Crime

ಸರ್ಕಾರಿ ಕೆಲಸಕ್ಕಾಗಿ ಗಂಡನನ್ನೇ ಕೊಂದ ಪತ್ನಿ: ತನಿಖೆಯಲ್ಲಿ ಸತ್ಯ ಬಹಿರಂಗ

ಸತ್ಯ ಎಂದರೆ ಬೂದಿ ಮುಚ್ಚಿದ ಕೆಂಡದಂತೆ, ಸುಳ್ಳಿನ ಪರದೆ ಸರಿದರೆ ಅದೊಂದು ದಿನ ಹೊರಬರುತ್ತದೆ ಎನ್ನುವ ಮಾತಿಗೆ ತೆಲಂಗಾಣದ ನಲ್ಗೊಂಡದಲ್ಲಿ ನಡೆದ ಈ ಘಟನೆ ಜೀವಂತ ನಿದರ್ಶನವಾಗಿದೆ. ಸರ್ಕಾರಿ ಉದ್ಯೋಗದ ಆಸೆಗಾಗಿ ಪತ್ನಿಯೇ ಗಂಡನನ್ನು ಹತ್ಯೆ ಮಾಡಿದ್ದು, ಇದನ್ನು ಸಹಜ ಸಾವೆಂದು ಬಿಂಬಿಸಲು ಪ್ರಯತ್ನಿಸಿದ್ದಾಳೆ. ಆದರೆ, ಪೊಲೀಸ್‌ ತನಿಖೆ ಆಕೆಯ ಹುನ್ನಾರವನ್ನು ಬಯಲಾಗುವಂತೆ ಮಾಡಿದೆ.

ಸರ್ಕಾರಿ ಉದ್ಯೋಗಕ್ಕಾಗಿ ಪತಿಯನ್ನು ಕೊಂದ ಪತ್ನಿ

ನಲ್ಗೊಂಡ ಜಿಲ್ಲೆಯ ಉಸ್ಮಾನಪುರದಲ್ಲಿ ಖಲೀಲ್ ಹುಸೇನ್ (44) ಎಂಬ ವ್ಯಕ್ತಿ ಚಾರ್ಲಗೌರರಂ ಸರ್ಕಾರಿ ಪ್ರೌಢಶಾಲೆಯಲ್ಲಿ ಅಟೆಂಡರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ. ಸ್ವಲ್ಪ ಮಾನಸಿಕ ಸಮಸ್ಯೆ ಹೊಂದಿದ್ದ ಖಲೀಲ್, ಮದ್ಯಪಾನಕ್ಕೆ ಚಟ ಹೊಂದಿದ್ದನು. ಇದರಿಂದ ಬೇಸತ್ತಿದ್ದ ಪತ್ನಿ ಅಕ್ಸರ್ ಜಹಾನ್, ಗಂಡನ ಸಾವಿನಿಂದ ಸರ್ಕಾರದಿಂದ ಪರಿಹಾರ ಸಹಾಯ ಅಥವಾ ಗಂಡನ ಉದ್ಯೋಗವನ್ನು ತಾನು ಅಥವಾ ಮಕ್ಕಳು ಪಡೆಯಬಹುದು ಎಂಬ ಆಸೆಯಿಂದ ಪತಿಯನ್ನು ಹತ್ಯೆ ಮಾಡಲು ನಿರ್ಧರಿಸಿದಳು.

ರಚಿಸಿದ ಕುತಂತ್ರ

ಕಳೆದ ತಿಂಗಳು, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ, ಅಕ್ಸರ್ ಗಂಡನನ್ನು ಕುನಾನ್ ಸ್ಟ್ಯಾಂಡ್‌ನಿಂದ ತೀವ್ರವಾಗಿ ಹೊಡೆದಳು. ಪತಿ ತೀವ್ರ ಗಾಯಗೊಂಡು ಕುಸಿದು ಬಿದ್ದ ನಂತರ, ಇದನ್ನು ಸಹಜ ಸಾವು ಎಂದು ಬಿಂಬಿಸುವ ಯತ್ನ ಮಾಡಿದರು. ತಕ್ಷಣವೇ ಆತ ಆಸ್ಪತ್ರೆಗೆ ದಾಖಲೆಯಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ.

ಅನುಮಾನದಿಂದ ಸತ್ಯ ಬಹಿರಂಗ

ಮೃತ ಖಲೀಲ್ ಹುಸೇನ್ ಅವರ ತಾಯಿ ಮೊಹಮ್ಮದ್ ಬೇಗಂ ತಮ್ಮ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ತಕ್ಷಣ, ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಲು ಮುಂದಾದರು. ಮಾರ್ಚ್ 7ರಂದು ಬಂದ ವರದಿಯಲ್ಲಿ, ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಮರಣ ಸಂಭವಿಸಿದೆ ಎಂಬ ಆಘಾತಕಾರಿ ಸತ್ಯ ಹೊರಬಂದಿತು.

ಹೆಂಡತಿ ಬೇಹುಗಾರಿಕೆ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾಳೆ

ಪೋಲೀಸರು ಪತ್ನಿ ಅಕ್ಸರ್ ಜಹಾನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆಕೆ ಎಲ್ಲವನ್ನೂ ಒಪ್ಪಿಕೊಂಡಳು. “ನನ್ನ ಗಂಡನ ಕುಡಿತದಿಂದ ನಾನು ಮತ್ತು ನನ್ನ ಮಕ್ಕಳು ತೀವ್ರವಾಗಿ ಹಿಂಸೆಗೆ ಒಳಗಾಗುತ್ತಿದ್ದೆವು. ಅವನನ್ನು ಕೊಂದರೆ ಕಾಟ ತಪ್ಪುವುದು, ಜೊತೆಗೆ ಅವನ ಸರ್ಕಾರಿ ಕೆಲಸ ಮಕ್ಕಳಿಗೆ ದೊರೆಯಬಹುದು ಎಂಬ ಲಾಭದಾಸೆಯಿಂದ ಈ ಕೆಲಸ ಮಾಡಿದೆ,” ಎಂದು ಸತ್ಯ ಬಾಯಿ ಬಿಟ್ಟಿದ್ದಾಳೆ.

ಈ ಅಮಾನವೀಯ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಪೊಲೀಸರು ಆರೋಪಿ ಪತ್ನಿಯನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಭ್ರಷ್ಟರ ಬೇಟೆ

Recent Posts

18 ಕೋಟಿ ರೂಪಾಯಿಗೆ ಕನ್ಯತ್ವ ಹರಾಜು: ವಿವಾದಕ್ಕೆ ಕಾರಣವಾದ ವಿದ್ಯಾರ್ಥಿನಿಯ ನಿರ್ಧಾರ

ಲಂಡನ್‌ನ 22 ವರ್ಷದ ವಿದ್ಯಾರ್ಥಿನಿ ತನ್ನ ಕನ್ಯತ್ವವನ್ನು ಆನ್‌ಲೈನ್ ಹರಾಜಿನಲ್ಲಿ ಮಾರಾಟ ಮಾಡಿ, ಹಾಲಿವುಡ್ ನಟನಿಂದ 18 ಕೋಟಿ ರೂಪಾಯಿಗೆ…

10 minutes ago

ರಾಟ್‌ವೀಲರ್ ಹಾಗೂ ನಾಗರಹಾವಿನ ನಡುವೆ ಭೀಕರ ಹೋರಾಟ: ವಿಡಿಯೋ ವೈರಲ್!

ಬೇಸಿಗೆ ಆರಂಭವಾದ್ದರಿಂದ ಹಾವುಗಳು ತಮ್ಮ ಹುತ್ತಗಳನ್ನು ತೊರೆದು ತಂಪು ಪ್ರದೇಶಗಳತ್ತ ಸಾಗುತ್ತವೆ. ಇತ್ತೀಚೆಗೆ, ಒಂದು ಇಂತಹ ಘಟನೆ ಮನರಂಜನೆಯ ಜೊತೆಗೆ…

58 minutes ago

ಟಾಟಾ ಪಂಚ್ ನಜ್ಜುಗುಜ್ಜಾದರೂ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾದದ್ದು ಅದೃಷ್ಟ!

ಮಹಾರಾಷ್ಟ್ರದ ಥಾಣೆಯ ಕ್ಯಾಡ್ಬರಿ ಬ್ರಿಡ್ಜ್ ಫ್ಲೈಓವರ್‌ನಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಡಂಪರ್ ಟ್ರಕ್, ಟ್ರೈಲರ್ ಮತ್ತು ಟೆಂಪೊ ನಡುವೆ…

1 hour ago

ಡೊಮಿನಿಕನ್ ಗಣರಾಜ್ಯದಲ್ಲಿ ನಾಪತ್ತೆಯಾದ ಭಾರತೀಯ ಮೂಲದ ವಿದ್ಯಾರ್ಥಿನಿ: ತನಿಖೆಯಲ್ಲಿ ಹೊಸ ತಿರುವು

ಡೊಮಿನಿಕನ್ ಗಣರಾಜ್ಯದಲ್ಲಿ ಬೇಸಿಗೆ ರಜೆ ಕಳೆದ ವೇಳೆ ನಿಗೂಢವಾಗಿ ಕಾಣೆಯಾಗಿದ್ದ 20 ವರ್ಷದ ಭಾರತೀಯ ಮೂಲದ ಅಮೆರಿಕನ್ ವಿದ್ಯಾರ್ಥಿನಿ ಸುದೀಕ್ಷಾ…

1 hour ago

“ಭಾರತದಲ್ಲಿ ಮೆಚ್ಚಿದ ಅನುಭವ – ‘ಅಮೆರಿಕದಲ್ಲೂ ಇವೆಲ್ಲಾ ಇರಬೇಕಿತ್ತು’ ಎಂದ ಅಮೆರಿಕಾದ ಮಹಿಳೆ ಕ್ರಿಸ್ಟನ್ ಫಿಷರ್”

ನಾಲ್ಕು ವರ್ಷಗಳ ಹಿಂದೆ ಅಮೆರಿಕ (USA) ತೊರೆದು ಭಾರತ (India) ಗೆ ಸ್ಥಳಾಂತರಗೊಂಡ ಕ್ರಿಸ್ಟನ್ ಫಿಷರ್, ಈಗ ಭಾರತದ ಸಂಸ್ಕೃತಿ,…

1 hour ago

ಮಾಜಿ ಸಂಸದ ಡಿ.ಕೆ. ಸುರೇಶ್ ಹೆಸರಿನಲ್ಲಿ ವಂಚನೆ: ಸಿಡಿಆರ್‌ ಡೇಟಾ ಮಾರಾಟ ಮಾಡುತ್ತಿದ್ದ ಐಶ್ವರ್ಯಗೌಡ ಸೇರಿದಂತೆ ಇಬ್ಬರು ಬಂಧನ

ಮಾಜಿ ಸಂಸದ ಡಿ.ಕೆ. ಸುರೇಶ್‌ ಹೆಸರು ಬಳಸಿ ಜ್ಯುವೆಲ್ಲರಿ ಶಾಪ್ ಮಾಲಕರು ಹಾಗೂ ಉದ್ಯಮಿಗಳನ್ನು ವಂಚಿಸಿದ್ದ ಐಶ್ವರ್ಯಗೌಡ ಪ್ರಕರಣದಲ್ಲಿ ಹೊಸ…

2 hours ago