ತು 2 ಅಡಿಯಷ್ಟು ಕೆಸರಿನಿಂದ ತುಂಬಿದ ತಗ್ಗು ಗುಂಡಿಗಳು ನಿರ್ಮಾಣವಾಗಿವೆ ಕೆಲ ವಯಸ್ಸಾದ ಗ್ರಾಮಸ್ಥರು ಇಲ್ಲಿ ಜಮೀನುಗಳಿಗೆ ಹೋಗಲು ಭಯ ಪಡುತ್ತಿದ್ದಾರೆ ಕೂಡಲೇ ಅಧಿಕಾರಿಗಳು ಇದನ್ನು ಸರಿ ಮಾಡಿಸಿ ಗ್ರಾಮಸ್ಥರಿಗೇ ಅನುಕೂಲ ಮಾಡಿಕೊಡುತ್ತಾರಾ ಕಾದುನೋಡಬೇಕಾಗಿದೆ .
ವರದಿ : ಶ್ರೀಪಾದ್ ಹೆಗಡೆ.

error: Content is protected !!