ದಿನಾಂಕ: ೧೭/೦೬/೨೦೨೨ ರಂದು ಬೆಳಿಗ್ಗೆ ವಿ.ವಿ.ಪುರಂ ಠಾಣಾ ಪೊಲೀಸ್ ಸಿಬ್ಬಂದಿಗಳು ಠಾಣಾ ವ್ಯಾಪ್ತಿಯ ಯಾದವಗಿರಿಯ ಬ್ರಿಡ್ಞ್ ಬಳಿ ಶುಭೋದಯ ಪಾಯಿಂಟ್ ಕರ್ತವ್ಯದಲ್ಲಿದ್ದಾಗ, ನಂಬರ್ ಪ್ಲೇಟ್ ಇಲ್ಲದ ಒಂದು ಸ್ಕೂಟರ್‌ನಲ್ಲಿ ಬಂದ ೦೩ ಜನ ಬಾಲಕರನ್ನು ನಿಲ್ಲಿಸಿ ಪ್ರಶ್ನಿಸಲಾಗಿ ಸಮಂಜಸವಾದ ಉತ್ತರವನ್ನು ನೀಡದಿದ್ದಾಗ ಅನುಮಾನ ಬಂದು ವಾಹನವನ್ನು ಪರಿಶೀಲಿಸಲಾಗಿ ಸದರಿ ದ್ವಿಚಕ್ರ ವಾಹನವು ಠಾಣೆಯಲ್ಲಿ ದಾಖಲಾಗಿದ್ದ ಕಳುವು ಪ್ರಕರಣಕ್ಕೆ ಸಂಬಂಧಿಸಿದ್ದರಿಂದ ಸದರಿಯವರನ್ನು ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಬಾಲಕರು ಮೈಸೂರು ನಗರ ಮತ್ತು ಹಾಸನ ಜಿಲ್ಲಾ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ದ್ವಿ ಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದರ ಮೇರೆಗೆ ಸದರಿ ಕಾನೂನಿನ ಸಂಘರ್ಷಕ್ಕೆ ಒಳಗಾದ ೦೩ ಬಾಲಕರನ್ನು ವಶಕ್ಕೆ ಪಡೆದು, ಇವರಿಂದ ರೂ ೩,೨೫,೦೦೦/- ಬೆಲೆ ಬಾಳುವ ೫ ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ. ಈ ಪತ್ತೆ ಕಾರ್ಯದಿಂದ ಮೈಸೂರು ನಗರ ವಿ.ವಿ.ಪುರಂ ಪೊಲೀಸ್ ಠಾಣೆಯ-೦೧, ನರಸಿಂಹರಾಜ ಪೊಲೀಸ್ ಠಾಣೆಯ-೦೨, ಉದಯಗಿರಿ ಪೊಲೀಸ್ ಠಾಣೆಯ-೦೧ ಮತ್ತು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಟೌನ್ ಪೊಲೀಸ್ ಠಾಣೆಯ-೦೧ ಕಳುವು ಪ್ರಕರಣಗಳು ಪತ್ತೆಯಾಗಿರುತ್ತವೆ. ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿಸಿಪಿ, ಕೇಂದ್ರಸ್ಥಾನ ಅಪರಾಧ ಮತ್ತು ಸಂಚಾರ ವಿಭಾಗ ರವರಾದ ಶ್ರೀಮತಿ ಗೀತ ಎಂ.ಎಸ್, ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ನರಸಿಂಹರಾಜ ವಿಭಾಗದ ಎ.ಸಿ.ಪಿ ರವರಾದ ಶ್ರೀ ಶಿವಶಂಕರ್ ರವರ ಉಸ್ತುವಾರಿಯಲ್ಲಿ ವಿ.ವಿ.ಪುರಂ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಜಯಕುಮಾರ. ಎನ್ ಪಿ.ಎಸ್.ಐ ಶ್ರೀ. ಲೇಪಾಕ್ಷ. ಕೆ, ಎ.ಎಸ್.ಐ ಸಿದ್ದರಾಜು.ಹೆಚ್. ಸಿಬ್ಬಂದಿಗಳಾದ ರವಿಗೌಡ. ಎಸ್, ಚಾಮುಂಡಮ್ಮ, ಮಹೇಶ.ಎಸ್, ಪರಶುರಾಮ ರಾಠೋಡ, ಈರಣ್ಣ ಎನ್.ವಿ, ಉಮೇಶ ರವರುಗಳು ಮಾಡಿರುತ್ತಾರೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ: ಚಂದ್ರಗುಪ್ತ, ಐ.ಪಿ.ಎಸ್. ರವರು ಪ್ರಶಂಸಿಸಿರುತ್ತಾರೆ.

error: Content is protected !!